ಕರಾವಳಿ

ಕುಂದಾಪುರ ಎಎಸ್ಪಿ ಹರಿರಾಂ ಶಂಕರ್’ಗೆ ಮಂಗಳೂರಿಗೆ ಓಓಡಿ ವರ್ಗ: ಕಾರ್ಕಳ ಡಿವೈಎಸ್ಪಿ ಚಾರ್ಜ್

Pinterest LinkedIn Tumblr

ಕುಂದಾಪುರ: ಮಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಅವರ 15 ದಿನಗಳ ರಜೆ ಹಿನ್ನೆಲೆ ಅವರ ಸ್ಥಾನಕ್ಕೆ ಪ್ರಭಾರವಾಗಿ (ಓ.ಓ.ಡಿ)  ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರನ್ನು ನಿಯೋಜಿಸಲಾಗಿದೆ.

ಮಂಗಳೂರು ಸಿಟಿ ಡಿಸಿಪಿ ಅರುಣಾಂಗ್ಷು ಗಿರಿ ಅವರ  ಕೋರಿಕೆಯಂತೆ ನ.18 ರಿಂದ ಡಿ.2 ರ ತನಕ ವೈಯಕ್ತಿಕ ‌ಕಾರಣದ ಮೇರೆಗೆ 15 ದಿನಗಳ ಗಳಿಕೆ ರಜೆ ನೀಡಿದ್ದು ಆ  ಸ್ಥಾನಕ್ಕೆ ಪ್ರಭಾರವಾಗಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಅವರನ್ನು ನಿಯೋಜಿಸಲಾಗಿದೆ‌.

ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್  ಅವರ ತೆರವಾದ ಹುದ್ದೆಗೆ ಮುಂದಿನ ಆದೇಶದವರೆಗೆ ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿಯವರು ಅಲ್ಲಿನ ಕರ್ತವ್ಯದ ಜೊತೆ ತಾತ್ಕಾಲಿಕ ನೆಲೆಯಲ್ಲಿ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.