ಕರಾವಳಿ

ನಿಶ್ಚಯವಾಗಿ ನಿಂತು ಹೋದ ಮದುವೆ- ಕುಂದಾಪುರ ನಾಡದಲ್ಲಿ ಯುವತಿ ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ಮದುವೆ ನಿಂತು ಹೋಗಿದ್ದಕ್ಕೆ ಮನನೊಂದು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾದಲ್ಲಿ ನಡೆದಿದೆ.

ನಾಡ ಗುಡ್ಡೆಯಂಗಡಿ ನಿವಾಸಿ ಮುರಳೀಧರ ನಾಯಕ್ ಅವರು ಪುತ್ರಿ ಸ್ಪೂರ್ತಿ ಎಂ. ನಾಯಕ್ (26) ಆತ್ಮಹತ್ಯೆ ಮಾಡಿಕೊಂಡ ಯುವತಿ.

(ಸಾಂದರ್ಭಿಕ ಚಿತ್ರ)

ಸ್ಪೂರ್ತಿ ಅವರಿಗೆ ಆಗಸ್ಟ್ 16 ರಂದು ಉಡುಪಿಯ ಗೋವರ್ಧನ ನಾಯಕ್ ಎಂಬುವವರ ಜೊತೆ ಮದುವೆ ನಿಶ್ಚಿತಾರ್ಥ ಮಾಡಿದ್ದು, ಬಳಿಕ ಕಾರಣಾಂತರಗಳಿಂದ ಮದುವೆ ನಿಂತು ಹೋಗಿತ್ತು. ಇದೇ ವಿಚಾರದಲ್ಲಿ ಸ್ಪೂರ್ತಿ ಬಹಳಷ್ಟು ನೊಂದುಕೊಂಡಿದ್ದು ನವೆಂಬರ್ 6 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ಪೂರ್ತಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.