ಕರಾವಳಿ

ಬ್ತೈನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕಿಗೆ ತೊಕ್ಕೊಟ್ಟು ಟಿಪಿಎಲ್ ಸಂಸ್ಥೆಯಿಂದ ಚಿಕಿತ್ಸೆಗೆ ಧನ ಸಹಾಯ

Pinterest LinkedIn Tumblr

ಮಂಗಳೂರು :ಬ್ತೈನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕಿಗೆ ತೊಕ್ಕೊಟ್ಟು ಪ್ರೀಮಿಯರ್ ಲೀಗ್ TPL ಸಂಸ್ಥೆ ಯವರು, ಚಿಕಿತ್ಸೆಗೆ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತೊಕ್ಕೊಟ್ಟು, ಚೆಂಬುಗುಡ್ಡೆಯ ಶ್ರೀಮತಿ ಧನಲಕ್ಷಿಯವರ 14 ವರ್ಷ ಪ್ರಾಯದ ಹೆಣ್ಣು ಮಗಳು ತೃಷಾ ಬ್ತೈನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ದೇರಳಕಟ್ಟೆ, ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಮಗುವಿನ ಚಿಕಿತ್ಸೆಗಾಗಿ ಈಗಾಗಲೆ 3ಲಕ್ಷಕ್ಕೂ ಮಿಗಿಲಾಗಿ ಖರ್ಚಾಗಿದ್ದು, ದಾನಿಗಳು, ಸಂಘ, ಸಂಸ್ಥೆಯವರು ತಮ್ಮ ಕೈಲಾದ ಸಹಾಯವನ್ನು ನೀಡುತ್ತಿದ್ದಾರೆ. ಇನ್ನೂ ಸುಮಾರು 5 ಲಕ್ಷಕ್ಕೂ ಮಿಗಲಾಗಿ ಖರ್ಚು ಬೇಕಾಗಬಹುದು.

ವಿಷಯ ತಿಳಿದ ತೊಕ್ಕೊಟ್ಟು ಪ್ರೀಮಿಯರ್ ಲೀಗ್ TPL ಸಂಸ್ಥೆ ಯವರು, ತಮ್ಮ ಈ ಸಲದ ಉಳಿಕೆ ಹಣ ರೂ. 51,000/- (ಐವತ್ತೊಂದು ಸಾವಿರ)ವನ್ನು ದೇರಳಕಟ್ಟೆ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ತೆರಳಿ ಮಗುವಿನ ಚಿಕಿತ್ಸೆಗಾಗಿ, ತಾಯಿ ಶ್ರೀಮತಿ ಧನಲಕ್ಷ್ಮಿ ಯವರಿಗೆ ಒಪ್ಪಿಸಿ ಮಾನವೀಯ ಸಹಾಯ ನೀಡಿದರು.

TPL ನ ಪ್ರಮುಖರು ಬಿ. ಎಂ. ಕಾಂಪ್ಲೆಕ್ಸ್ ನ ಮಾಲಕ ಶ್ರೀ ಉಮೇಶ್, ಉದ್ಯಮಿ ಶ್ರೀ ಹೆನ್ರಿ ಡಿಸೋಜ, ಮಾಜಿ ಕೌನ್ಸಿಲರ್ ಶ್ರೀ ಭಗವಾನ್ ದಾಸ್ ಮತ್ತು ತಂಡದ ಸದಸ್ಯರು ಈ ಸಂದರ್ಭ ಜತೆಗಿದ್ದರು.

ಈ ಹೆಣ್ಣು ಮಗಳ ಚಿಕಿತ್ಸಾ ವೆಚ್ಚಕ್ಕಾಗಿ ಸಹೃದಯಿ ದಾನಿಗಳು, ಶ್ರೀಮತಿ ಧನಲಕ್ಷ್ಮಿ ಇವರ ಖಾತೆ ಸಂಖ್ಯೆ (A/C no.) 520101228953770 / IFSC code UBINO900788 / Corporation Bankಗೆ ತಮ್ಮ ನೆರವಿನ ಸಹಾಯಹಸ್ತ ನೀಡಬೇಕಾಗಿ ಮನೆಯವರು ಮನವಿ ಮಾಡಿದ್ದಾರೆ.

Comments are closed.