ಕರಾವಳಿ

ಕೋಟ ಸಮೀಪ ಗುಳ್ಳಾಡಿಯ ಮನೆಯೊಂದರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರು ಕದ್ದ ಗೋ ಕಳ್ಳರು..!

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟ ಸಮೀಪದ ಗುಳ್ಳಾಡಿ ಗ್ರಾಮದ ಮಂಜಿ ಎನ್ನುವವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 3 ತಿಂಗಳ ಗರ್ಭ ಧರಿಸಿದ್ದ ಜಾನುವಾರನ್ನು ಗೋ ಕಳ್ಳರು ಕದ್ದೊಯ್ದ ಘಟನೆ ‌ನಡೆದಿದೆ. ರಾತ್ರಿ ಸಮಯದಲ್ಲಿ ಕೊಟ್ಟಿಗೆ ನುಗ್ಗಿ ಹಗ್ಗವನ್ನು ಕೊಯ್ದು ಗೋವನ್ನು ಕಳವು ಮಾಡಲಾಗಿದೆ.

ಮಂಜಿಯವರು ತೀರ ಬಡ ಕುಟುಂಬದವರಾಗಿದ್ದು ತಮ್ಮ ಸೊಸೆ ಮತ್ತು ಮೊಮ್ಮಗಳೊಂದಿದೆಗೆ ವಾಸವಿದ್ದು ತಮ್ಮ ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ನಂಬಿಕೊಂಡಿದ್ದರು‌. ಆದರೆ ಇದೀಗಾ ಇದ್ದೋಂದು ಗೋವು ಕಳ್ಳತನವಾದುದರಿಂದ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಈ ಕುರಿತು ಕೋಟ ಪೋಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

ಗೋ ಕಳ್ಳರ ಶೀಘ್ರ ಬಂಧನಕ್ಕೆ ಕುಂದಾಪುರ ಬಿಜೆಪಿ ಯುವಮೋರ್ಚಾ ಆಗ್ರಹ..
ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸಲಾಗಿದೆ.ಕಾಯ್ದೆ ಜಾರಿಯಾದ ನಂತರವೂ ಕೂಡ ಗೋ ಕಳ್ಳತನ ಪ್ರಕರಣ ಹೆಚ್ಚುತ್ತಿದೆ. ಗೋ ಕಳ್ಳರಿಗೆ ಕಾನೂನಿನ ಭಯವೂ ಇಲ್ಲದಾಗಿದ್ದು ಸ್ಥಳೀಯ ದಲ್ಲಾಳಿಗಂಳಿದಲೇ ಇಂತಹ ಪ್ರಕರಣ ಹೆಚ್ಚುತ್ತಿದೆ. ಗೋ ಕಳ್ಳರನ್ನು ಒಂದು ವಾರದಲ್ಲಿ ಬಂಧಿಸಿ ಈ ಭಾಗದಲ್ಲಿ ಗೋ ಕಳ್ಳತನವನ್ನು ಮಟ್ಟ ಹಾಕಬೇಕೆಂದು ಕೋಟ ಪೋಲೀಸ್ ಠಾಣಾಧಿಕಾರಿಗಳಲ್ಲಿ ಕುಂದಾಪುರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು ಮನವಿ ಮಾಡಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.