ಕರಾವಳಿ

ಪನ್ವೆಲ್ ಮಹಾನಗರ ಪಾಲಿಕೆಯ ಸಭಾಪತಿ ಸಂತೋಷ್.ಜಿ.ಶೆಟ್ಟಿ ನೇತೃತ್ವದಲ್ಲಿ ಕೊರೋನ ಲಸಿಕರಣ

Pinterest LinkedIn Tumblr

ಮುಂಬಯಿ : ಪನ್ವೆಲ್ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಪನ್ವೆಲ್ ಮಹಾನಗರ ಪಾಲಿಕೆಯ ಸಭಾಪತಿ ನ್ಯೂ ಪನ್ವೆಲ್ ನಗರ ಸೇವಕ ಸಂತೋಷ್ ಜಿ. ಶೆಟ್ಟಿ ನೇತೃತ್ವದಲ್ಲಿ ಪನ್ವೆಲ್ ಪರಿಸರದ ನಾಗರಿಕರಿಗೆ ಕೊರೋನ ಲಸಿಕೆ ನೀಡಲಾರಂಬಿಸಿದೆ.

ನ್ಯೂ ಪನ್ವೆಲ್ ನಗರ ಸೇವಕ ಸಂತೋಷ್ ಜಿ. ಶೆಟ್ಟಿ

ಪನ್ವೆಲ್ ಕರ್ನಾಟಕ ಸಂಘದ ತಳಮಹಡಿಯಲ್ಲಿ ಕಳೆದ ಬುಧವಾರದಿಂದ 45ವರ್ಷದ ಮೇಲ್ಪಟ್ಟವರಿಗೆ ಪ್ರಥಮ ಹಾಗೂ ದ್ವೀತೀಯ ಡೊಸ್ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭಗೊಂಡಿದೆ.

ಪನ್ವೆಲ್ ಕರ್ನಾಟಕ ಸಂಘದ ಕಾರ್ಯಕರ್ತರುಗಳ ಪರಿಶ್ರಮದಿಂದ ಯಶಸ್ವಿಯಾಗಿ ದಿನಕ್ಕೆ 300 ಕ್ಕೂ ಮಿಕ್ಕಿ ಸರ್ವ ಸಮಾಜ ಬಾಂಧವರು ಲಸಿಕೆ ಪಡೆಯುತ್ತಿರುವರು.

ಸಂತೋಷ್ ಜಿ. ಶೆಟ್ಟಿ ಯವರು ಕೊರೋನಾದ ಸಂದರ್ಭದಲ್ಲಿ ತನ್ನ ಕ್ಷೇತ್ರದ ನಾಗರಿಕರಿಗೆ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿದ್ದು ಈ ಬಾರಿ ಮಹಾನಗರ ಪಾಲಿಕೆಯ ಆಯೋಜನೆಯಲ್ಲಿ ಪ್ರತೀದಿನ 300 ಮಂದಿಗೆ ಲಸಿಕೆಯನ್ನು ನೀಡಲಾಗುತ್ತದೆ. ಅಲ್ಲದೆ ಬಂದವರಿಗೆ ಮಧ್ಯಾಹ್ನದ ಬೋಜನ ಹಾಗೂ ಉಪಹಾರದ ಸೌಲಭ್ಯವನ್ನು ಇವರ ತಂಡದವರು ನೀಡುತ್ತಿರುವರು.

ಸಂತೋಷ್ ಜಿ. ಶೆಟ್ಟಿ ಈಗಾಗಲೇ ಮೂರು ಬಾರಿ ಸೊಲಿಲ್ಲದ ಸರದಾರ ಎಂಬಂತೆ ತನ್ನ ಪನ್ವೆಲ್ ನ ಮಹಾನಗರ ಪಾಲಿಕೆಯ ನಗರ ಸೇವಕರಾಗಿ ನ್ಯೂ ಪನ್ವೆಲ್ ನಲ್ಲಿ ವಿಜಯ ಸಾದಿಸಿದ್ದು, ಸ್ಥಳೀಯ ನಾಗರಿಕರಿಗೆ ಮಾತ್ರವಲ್ಲದೆ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವರು. ಕನ್ನಡಿಗರಿಗೆ ಹಲವು ರೀತಿಯ ಸಹಕಾರವನ್ನು ನೀಡುತ್ತಿರುವರು. ತನ್ನ ಮಿತ್ರರು ಹಾಗೂ ವಿವಿಧ ಸಂಘಟನೆಗಳ ಸಹಾಯದಿಂದ ತನ್ನ ಕ್ಷೇತ್ರದ ಜನರಿಗೆ ಸಹಕರಿಸುತ್ತಿರುವರು.

ಸಂತೋಷ ಶೆಟ್ಟಿ ಅವರು ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸುತ್ತಾ ನ್ಯೂ ಪನ್ವೆಲ್ ಪರಿಸರದ ತುಳು ಕನ್ನಡಿಗರಿಗೆ ಕೋವಿಡ್ ಲಸಿಕೆ ಪಡೆಯುವಲ್ಲಿ ಬೆಳಿಗ್ಗೆ ಕರ್ನಾಟಕ ಸಂಘದ ಕಾರ್ಯಾಲಯಕ್ಕೆ ಬಂದು ನೊಂದಾಯಿಸಬೇಕು ದಿನಕ್ಕೆ 250 ರಿಂದ 300 ಜನರಿಗೆ ಲಸಿಕೆಯನ್ನು ನೀಡಲಾಗುತ್ತದೆ. ಕರ್ನಾಟಕ ಸಂಘದ ಕಾರ್ಯಾಲಯಕ್ಕೆ ಬೆಳಿಗ್ಗೆ ಬೇಗ ಬಂದು ನೋಂದಾಯಿಸಿಕೊಂಡರೆ ಲಸಿಕೆ ಲಭ್ಯವಾಗುತ್ತದೆ ಬೇರೆ ಯಾವುದೇ ರೀತಿಯಲ್ಲಿ ಹೊಂದಾಣಿಕೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಭಾಸ್ಕರ್ ಡಿ ಶೆಟ್ಟಿ ಪದ್ಮ, ಅಧ್ಯಕ್ಷ ರಾದ ಕೋಲ್ಪೆ ಧನಂಜಯ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ಶೆಟ್ಟಿ ಕುತ್ಯಾರ್ , ಕೋಶಾಧಿಕಾರಿ ಸುರೇಶ್ ರಾವ್, ಯುವ ವಿಭಾಗದ ಕಾರ್ಯಾಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಕಾಪು, ಸಮಾಜ ಸೇವಕ ಬಿ ಕೆ ಶೆಟ್ಟಿ, ಶಶಿ ಶೆಟ್ಟಿ, ಸುಧಾಕರ್ ಪೂಜಾರಿ, ಸುದರ್ಶನ್ ಶೆಟ್ಟಿ, ಸೀತಾರಾಮ್ ಶೆಟ್ಟಿ, ರಾಮಚಂದ್ರ ಗೌಡ, ಹರೀಶ್ ಶೆಟ್ಟಿ ನೀಲ್ ಕಮಲ್ ಮತ್ತು ಇತರ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಸಹಕರಿಸುತ್ತಿರುವರು.

ಚಿತ್ರ, ವರದಿ : ದಿನೇಶ್ ಕುಲಾಲ್

Comments are closed.