ಮಂಗಳೂರು ಜನವರಿ.08 : ನಗರದ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಮೂರನೇ ದಿನದ ಬಲಿಪೂಜೆ, ನೊವೆನ-ಪ್ರಾರ್ಥನೆಗಳು ಇಂದು ಜನವರಿ 7ರಂದು ನಡೆದವು. ವಂ. ಗುರು ಲ್ಯಾನ್ಸಿ ರೆಬೆಲ್ಲೊ ಡಿ’ಸೋಜ ಮೊದಲನೆಯ ಪೂಜೆ ಅರ್ಪಿಸಿದರು.
ವಿಶೇಷವಾಗಿ ಅಸ್ವಸ್ಥರಿಗೋಸ್ಕರ ಪಾಪ ನಿವಾದನೆ ಹಾಗೂ ಪರಮ ಪ್ರಸಾದದ ಆರಾಧನೆಯನ್ನು ನಡೆಸಲಾಯಿತು.
ವಂ. ಗುರು ಆಂಡ್ರ್ಯೂ ಲಿಯೋ ಡಿ’ಸೋಜ, ವಂ. ಗುರು ಸಿರಿಲ್ ಲೋಬೊ, ವಂ. ಗುರು ಅಲ್ವಿನ್ ರಿಚರ್ಡ್ ಡಿ’ಸೋಜ, ವಂ. ಗುರು ಮಿಲ್ಟನ್, ವಂ. ಗುರು ಜೊವೆಲ್ ಒಲಿವೆರ, ವಂ. ಗುರು ಪ್ರವೀಣ್ ಲಿಯೊ ಡಿ’ಸೋಜ, ವಂ. ಗುರು ಸುರೆಶ್ ಸಲ್ಡಾನ್ಹ ಪೂಜೆ ಅರ್ಪಿಸಿದರು.
ಸಹಸ್ರಾರು ಭಕ್ತಾಧಿಗಳು ಬಂದು ಪ್ರಾರ್ಥನಾ ವಿಧಿಗಳಲ್ಲಿ ಭಾಗವಹಿಸಿದರು ಹಾಗೂ ಕೊರೋನಾ ನಿಮಿತ್ತ ಇರುವ ನಿಯಮಗಳನ್ನು ಪಾಲಿಸಿದರು.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 7:30ರ ವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ, ಮತ್ತು ಮಳಯಾಳಂ ಬಾಷೆಗಳಲ್ಲಿ ನೊವೆನ ಬಲಿಪೂಜೆಗಳು ನಡೆದವು.