ಕರಾವಳಿ

ಮಂಗಳೂರು : ದೀಪಕ್ ಕುಮಾರ್ ಕೊಲೆಯತ್ನ – ಅಪ್ರಾಪ್ತ ಬಾಲಕ ಸಹಿತಾ ಮೂವರ ಬಂಧನ

Pinterest LinkedIn Tumblr

ಮಂಗಳೂರು : ನಗರದ ಲಾಲ್ ಭಾಗ್ ಸಮೀಪ ದೀಪಕ್ ಕುಮಾರ್ ಎಂಬಾತನ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಉರ್ವಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕುದ್ರೋಳಿ ನಿವಾಸಿಗಳಾದ ಮೊಹಮ್ಮದ್‌ ಫಾಯಿಕ್ (18), ಮೊಹಮ್ಮದ್‌ ಶಾಹಿಲ್ ( 19 )ಮತ್ತು ಇನ್ನೋರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರ ವಿಶೇಷ ತಂಡ ಬಂದಿಸಿದೆ.

ದಿನಾಂಕ 07-02-2021 ರಂದು ರಾತ್ರಿ 09.20 ಗಂಟೆ ಸುಮಾರಿಗೆ ದೀಪಕ್ ಕುಮಾರ್ ಎಂಬವರಿಗೆ ಲಾಲ್ ಬಾಗ್ ಬಳಿ ಮೂರು ಜನ ಅಪರಿಚಿತರು ದ್ವಿ ಚಕ್ರ ವಾಹನದಲ್ಲಿ ಬಂದು ಎಡಕೈಯ ಮುಂಗೈಗೆ ಯಾವುದೋ ಮಾರಕಾ ಆಯುಧದಿಂದ ಇರಿದು ರಕ್ತದ ಗಾಯ ಉಂಟು ಮಾಡಿರುವ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿತ್ತು.

ಅರೋಪಿಗಳ ಪತ್ತೆಗಾಗಿ ಡಿಸಿಪಿ ವಿನಯ್ ಗಾಂವ್ಕರ್ ರವರ ಮಾರ್ಗದರ್ಶನಲ್ಲಿ ಎಸಿಪಿ ಜಗದೀಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉರ್ವಾ ಠಾಣಾ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಶರೀಫ್, ಪಿ.ಎಸ್.ಐಗಳಾದ. ಶ್ರೀಮತಿ ಶ್ರೀಕಲಾ, ಕೆಟಿ ಧನರಾಜ್, ಬರ್ಕೆ ಪೊಲೀಸ್ ಠಾಣೆ ಪಿ.ಎಸ್.ಐ ಹಾರುನ್ ಅಖ್ತರ್, ಪಿ.ಎಸ್.ಐನಾಗರಾಜ್ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಬಾಗಿಯಾದ ಇತರರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Comments are closed.