ಕರಾವಳಿ

ಅಳಪೆ ಉತ್ತರ ವಾರ್ಡಿನಲ್ಲಿ ಮಾಜಿ ಶಾಸಕ ಲೋಬೊರಿಂದ ದಿನಸಿ ಕಿಟ್ ವಿತರಣೆ.

Pinterest LinkedIn Tumblr

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊರಿಂದ ಮಂಗಳವಾರ ಅಳಪೆ ಉತ್ತರ ವಾರ್ಡಿನ ವ್ಯಾಪ್ತಿಯಲ್ಲಿರುವ ಕೆಂಬಾರ್, ಪಡೀಲ್, ನಿಡ್ಡೆಲ್, ಪ್ರಶಾಂತ್ ಭಾಗ್ ಹಾಗೂ ನೂಜಿ ಮುಂತಾದ ಕಡೆಗಳಲ್ಲಿ ಸುಮಾರು 200ಕ್ಕೂ ಮಿಕ್ಕಿ ಬಡ ಕುಟುಂಬದವರಿಗೆ ದಿನ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು.

ಬಳಿಕ ಸುದ್ದಿಗರರೊಂದಿಗೆ ಮಾತನಾಡುತ್ತಾ ಅವರು, ಈ ಒಂದು ವಾರ್ಡಿನಲ್ಲಿ ಬಹುತೇಕ ಮಂದಿ ಬಡವರು ಮತ್ತು ಕಾರ್ಮಿಕ ವರ್ಗದವರಾಗಿರುತ್ತಾರೆ. ಕೋವಿಡ್ ಲಾಕ್ ಡೌನ್ ನಿಂದಾಗಿ ಅವರ ಬದುಕು ದುಸ್ತರವಾಗಿದೆ. ಕೆಲಸವಿಲ್ಲದೇ ಜನರು ಕಂಗೆಟ್ಟಿದ್ದಾರೆ. ಬಹಳ ಪ್ರಯಾಸದಿಂದ ಅವರು ಜೀವನ ನಡೆಸುತ್ತಿದ್ದಾರೆ. ಇದನ್ನರಿತು ಕಾಂಗ್ರೆಸ್ ಪಕ್ಷ ಅವರಿಗೆ ಜೀವನ ಸಾಗಿಸಲು ಸ್ವಲ್ಪ ಮಟ್ಟಿನ ಸಹಾಯ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಡೆನಿಸ್ ಡಿಸಿಲ್ವ, ಶೋಭಾ ಕೇಶವ, ಹೆನ್ರಿ ಡಿಸೋಜಾ, ಟಿ. ಕೆ. ಸುಧೀರ್, ನೀರಜ್ ಪಾಲ್, ರಮಾನಂದ್ ಪೂಜಾರಿ, ಉದಯ್ ಕುಂದರ್, ಉಮೇಶ್ ನೂಜಿ, ರೀತೇಶ್, ಡೊನಿ ಡಿಸಿಲ್ವ, ಪ್ರವೀಣ್ ರೇಗೊ, ಸ್ಟಾನಿ ಪಿಂಟೋ, ರಾಜೇಶ್ ಮಿಸ್ಕಿತ್, ಜೋಸ್ಸಿ ಪಿಂಟೋ, ಬ್ರೇಷನ್ ಡಿಸೋಜಾ, ಶೋನಿತ್ ಬಂಗೇರ, ನಬಿಲ್, ಲತೇಶ್, ವಿಕ್ಟರ್, ಸವಾನ್, ಯಶವಂತ ಪ್ರಭು, ಆಸೀಫ್ ಮೊದಲಾದವರು ಉಪಸ್ಥಿತರಿದ್ದರು.

Comments are closed.