ಕರಾವಳಿ

ಮಂಗಳೂರಿನ ಗಡಿಯಾರ ಗೋಪುರದಿಂದ ಎಬಿ ಶೆಟ್ಟಿ ವೃತ್ತದವರೆಗಿನ ಫುಟ್‌ಪಾತ್ ಕಾಮಗಾರಿ ಸ್ಥಗಿತಕ್ಕೆ ಆಗ್ರಹ

Pinterest LinkedIn Tumblr

ಮಂಗಳೂರು : ಮಂಗಳೂರಿನ ಪುರಭವನದ ಮುಂಭಾಗದಲ್ಲಿರುವ ಗಡಿಯಾರ ಗೋಪುರದಿಂದ ಆರ್‌ಟಿಒ ಕಚೇರಿ / ಎಬಿ ಶೆಟ್ಟಿ ವೃತ್ತದವರೆಗೆ ಹೋಗುವ ಮೂರು ಪಥದ ಕಾಂಕ್ರೀಟ್ ರಸ್ತೆಯ ಉದ್ದಕ್ಕೂ ಅಸ್ತಿತ್ವ ದಲ್ಲಿರುವ ಫುಟ್‌ಪಾತ್ ವಿಸ್ತಾರಕ್ಕೆ ಸಂಬಂಧಿಸಿದ ಕೆಲಸವನ್ನು ತಕ್ಷಣವೇ ನಿಲ್ಲಿಸುವಂತೆ ಸಾಮಾಜಿಕ ಕಾರ್ಯಕರ್ತ ಮತ್ತು ಬಿಜೆಪಿ ಅತ್ತಾವರ್ ವಾರ್ಡ್‌ನ ಮಾಜಿ ಅಧ್ಯಕ್ಷ ಭಾಸ್ಕರ್ ಕಿರಣ್ ಅವರು ಒತ್ತಾಯಿಸಿದ್ದಾರೆ.

ರಸ್ತೆಯು ಈಗಾಗಲೇ ಸಾಕಷ್ಟು ಅಗಲದ ಫುಟ್‌ಪಾತ್ ಹೊಂದಿದೆ ಮತ್ತು ಅದನ್ನು ಇನ್ನಷ್ಟು ಅಗಲಗೊಳಿಸುವುದರಿಂದ ಭಾರಿ ದಟ್ಟಣೆಯನ್ನು ನಿರ್ವಹಿಸುವ ಮೂರು ಪಥದ ಕಾಂಕ್ರೀಟ್ ರಸ್ತೆಯು ಕಿರಿದಾಗುವುದು, ರಸ್ತೆ ದಟ್ಟಣೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.

ಈ ನಿರ್ಧಾರ ತರ್ಕಬದ್ಧವಲ್ಲ. ಗೊತ್ತುಪಡಿಸಿದ ಬಸ್ ನಿಲ್ದಾಣಗಳಲ್ಲಿ ನಿಲ್ಲುವ ಬಸ್ಸುಗಳ ಸುಗಮಸಂಚಾರಕ್ಕೆ ಅಡ್ಡಿಯಾಗುತ್ತವೆ ಎಂದು ಆರೋಪಿಸಿರುವ ಭಾಸ್ಕರ್ ಕಿರಣ್ ಅವರು ಈ ಕೆಲಸವನ್ನು ತಕ್ಷಣವೇ ನಿಲ್ಲಿಸುವಂತೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಅಧ್ಯಕ್ಷರಾದ ಶ್ರೀ ಪೊನ್ನುರಾಜ್ ವಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Comments are closed.