ಕರಾವಳಿ

ಉಳ್ಳಾಲ ವ್ಯಾಪ್ತಿಯಲ್ಲಿ ಹೋಟೆಲ್ ಉದ್ಯಮಿ ಸೇರಿದಂತೆ 15 ಮಂದಿಗೆ ಸೋಂಕು ದೃಡ 

Pinterest LinkedIn Tumblr

ಮಂಗಳೂರು / ಉಳ್ಳಾಲ, ಜು. 08 : ಹೋಟೆಲ್ ಉದ್ಯಮಿ ಸೇರಿದಂತೆ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಮೂರು ಪ್ರಕರಣ ಸೇರಿ, ಕೋಟೆಕಾರು, ಬೆಳ್ಮ, ಕುತ್ತಾರ್, ದೇರಳಕಟ್ಟೆ ಬಾಳೆಪುಣಿ ಗ್ರಾಮಗಳಲ್ಲಿ ಮಂಗಳವಾರ ಒಟ್ಟು 15 ಜನರಿಗೆ ಸೋಂಕು ದೃಡವಾಗಿದೆ.

ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ 3, ಬಾಳೆಪುಣಿಯಲ್ಲಿ 2, ದೇರಳಕಟ್ಟೆ 5, ಬೆಳ್ಮ1, ಕುತ್ತಾರ್ 1, ಕೋಟೆಕಾರ್ ನಲ್ಲಿ 3 ಸೇರಿದಂತೆ ಒಟ್ಟು 15 ಮಂದಿಗೆ ಕೊರೊನ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇವರಲ್ಲಿ ಖಾಸಗಿ ಆಸ್ಪತ್ರೆಯ ಸಿಬಂದಿಗಳಲ್ಲಿ 6 ಮಂದಿಯಲ್ಲಿ ಸೋಂಕು ಸೇರಿದಂತೆ ದೇರಳಕಟ್ಟೆಯ ಹೋಟೆಲ್ ಉದ್ಯಮಿಗೆ ಸೋಂಕು ದೃಢವಾಗಿದೆ.

ಉಳ್ಳಾಲದಲ್ಲಿ 23, 54, 46 ವರ್ಷದ ಮೂವರು ಪುರುಷರು, ಕೋಟೆಕಾರು ಪ.ಪಂ.ವ್ಯಾಪ್ತಿಯ ಕೊಂಡಾಣದಲ್ಲಿ 35 ವರ್ಷದ ಪುರುಷ, ಬಗಂಬಿಲದಲ್ಲಿ 52 ವರ್ಷದ ಪುರುಷ, ಮಡ್ಯಾರ್ ನ 47 ವರ್ಷದ ಪುರುಷ, ಕುತ್ತಾರ್ ನಿವಾಸಿ 24 ವರ್ಷದ ಯುವಕ, ದೇರಳಕಟ್ಟೆ ವ್ಯಾಪ್ತಿಯಲ್ಲಿ 27 ವರ್ಷದ ಮೂವರು ಮಹಿಳೆಯರು ಹಾಗೂ 26ವರ್ಷದ ಪುರುಷ ಕೊರೊನ ಸೋಂಕು ದೃಢಪಟ್ಟಿದೆ. ಉಳ್ಳಾಲದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ.

ದ.ಕ. ಜಿಲ್ಲೆಯಲ್ಲಿ ಮಂಗಳವಾರ 83 ಮಂದಿಗೆ ಸೋಂಕು ದೃಢಪಟ್ಟಿದ್ದು, 99 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Comments are closed.