ಕರ್ನಾಟಕ

ಪೊಗರು ಚಲನಚಿತ್ರ ಪ್ರದರ್ಶನ ನಿಲ್ಲಿಸಲು ಸಂಸದೆ ಶೋಭಾ ಒತ್ತಾಯ | ಚಿತ್ರತಂಡದ ವಿರುದ್ಧ ಆಕ್ರೋಷ

Pinterest LinkedIn Tumblr

ಉಡುಪಿ: ಪೊಗರು ಚಲನಚಿತ್ರ ಹಿಂದೂ ಸಮಾಜದ ಭಾವನೆಗೆ ಧಕ್ಕೆ ಮಾಡಿದೆ. ಹಿಂದೂ ಸಂಪ್ರದಾಯ, ಪೂಜಾ ಪದ್ಧತಿ, ಅರ್ಚಕರಿಗೆ ಅವಮಾನ ಮಾಡಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಗರು ಸಿನಿಮಾದಿಂದ ಶ್ರದ್ಧೆ, ಆಚಾರ-ವಿಚಾರಕ್ಕೆ ಧಕ್ಕೆಯಾಗಿದೆ. ಮನೆಯಲ್ಲಿ ಪೂಜೆ ಆಗಬೇಕೆಂದರೆ ಬ್ರಾಹ್ಮಣರನ್ನು ಕರೆಯುತ್ತಾರೆ. ಆಕ್ಷೇಪಾರ್ಹ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ ಹಾಕಿಲ್ಲ ಯಾಕೆ? ಸೆನ್ಸಾರ್ ಮಂಡಳಿಯವರ ಈ ನಡೆ ಸಂಶಯಕ್ಕೆ ಎಡೆಮಾಡಿದೆ. ಯಾರದ್ದೋ ಭಾವನೆಗಳಿಗೆ ಧಕ್ಕೆ ಮಾಡಿ ಪ್ರಚಾರ ಗಿಟ್ಟಿಸಿಕೊಂಡು ಹಣ ಮಾಡಬಹುದು ಅಂದುಕೊಂಡಿರಬಹುದು ಎಂದು ಸಂಸದೆ ಶೋಭಾ ಹೇಳಿದರು.

ಪೊಗರು ಚಲನಚಿತ್ರ ಪ್ರದರ್ಶನಕ್ಕೆ ನನ್ನ ವಿರೋಧ ಇದೆ, ಚಿತ್ರವನ್ನು ವಾಪಸ್ ಪಡೆದು ಸೆನ್ಸಾರ್ ಮಾಡಿ. ಪ್ರದರ್ಶನ ನಿಲ್ಲಿಸಲು ಕೂಡಲೇ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತಿದ್ದೇನೆ. ಚಿತ್ರದ ಕೆಲ ದೃಶ್ಯಗಳನ್ನು ಕಂಡು ನನಗೆ ಬಹಳ ನೋವಾಗಿದೆ ಎಂದರು.

ಈ ಚಿತ್ರತಂಡ ಈ ರೀತಿ ದಾರ್ಷ್ಟ್ಯವನ್ನು ಬೇರೆ ಧರ್ಮಗಳಿಗೆ ತೋರಿಸಲು ಧೈರ್ಯ ಇದೆಯೇ, ಇದು ಕೇವಲ ಬ್ರಾಹ್ಮಣರು ವಿರೋಧಿಸುವ ವಿಚಾರ ಅಲ್ಲ. ಪೂರ್ಣ ಹಿಂದೂ ಸಮಾಜ ಎದ್ದು ನಿಂತು ವಿರೋಧಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

Comments are closed.