ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ವೈಕುಂಠ ಏಕಾದಶಿಯ ಪರ್ವ ದಿನಂದಂದು ಶ್ರೀ ದೇವರಿಗೆ ವಿಶೇಷ ಅಲಂಕಾರ ಹಾಗು ಪೂಜಾ ಪುರಸ್ಕಾರಗಳು ಸಹಸ್ರಾರು ಭಜಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು.
ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ವೀರ ವೆಂಕಟೇಶ ಭಜನಾ ಮಂಡಳಿಯ ಸಹಭಾಗಿತ್ವದಲ್ಲಿ ನಡೆಯುವ ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ ಮಾರ್ಗಶಿರ ಮಾಸದ ಶು.ಏಕಾದಶಿ ತಾ. 25/12/2020 ಶುಕ್ರವಾರ ದಂದು ಪ್ರಾತಃ 6ಫಂಟೆಗೆ ಪ್ರಾರಂಭಗೊಂಡಿತು.
ಅಹೊರಾತ್ರಿ ಭಜನೆ ಸೇವೆ ನಡೆಯಲಿದ್ದು ಊರ-ಪರಊರಿನ ಸುಮಾರು 30 ಭಜನಾ ಮಂಡಳಿಗಳು ಈ ಸೇವೆಯಲ್ಲಿ ಪಾಲ್ಗೊಂಡರು.
ಮರುದಿನ ಪ್ರಾತಃ 5.30ಫಂಟೆಗೆ ಮಂಗಲದ ಬಳಿಕ ಶ್ರೀ ದೇವರ ಕೆರೆ ಸ್ನಾನ, ಪೇಟೆ ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ಮೊಕ್ತೇಸರರಾದ ಸಿ ಎಲ್ ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.