ಕರಾವಳಿ

ಹಿಂದು ವಿರೋಧಿ ಚಟುವಟಿಕೆ ಖಂಡಿಸಿ ನಾಳೆ ಮಂಗಳೂರಿನಲ್ಲಿ ಬೃಹತ್ ಹಿಂದು ಜನ ಜಾಗೃತಿ ಸಭೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.13 : ಮಂಗಳೂರಿನಲ್ಲಿ ನಡೆಯುತ್ತಿರುವ ಹಿಂದು ವಿರೋಧಿ ಚಟುವಟಿಕೆ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷದ್ ಹಾಗು ಬಜರಂಗ ದಳಯದ ವತಿಯಿಂದ ನಾಳೆ್ ಮಂಗಳೂರಿನಲ್ಲಿ ಬೃಹತ್ ಹಿಂದು ಜನ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ತಿಳಿಸಿದ್ದಾರೆ.

ಮಂಗಳೂರಿನ ಕರಾವಳಿ ಭಾಗದಲ್ಲಿ ನಿರಂತರವಾಗಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಮತ್ತು ಹಿಂದು ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದು ಇದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೋಳಾರ ಪ್ರಖಂಡವತಿಯಿಂದ 14/02/2021 ಭಾನುವಾರ ಬೆಳಿಗ್ಗೆ 10 : 00 ಗಂಟೆಗೆ ಮಂಗಳಾದೇವಿ ದೇವಸ್ಥಾನ ಬಳಿ ಹಿಂದು ಜನ ಜಾಗೃತಿ ಸಭೆ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿಈ ಜನ ಜಾಗೃತಿ ಸಭೆಯಲ್ಲಿ ಭಾಗವಹಿಸುವ ಮೂಲಕ ಹಿಂದು ವಿರೋಧಿ ಚಟುವಟಿಕೆ ವಿರುದ್ಧ ನಡೆಯುತ್ತಿರುವ  ಜನ ಜಾಗೃತಿ ಸಭೆಗೆ ಬೆಂಬಲ ನೀಡಬೇಕೆಂದು ಪ್ರದೀಪ್ ಸರಿಪಲ್ಲ ಮನವಿ ಮಾಡಿದ್ದಾರೆ.

Comments are closed.