
ಮಂಗಳೂರು, ನವೆಂಬರ್.01: ದ.ಕ.ಜಿಲ್ಲೆಯಲ್ಲಿ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಗರದ ಕೇಂದ್ರ ಮೈದಾನದಲ್ಲಿ ರವಿವಾರ ಬೆಳಗ್ಗೆ ಜರಗಿತು. 2020ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರು ಹಾಗೂ ಸಂಘ ಸಂಸ್ಥೆಗಳ ವಿವರ :
ವಾಸ್ಲೇನ್ನ ಪ್ರೊ.ಎ.ವಿ. ನಾವಡ (ಸಾಹಿತ್ಯ/ಶಿಕ್ಷಣ), ಅಶೋಕನಗರದ ಡಾ.ಯು.ವಿ. ಶೆಣೈ (ವೈದ್ಯಕೀಯ), ಉಳ್ಳಾಲದ ಎ.ಕೆ. ಮೊಯ್ದಿನ್ (ಸಮಾಜ ಸೇವೆ), ಬಂಟ್ವಾಳ ತಾಲೂಕು ನೆತ್ತರಕೆರೆಯ ನವೋದಯ ಮಿತ್ರಕಲಾ ವೃಂದ (ಸಮಾಜ ಸೇವೆ), ಅಬ್ದುಲ್ ಸತ್ತಾರ್ (ಸಾಹಸ/ಕ್ರೀಡೆ), ಎಂ. ಸುಬ್ರಹ್ಮಣ್ಯ ಭಟ್ (ಸಮಾಜ ಸೇವೆ), ಬಂಟ್ವಾಳ ತಾಲೂಕು ಅನಂತಾಡಿಯ ಬಿ. ಚೇತನ್ ರೈ ಮಾಣಿ (ರಂಗಭೂಮಿ ಕಲಾವಿದ, ಕಿರುತೆರೆ, ಚಿತ್ರನಟ), ಸುಳ್ಯದ ದೊಡ್ಡಣ್ಣ ಬರೆಮೇಲು (ಕ್ರೀಡೆ), ಸುಳ್ಯ ತಾಲೂಕು ಐವರ್ನಾಡಿನ ಕೆ.ವಿಶ್ವನಾಥ ಪೈ (ಕೃಷಿ), ಪುತ್ತೂರು ತಾಲೂಕು ಸುಳ್ಯಪದವಿನ ವಿದುಷಿ ನಯನ ವಿ. ರೈ (ನೃತ್ಯ), ಪುತ್ತೂರಿನ ಬಿ.ಟಿ. ರಂಜನ್ ಶೆಣೈ (ಪತ್ರಿಕೋದ್ಯಮ), ಪುತ್ತೂರು ತಾಲೂಕು ಪಡ್ನೂರಿನ ಚಂದ್ರಶೇಖರ್ ಹೆಗ್ಡೆ ಪುತ್ತೂರು (ಕಲಾಕ್ಷೇತ್ರ.

ಬೆಳ್ತಂಗಡಿಯ ಅಳದಂಗಡಿಯ ಸುಂದರ ದೇವಾಡಿಗ (ವಾದ್ಯ ಕಲಾವಿದ), ಬೆಳ್ತಂಗಡಿ ತಾಲೂಕು ಗುರುವಾಯನಕೆರೆಯ ಡಾ. ವೇಣುಗೋಪಾಲ ಶರ್ಮ ಎಸ್. (ವೈದ್ಯಕೀಯ ಸೇವೆ), ಧರ್ಮಸ್ಥಳದ ವೀರಕೇಸರಿ (ಸಮಾಜಸೇವೆ), ಬೆಳ್ತಂಗಡಿಯ ಡಾ.ವೈ. ಉಮಾನಾಥ ಶೆಣೈ (ಇತಿಹಾಸ), ಮೂಡುಬಿದಿರೆ ತಾಲೂಕು ಅತಿಕಾರಿಬೆಟ್ಟಿವಿನ ಗಣೇಶ್ ಕೊಲೆಕಾಡಿ (ಯಕ್ಷಗಾನ ಹಾಗೂ ರಂಗಭೂಮಿ), ಮೂಡುಬಿದಿರೆ ತಾಲೂಕಿನ ಮಾರ್ಪಾಡಿಯ ಗಂಗಯ್ಯ ಪರವ (ದೈವ ಪಾತ್ರಿ), ಮೂಡುಬಿದಿರೆ ತಾಲೂಕು ಪಾಲಡ್ಕದ ಭಾಸ್ಕರ್ (ಕ್ರೀಡಾಕ್ಷೇತ್ರ-ಕರಾಟೆ), ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲ (ಸಾಮಾಜಿಕ/ಶೈಕ್ಷಣಿಕ/ವೈದ್ಯಕೀಯ/ಕ್ರೀಡೆ), ಸೋಮೇಶ್ವರ ಕೊಲ್ಯದ ಕೆ. ಸೀತಾರಾಮ ಬಂಗೇರ (ಸಾಮಾಜಿಕ ಮತ್ತು ಧಾರ್ಮಿಕ), ಬಂಟ್ವಾಳ ತಾಲೂಕು ಪಜೀರಿನ ಸೇಸಪ್ಪ ಪೂಜಾರಿ (ಸಮಾಜಸೇವೆ) ಅವರಿಗೆ ಪ್ರಶಸ್ತಿ ಲಭಿಸಿದೆ.

ಬೈಕಂಪಾಡಿಯ ಯೋಗೀಶ್ ಕಾಂಚನ್ (ಸಾಹಿತ್ಯ), ಸುರತ್ಕಲ್ ಬಂಟರ ಸಂಘ (ಸಮಾಜಸೇವೆ), ಸುರತ್ಕಲ್ನ ಪದ್ಮನಾಭ ಕೆ. (ಶಿಲ್ಪಕಲೆ/ಚಿತ್ರಕಲೆ), ಕದ್ರಿ ಕ್ರಿಕೆಟರ್ಸ್ (ಸಮಾಜಸೇವೆ), ಉರ್ವ ಚಿಲಿಂಬಿಯ ಡಾ.ಎಂ. ಮುರಳಿಕುಮಾರ್ (ನಾಟಿವೈದ್ಯ), ಕುದ್ರೋಳಿ ಅಳಕೆಯ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ (ಸಮಾಜಸೇವೆ), ಸೂಟರ್ಪೇಟೆಯ ಪ್ರಜ್ವಲ್ ಯುವಕ ಮಂಡಲ (ಶೈಕ್ಷಣಿಕ/ಸಾಮಾಜಿಕ/ಸಾಂಸ್ಕೃತಿಕ), ಹಂಪನಕಟ್ಟೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಾಗರಿಕ ಜಾಗೃತಿ ಸಮಿತಿ (ಸಮಾಜ ಸೇವೆ), ಪದವು ಹೈಸ್ಕೂಲ್ ರಸ್ತೆಯ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ (ಸಮಾಜಸೇವೆ), ಪ್ರಾಧ್ಯಾಪಕ ಡಾ.ಅನಂತ್ ಜಿ. ಪ್ರಭು (ಸಮಾಜಸೇವೆ), ಬಲ್ಮಠದ ಶ್ರೀನಿವಾಸ್ ನಾಯಕ್ (ದೃಶ್ಯ ಮಾಧ್ಯಮ), ಬೆಳ್ತಂಗಡಿ ತಾಲೂಕು ಬೆಳಾಲಿನ ಜಿನ್ನಪ್ಪ ಗೌಡ (ಪತ್ರಿಕೋದ್ಯಮ), ಬೆಳ್ತಂಗಡಿ ತಾಲೂಕು ಬೆಳಾಲಿನ ಕಸ್ತೂರ್ಬಾ ಸಂಜೀವಿನಿ ಮಹಿಳಾ ಸಂಘ (ಕೃಷಿ), ಮಂಜೇಶ್ವರದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ (ಸಮಾಜಸೇವೆ-ಗಡಿನಾಡು), ಹಂಪನಕಟ್ಟೆಯ ಸುರೇಶ್ ಶ್ಯಾಮರಾವ್ ನೇರಂಬಳ್ಳಿ (ಹೊರನಾಡು ಕನ್ನಡಿಗ/ಸಮಾಜ ಸೇವೆ), ಉರ್ವದ ಜೈಭಾರತಿ ತರುಣ ವೃಂದದವರಿಗೆ (ಸಮಾಜ ಸೇವೆ) ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿಯನ್ನು ಪ್ರದಾನ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮಾತ್, ಡಾ.ಭರತ್ ಶೆಟ್ಟಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್ ,ಮ.ನ.ಪಾ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ ರೂಪಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಮತ್ತಿತರರು ಉಪಸ್ಥಿತರಿದ್ದರು.
Comments are closed.