ಕರಾವಳಿ

ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ ಮಾಜಿ ಕಾರ್ಪೊರೇಟರ್

Pinterest LinkedIn Tumblr

ಮಂಗಳೂರು / ಸುರತ್ಕಲ್.ಫೆಬ್ರವರಿ.08: ತುಳುನಾಡಿನ ಸಮಸ್ತ ಬಿಲ್ಲವರು ಮಾತ್ರವಲ್ಲದೆ ವಿವಿಧ ಜಾತಿ ಮತಗಳ ಜನರು ಆರಾಧಿಸಿಕೊಂಡು ಬಂದಿರುವ ಕೋಟಿ ಚೆನ್ನಯ ಎಂಬ ವೀರ ಪುಣ್ಯಪುರುಷರ ಹಾಗು ಬಿಲ್ಲವ ಮುಖಂಡ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರ ಬಗ್ಗೆ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ.

ಅವಹೇಳನಕಾರಿ ಮಾತುಗಳನ್ನಾಡಿರುವ ಜಗದೀಶ್ ಅಧಿಕಾರಿ ಅವರ ಮುಖಕ್ಕೆ ಯಾರು ಮಸಿ ಬಳಿಯುತಾರೆ ಅವರಿಗೆ ಒಂದು ಲಕ್ಷ ರೂ. ಗಳನ್ನು ನೀಡುವುದಾಗಿ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.

ಮೂರು ದಿನದ ಒಳಗಾಗಿ ಜಗದೀಶ್ ಅಧಿಕಾರಿ ಅವರು ನಮ್ಮ ಗರಡಿಗೆ ಆಗಮಿಸಿ ಕ್ಷಮೆ ಕೇಳಬೇಕು, ಮೂರು ದಿನಗಳ ಒಳಗೆ ಕ್ಷಮೆ ಕೇಳದಿದ್ದರೆ ಬಿಲ್ಲವ ಸಮುದಾಯದ ಯಾರಾದರೂ ಪ್ರಥಮವಾಗಿ ಅವರ ಮುಖಕ್ಕೆ ಮಸಿ ಬಳಿದರೆ ಅವರಿಗೆನಾನು ಒಂದು ಲಕ್ಷ ರೂ. ನಗದು ಬಹುಮಾನ ನೀಡುತ್ತೇನೆ” ಎಂದು ಹೇಳಿರುವ ವಿಡಿಯೋವನ್ನು ಅವರು ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಜಗದೀಶ್ ಅಧಿಕಾರಿ

ಬಿಲ್ಲವ ಸಮುದಾಯದ ಯುವಕರನ್ನು ಚುನಾವಣೆ ಬಂದಾಗ ತಮಗಿಷ್ಟ ಬಂದಂತೆ ತಮ್ಮ ಲಾಭಕ್ಕೋಸ್ಕರ ಬಳಸಿಕೊಂಡು ಬಳಿಕ ಅಧಿಕಾರದ ವಿಷಯ ಬಂದಾಗ ದೂರ ತಳ್ಳುವ ಬಿಜೆಪಿ ಮುಖಂಡರು ಬಿಲ್ಲವ ಸಮುದಾಯ ಮತ್ತು ಆರಾಧ್ಯ ಶಕ್ತಿಗಳ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಬಿಲ್ಲವ ಯುವಕರನ್ನು ರಾಜಕೀಯವಾಗಿ ಬಳಸಿಕೊಂಡು ಬಳಿಕ ಅವರು ಜೈಲಿಗೆ ಹೋಗುವಂತೆ ಮಾಡುವ ಇಂತಹ ರಾಜಕಾರಣಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು. ಬಿಲ್ಲವ ಯುವಕರು ಪ್ರತೀ ಬಾರಿ ಹರಕೆಯ ಕುರಿಗಳಾಗಿ ಮತೀಯ ದ್ವೇಷ, ಕೋಮು ಗಲಭೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಸಂಘಟನೆ ಧರ್ಮಕ್ಕೆ ಪೂರಕವಾಗಿರಬೇಕು. ಆದರೆ ಇಂತವರಿಂದ ಸಂಘಟನೆಗಳು ಅದರ ಅಸ್ಥಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಅವರು ದೂರಿದ್ದಾರೆ.

ಪೂಜಾರಿ, ಪೂಜಾರಿ ಎಂದು ದಿನಾನಿತ್ಯ ಧ್ಯಾನ ಮಾಡುತ್ತಾ ಪೂಜಾರಿಯವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅನ್ಯಾಯವಾದುದ್ದಕ್ಕೆ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದೆ ಎಂದು ಹೇಳುತ್ತಿದ್ದ ಈಗಿನ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಈಗ ಎಲ್ಲಿದ್ದಾರೆ.

ತಮ್ಮ ರಾಜಕೀಯ ಗುರುಗಳಾದ ಬಿ.ಜನಾರ್ಧನ ಪೂಜಾರಿಯವರ ಬಗ್ಗೆ ಹಾಗು ಸಮಸ್ತ ಬಿಲ್ಲವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ತಮ್ಮದೇ ಪಕ್ಷದ ಮುಖಂಡನ ಬಗ್ಗೆ ಏಕೆ ಒಂದು ಮಾತನ್ನು ಆಡುತ್ತಿಲ್ಲ ಎಂದು ಪ್ರತಿಭಾ ಕುಳಾಯಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.

Comments are closed.