ಕರಾವಳಿ

ಮಂಗಳೂರಿಗೆ ತೆರಳಿದ ಆಶಾ ಕಾರ್ಯಕರ್ತೆ (ಕೊರೋನಾ ವಾರಿಯರ್) ನಾಪತ್ತೆ

Pinterest LinkedIn Tumblr

ಮಂಗಳೂರು : ದ.ಕ.ಜಿಲ್ಲೆಯ ಯುವತಿಯೋವರು ( ಆಶಾ ಕಾರ್ಯಕರ್ತೆ) ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐತೂರು ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆ, ಕೊರೋನಾ ವಾರಿಯರ್ ಆಗಿ ಕೆಲಸ ಮಾಡಿಕೊಂಡಿ ರುತ್ತಿದ್ದ  ಸೌಮ್ಯ (34) ಎಂಬವರು ಜೂನ್ 8 ರಂದು ಗರ್ಭಿಣಿ ಹೆಂಗಸನ್ನು ಡೆಲಿವರಿಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಿ ಬರುವುದಾಗಿ ತಿಳಿಸಿ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆಯ ಚಹರೆ ಇಂತಿವೆ: 

ಹೆಸರು-ಸೌಮ್ಯ, ಎತ್ತರ 5.2, ಶರೀರ-ಸಾಧಾರಣ ಶರೀರ, ಗೋಧಿ ಮೈ ಬಣ್ಣ, ಧರಿಸಿರುವ ಬಟ್ಟೆ-ಹಳದಿ ಮತ್ತು ಕೇಸರಿ ಬಣ್ಣ ಮಿಶ್ರಿತ ಚೂಡಿದಾರ. ಮಾತನಾಡುವ ಭಾಷೆ-ಕನ್ನಡ, ತುಳು, ಮಲಿಯಾಳಂ, ತಮಿಳು.

ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕಡಬ ಪೋಲೀಸ್ ಠಾಣೆ ದೂರವಾಣಿ ಸಂಖ್ಯೆ
08251 260044, 08251 251055,8251230500, 8242220500, 8242220501 ನ್ನು ಸಂಪರ್ಕಿಸಲು ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.

Comments are closed.