ಕುಂದಾಪುರ: ಸಮುದ್ರಕ್ಕೆ ಸ್ನಾನಕ್ಕಾಗಿ ಹೋದ ವ್ಯಕ್ತಿ ನೀರು ಪಾಲಾದ ಘಟನೆ ಕುಂದಾಪುರ ತಾಲೂಕಿನ ಕೋಡಿ ಸಮೀಪದ ಎಮ್. ಕೋಡಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಬೆಳಗಾವಿ ಮೂಲದವ ಎನ್ನಲಾದ ಮಂಜು ಎಂಬಾತ ಮೃತ ದುರ್ದೈವಿ.
ಮಂಜು ಎಂಬಾತ ಕೋಡಿಗೆ ವಿಜಾಪುರ ಮೂಲದ ಇನ್ನಿಬ್ಬರು ಕೂಲಿಯಾಳುಗಳ ಜೊತೆ ಕೆಲಸಕ್ಕೆ ಬಂದಿದ್ದು ಇಂದು ಮಧ್ಯಾಹ್ನ ಸ್ನಾನಕ್ಕೆ ಸ್ನಾನಕ್ಕೆ ತೆರಳಿದ್ದ. ಇದೇ ಸಂದರ್ಭ ಅಲೆಗಳ ಅಬ್ಬರಕ್ಕೆ ಮುಳುಗಿದ್ದು ಉಳಿಸಲು ಹೋದ ಇನ್ನೊಬ್ಬ ಕಾರ್ಮಿಕನನ್ನು ಸ್ಥಳೀಯ ಮುಸ್ಲೀಂ ಸಮುದಾಯದ ಯುವಕರು ಜೀವಪಣಕ್ಕಿಟ್ಟು ರಕ್ಷಿಸಿದ್ದಾರೆ. ಮಂಜುವನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರೂ ಕೂಡ ಆತ ಅಷ್ಟರಲ್ಲಾಗಲೇ ಮೃತರಾಗಿದ್ದಾರೆ. ಮೃತದೇಹವನ್ನು ಮೇಲಕ್ಕೆತ್ತಿ ಕುಂದಾಪುರ ಶವಾಗಾರಕ್ಕೆ ಸಾಗಿಸಲಾಗಿದೆ.
ಕುಂದಾಪುರ ನಗರ ಠಾಣೆ ಪ್ರಭಾರ ಉಪನಿರೀಕ್ಷಕ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Comments are closed.