ಕರಾವಳಿ

ಕೊಂಚಾಡಿ ಕಾಶೀ ಮಠದಲ್ಲಿ ಮಹಾ ವಿಷ್ಣು ಯಾಗ ಸಮಾಪನ

Pinterest LinkedIn Tumblr

ಮಂಗಳೂರು : ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಮೂರು ದಿನಗಳ ಪರ್ಯಂತ ಲೋಕ ಕಲ್ಯಾಣಾರ್ಥವಾಗಿ ನಡೆದ ಶ್ರೀ ಮಹಾ ವಿಷ್ಣು ಯಾಗ ಇಂದು ಸಮಾಪನಗೊಂಡಿತು.

ಕೊಂಚಾಡಿ ಶ್ರೀ ಕಾಶೀಮಠದಲ್ಲಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬುಧವಾರ ಸಮಾಪನಗೊಂಡಿದ್ದು ಶ್ರೀ ಮಹಾ ವಿಷ್ಣು ಯಾಗ ಯಜ್ಞ ಮಂಟಪದಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ನಡೆಯಿತು.

ಪ್ರಾರಂಭದಲ್ಲಿ ವೈದಿಕರಿಂದ ಪೂಜಾ ವಿಧಿ ವಿಧಾನದೊಂದಿಗೆ ಆರಂಭಗೊಂಡು ಬಳಿಕ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರನ್ನು ಸಕಲ ಬಿರುದು ಬಾವಳಿ ಗಳಿಂದ ಯಜ್ಞ ಮಂಟಪಕ್ಕೆ ಕರೆತರಲಾಯಿತು. ಮಧ್ಯಾಹ್ನ ಮಹಾ ಪೂರ್ಣ ಆಹುತಿ ಬಳಿಕ ಸಮಾರಾಧನೆ ನಡೆಯಿತು . ರಾತ್ರಿ ಉತ್ಸವ ಶ್ರೀಗಳವರ ಉಪಸ್ಥಿತಿಯಲ್ಲಿ ಸಾವಿರಾರು ಭಜಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.

ಸಂದರ್ಭದಲ್ಲಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತೂರಿ ಸದಾಶಿವ ಪೈ , ಎಂ . ಸುರೇಶ್ ಕಾಮತ್ , ಎಚ್ . ಗೋಕುಲದಾಸ್ ನಾಯಕ್ ,ಉರ್ವಿ ರಾಧಾಕೃಷ್ಣ ಶೆಣೈ , ಮಾರೂರ್ ಶಶಿಧರ್ ಪೈ , ಕೆ . ಅಚ್ಚುತ್ ಪೈ . ಎಂ . ವಿಜಯ್ ಪೈ , ಶ್ರೀ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಡಿ . ವಾಸುದೇವ್ ಕಾಮತ್ , ಅರುಣ್ ಕಾಮತ್ ,ಜಿ . ರತ್ನಕರ್ ಕಾಮತ್ , ದೀಪಕ್ ಕುಡ್ವ ,ಡಿ . ವೇದವ್ಯಾಸ್ ಕಾಮತ್ , ಅನಿಲ್ ಕಾಮತ್, ಗಣೇಶ್ ಬಾಳಿಗಾ , ಗುರುಪ್ರಸಾದ್ ಕಾಮತ್ , ಪ್ರಶಾಂತ್ ಪೈ ದೀಪಕ್ಚಂದ್ರ ಬಾಳಿಗಾ , ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.