ಮಂಗಳೂರು ಜನವರಿ.08 : ಡಿಸಂಬರ್ 30 ರಂದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ದಿನ ಬೆಳ್ತಂಗಡಿ ತಾಲೂಕಿನ ಉಜಿರೆಯ ಮತ ಎಣಿಕಾ ಕೇಂದ್ರದ ಹೊರಗೆ ಎಸ್ಡಿಪಿಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದಾಗ ನೈಜವಾಗಿ ಕಾರ್ಯಕರ್ತರು ಎಸ್ಡಿಪಿಐ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.
ಆ ಸಮಯದಲ್ಲಿ ಕನ್ನಡ ಟಿವಿ ಮಾಧ್ಯಮವೊಂದು ಎಸ್ಡಿಪಿಐ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಸುದ್ದಿಯೊಂದನ್ನು ಪ್ರಕಟಿಸಿದೆ. ಆ ಕೂಡಲೇ ನಮ್ಮ ಪಕ್ಷದ ಸ್ಥಳೀಯ ನಾಯಕರು ಬೆಳ್ತಂಗಡಿ ಠಾಣೆಯಲ್ಲಿ ಟಿವಿ ಮಾಧ್ಯಮದ ವಿರುದ್ಧ ದೂರು ಕೊಟ್ಟರೂ ದೂರು ದಾಖಲಿಸಲು ನಿರಾಕರಿಸಿದ ಪೋಲಿಸರು ಕೆಲವ ಒತ್ತಡಕ್ಕೆ ಮಣಿದು ರಾತ್ರೋ ರಾತ್ರಿ ಅಮಾಯಕರಾದ 12 ಮಂದಿ ಎಸ್ಡಿಪಿಐ ಕಾರ್ಯಕರ್ತರ ಮನೆಗೆ ನುಗ್ಗಿ ಅವರನ್ನು ಅಮಾನುಷವಾಗಿ ಬಂದಿಸಿ ಠಾಣೆಯಲ್ಲಿ ಕೂರಿಸಿದ್ದರು.
ಈ ಬಗ್ಗೆ ನಮ್ಮ ನಾಯಕರು ಹಾಗೂ ಬಂದನಕ್ಕೊಳಗಾದ ಯುವಕರ ಮನೆಯವರು ಠಾಣಾಧಿಕಾರಿಗಳು ಹಾಗೂ ಉನ್ನತ ಪೋಲಿಸ್ ಅಧಿಕಾರಿಗಳನ್ನು ವಿಚಾರಿಸಿದಾಗ ನಮಗೆ ಮೇಲಿನಿಂದ ಒತ್ತಡಗಳಿವೆ ನಾವು ಅಸಹಾಯಕರಾಗಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.
ಅದೇ ದಿನ 3 ಮಂದಿಯ ಮೇಲೆ ದೇಶದ್ರೋಹದ ಕೇಸು ದಾಖಲಿಸುವ ಮೂಲಕ ಪೋಲಿಸರು ಅಮಾಯಕರ ಯುವಕರನ್ನು ಜೈಲಿಗಟ್ಟಿದರು. ಅನಂತರ ನಾವು ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ಹಾಗೂ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಪೋಲಿಸರ ಪಕ್ಷಪಾತ ಧೋರಣೆಯನ್ನು ಬಲವಾಗಿ ಖಂಡಿಸಿದೆವು. ಪ್ರಕರಣವನ್ನು ಪೋಲಿಸರು ಪ್ರಾಮಾಣಿಕವಾಗಿ ತನಿಖೆಯ ಮೂಲಕ ಬಯಲಿಗೆಲೆಯಬೇಕೆಂದು ಒತ್ತಾಯಿಸಿದೆವು.
ಈ ಬಗ್ಗೆ ಪೋಲಿಸ್ ಇಲಾಖೆ ಆ ನೈಜ ಆರೋಪಿಗಳ ಮೆಲೆ ಕಾನೂನು ಕ್ರಮ ಕೈಗೊಳ್ಳಲು ನಾವು ದೂರು ನೀಡಿದರೂ ಪೋಲಿಸರು ಆರೋಪಿಗಳ ಬಗ್ಗೆ ಗಂಬೀರವಾಗಿ ಪರಿಗಣಿಸದೇ ಸಂಘಪರಿವಾರದ ಕೈಗೊಂಬೆಯಂತೆ ದ್ವಿಮುಖ ದೋರಣೆಯನ್ನು ತೋರಿದ್ದಾರೆ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ.
ಅಮಾಯಕ ಯುವಕರ ಮೇಲೆ ದಾಖಲಿಸಿದ ಸುಳ್ಳು ಮೋಕದ್ದಮೆಯನ್ನು ಕೈಬಿಡಬೇಕು, ಹಾಗೂ ನೈಜ ಆರೋಪಿಗಳನ್ನು ಕೂಡಲೇ ಬಂದಿಸಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಎಸ್ಡಿಪಿಐ ಪಕ್ಷ ಹಾಗೂ ನಾಗರಿಕರು ಜನವರಿ 6 ರಂದು ಬೆಳ್ತಂಗಡಿ ಠಾಣೆಯ ಮುಂಬಾಗದಲ್ಲಿ ಪ್ರತಿಭಟಣೆಯನ್ನು ಹಮ್ಮಿಕೊಂಡಿತು.
ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಉನ್ನತ ಪೋಲಿಸ್ ಅಧಿಕಾರಿಗಳು ಆರೋಪಿಗಳನ್ನು ನಾಲ್ಕು ದಿನಗಳೊಳಗಾಗಿ ಬಂದಿಸುತ್ತೇವೆ ದಯವಿಟ್ಟು ನೀವು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಪಕ್ಷದ ನಾಯಕರಲ್ಲಿ ವಿನಂತಿಸಿದ ಪರಿಣಾಮ ಪೋಲಿಸ್ ಅಧಿಕಾರಿಗಳ ಮಾತಿಗೆ ಗೌರವಕೊಟ್ಟು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಕೈ ಬಿಟ್ಟಿದ್ದೇವೆ.
ಆದರೆ ಇದೀಗ ಪೋಲಿಸ್ ಅಧಿಕಾರಿಗಳು ನೈಜ ಆರೋಪಿಗಳನ್ನು ಬಂದಿಸಲು ಹಾಗೂ ಅಮಾಯಕರ ಮೇಲಿನ ಪ್ರಕರಣ ಕೈ ಬಿಡಲು ನಾಲ್ಕು ದಿವಸದ ಕಾಲಾವಕಾಶ ಕೋರಿದ್ದು ಅದರ ಒಳಗಾಗಿ ಬೇಡಿಕೆ ಈಡೇರಿಸದೆ ಇದ್ದಲ್ಲಿ ಮುಂದಿನ ದಿನ ಎಲ್ಲಾ ಸಂಘಟನೆ ಹಾಗೂ ನಾಗರಿಕರನ್ನು ಒಟ್ಟು ಸೇರಿಸಿಕೊಂಡು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾರ್ಚ್ ಎನ್ನುವ ಬೃಹತ್ ಹೋರಾಟವನ್ನು ನಡೆಸಲಿದ್ದೇವೆ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.