ಕರಾವಳಿ

ಶ್ರೀ ವಿಶ್ವೇಶತೀರ್ಥ ಆರಾಧನಾ ಪ್ರಯುಕ್ತ ಮಣಿ ಕೃಷ್ಣಸ್ವಾಮಿ ಅಕಾಡಮಿಯಿಂದ ಸಂಗೀತ ಕಛೇರಿ

Pinterest LinkedIn Tumblr

ಮಂಗಳೂರು : ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪ್ರಥಮ ಆರಾಧನಾ ಪ್ರಯುಕ್ತ ಮಣಿ ಕೃಷ್ಣಸ್ವಾಮಿ ಅಕಾಡಮಿಯು ಸುರತ್ಕಲ್‌ನ ‘ಅನುಪಲ್ಲವಿ’ಯಲ್ಲಿ ಸಂಗೀತ ಕಛೇರಿಗಳನ್ನು ಅಯೋಜಿಸಿತ್ತು.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಂ ಬಿ ಪುರಾಣಿಕ್, ಕ್ಯಾ ಗಣೇಶ್ ಕಾರ್ಣಿಕ್, ಸುರತ್ಕಲ್‌ನ ರೋಟರಿ ಕ್ಲಬ್ ಅಧ್ಯಕ್ಷ ಪಿ ರಾಘವೇಂದ್ರ ರಾವ್, ಗೋವಿಂದ ದಾಸ ಕಾಲೇಜು ಪ್ರಾಂಶುಪಾಲ ಕೃಷ್ಣಮೂರ್ತಿ, ರಾಗಧನ ಉಡುಪಿ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ, ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ನಾದಸ್ವರ ವಾದಕ ನಾಗೇಶ್ ಎ ಬಪ್ಪನಾಡು, ಪ್ರಾರ್ಥನಾ ಸಾಯಿ ನರಸಿಂಹನ್ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಉದ್ಘಾಟನೆಗೊಂಡಿತು.

ಬಳಿಕ ಜಿಲ್ಲೆಯ ಪ್ರತಿಭಾವಂತ ಕಲಾವಿದರಾದ ಶರಣ್ಯ – ಸುಮೇಧಾ, ಶ್ರೇಯ ಕೊಳತ್ತಾಯ, ಭಾಮಿನಿ ಕೆ ಭಟ್, ಅಶ್ವಿಜಾ ಉಡುಪ, ಶೋಭಿತಾ ಭಟ್, ಮೇಧಾ ಉಡುಪ ಕೃಷ್ಣ ಪವನ್ ಕುಮಾರ್, ಆತ್ರೇಯೀ ಕೃಷ್ಣಾ ಇವರಿಂದ ಸಂಗೀತ ಕಛೇರಿಗಳು ನಡೆಯಿತು.

ಇವರಿಗೆ ಶೈಲೇಶ್ ಕಟೀಲು, ಹರಿಕೃಷ್ಣ, ಸುಮುಖ ಕಾರಂತ ಪಕ್ಕವಾದ್ಯದಲ್ಲಿ ಸಹಕರಿಸಿದರು. ಕೊನೆಗೆ ಅಕ್ಷತಾ ಬೈಕಾಡಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಅಕಾಡಮಿಯ ಕಾರ್ಯದರ್ಶಿಗಳಾದ ಪಿ ನಿತ್ಯಾನಂದ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Comments are closed.