ಕರಾವಳಿ

ಬಹುನಿರೀಕ್ಷಿತ “2 ಎಕ್ರೆ” ತುಳು ಸಿನಿಮಾ ನಾಳೆ ಕರಾವಳಿಯಾದ್ಯಂತ ಬಿಡುಗಡೆ

Pinterest LinkedIn Tumblr

ಮಂಗಳೂರು, ಜನವರಿ.09: ಒನ್‌ಲೈನ್‌ ಸಿನೆಮಾ ಲಾಂಛನದಲ್ಲಿ ಸಂದೇಶ್‌ ರಾಜ್‌ ಬಂಗೇರ, ರೋಹನ್‌ ಕೋಡಿಕಲ್‌ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ ನಿರ್ದೇಶನದ ಬಹುನಿರೀಕ್ಷಿತ “2 ಎಕ್ರೆ” ತುಳು ಸಿನಿಮಾ ನಾಳೆ ಜನವರಿ 10ರಂದು ಕರಾವಳಿಯಾದ್ಯಂತ ಏಕಕಾಲದಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ವಿಸ್ಮಯ ವಿನಾಯಕ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಸ್ಕತ್, ಪೂಣೆ ಹಾಗೂ ಮಣಿಪಾಲದಲ್ಲಿ ಚಿತ್ರದ ಪ್ರಿಮಿಯರ್ ಶೋ ಏರ್ಪಡಿಸಲಾಗಿತ್ತು. ಈ ಸಂದರ್ಭ ಚಿತ್ರದ ಬಗ್ಗೆ ವೀಕ್ಷಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

ಮಂಗಳೂರಿನಲ್ಲಿಯೂ ಸಿನಿಪ್ರೀಯರು ಚಿತ್ರದ ಬಗ್ಗೆ ಉತ್ತಮ ಸ್ಪಂದನೆ ತೋರಿದ್ದಾರೆ. ನಾಳೆ ಉಡುಪಿ ಹಾಗೂ ದ.ಕ.ಜಿಲ್ಲೆಯ ಹೆಚ್ಚಿನ ಚಿತ್ರಮಂದಿರಗಳಲ್ಲಿ ಹಾಗೂ ಮಲ್ಟಿಪ್ಲೆಕ್ಷ್ ಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲ್ಲಿದೆ, ಬರುವ ವಾರದಿಂದ ನಗರದ ಜ್ಯೋತಿ ಚಿತ್ರಮಂದಿರದಲ್ಲೂ ಚಿತ್ರ ಪ್ರದರ್ಶನಗೊಳ್ಳಲ್ಲಿದೆ ಎಂದು ತಿಳಿಸಿದರು.

ಈಗಾಗಲೇ ಈ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. “ಜಾಗೆ ರಡ್ಡ್ ಎಕ್ಕರೆ… ಬೈದೆರ್‌ ಲಪ್ಪೆರೆ… ಜಾಗೆದಕುಲು ಬನ್ನಾಗ ಮಾತ ಒತ್ತರೆ’ ಎಂಬ ಟೈಟಲ್‌ ಸಾಂಗ್‌ ಕ್ಲಿಕ್‌ ಆಗಿದೆ. ಶಶಿರಾಜ್‌ ರಾವ್‌ ಕಾವೂರು ಬರೆದಿರುವ “ಪಗೆಲ್‌ ಕರೀಂಡ್‌… ಮುಗಲ್‌ ಕಬೀಂಡ್‌..’ ಹಾಗೂ “ಇನಿ ದಾನೆ ಕುಸ್ಕೊಂದುಂಡು’ ಹಾಡುಗಳು ಕೂಡ ಗಮನ ಸೆಳೆದಿದೆ. ಮೊದಲ ಬಾರಿಗೆ ಪೃಥ್ವಿ ಅಂಬರ್‌ ಈ ಸಿನೆಮಾದಲ್ಲಿ ಹಾಡಿದ್ದಾರೆ. ದೀಪಕ್‌ ಕೋಡಿಕಲ್‌ ಕೂಡ ಸ್ವರ ನೀಡಿದ್ದಾರೆ. ಕಿಶೋರ್‌ ಕುಮಾರ್‌ ಶೆಟ್ಟಿ ಸಂಗೀತವಿದೆ. ಸಿದ್ದು ಜಿ.ಎಸ್‌. ಛಾಯಾಗ್ರಹಣ. ಕಿಶೋರ್‌ ಶೆಟ್ಟಿ ಸಂಗೀತ, ಸುನದ್‌ ಗೌತಮ್‌ ಹಿನ್ನೆಲೆ ಸಂಗೀತ, ರಾಹುಲ್‌ ವಶಿಷ್ಠ ಸಂಕಲನದಲ್ಲಿ ಕೈಜೋಡಿಸಿದ್ದಾರೆ. ಸುರೇಶ್‌ ನಾಯಕ್‌, ಮಹೇಶ್‌ , ಕಿರಣ್‌ ಶೆಟ್ಟಿ ಸಹಕರಿಸಿದ್ದಾರೆ ಎಂದವರು ವಿವರ ನೀಡಿದರು.

ಕಥಾ ಸಾರಾಂಶ : “2 ಎಕ್ರೆ” ಹೆಸರು ಕೇಳುವಾಗ ಇದು ಭೂಮಿಯ ಬಗ್ಗೆ ಅನಿಸಬಹುದು. ಆದರೆ, ಇಲ್ಲಿ ಕಥೆ ಆರಂಭ ಹಾಗೂ ಮುಕ್ತಾಯ ಮಾತ್ರ 2 ಎಕ್ರೆ ಜಾಗದಲ್ಲಿ. ಉಳಿದಂತೆ ಇಲ್ಲಿ ಅನೇಕ ಸಂಗತಿಗಳಿವೆ. ನವೀನ್‌ ಡಿ. ಪಡೀಲ್‌ ಹಾಗೂ ವಿಸ್ಮಯ ವಿನಾಯಕ್‌ ಅಣ್ಣ ತಮ್ಮಂದಿರು. ಅವರಿಗೆ ತಂದೆಯ ಪಾಲಿನ ಆಸ್ತಿ ಸಿಕ್ಕಿರುತ್ತದೆ. ಅದನ್ನು ಡೀಲ್‌ ಮಾಡುವ ಹಾಸ್ಯ ಕಥಾನಕವೇ “2 ಎಕ್ರೆ’ ಎಂದೂ ಹೇಳಲಾಗುತ್ತಿದೆ.

ತಾರಾಂಗಣ :  ನಾಯಕ ನಟನಾಗಿ ಪೃಥ್ವಿ ಅಂಬರ್‌, ನಾಯಕಿ ಪಾತ್ರದಲ್ಲಿ ನಿರೀಕ್ಷಾ ಶೆಟ್ಟಿ, ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಅರವಿಂದ ಬೋಳಾರ್‌, ನವೀನ್‌ ಡಿ. ಪಡೀಲ್‌, ವಿಸ್ಮಯ ವಿನಾಯಕ್‌, ಪ್ರಕಾಶ್‌ ತೂಮಿನಾಡ್‌, ಉಮೇಶ್‌ ಮಿಜಾರ್‌, ಮಂಜು ರೈ ಮುಳೂರು, ಮೈಮ್‌ ರಾಮ್‌ದಾಸ್‌, ದೀಪಕ್‌ ರೈ ಪಾಣಾಜೆ, ರೂಪಾ ವರ್ಕಾಡಿ, ಶ್ರದ್ಧಾ ಸಾಲ್ಯಾನ್‌, ರವಿ ರಾಮಕುಂಜ, ಅನಿಶಾ ಶರತ್‌, ಸುರೇಶ್‌ ಮಂಜೇಶ್ವರ ನಟಿಸಿದ್ದು, ಶಬರೀಶ್‌ ಕಬ್ಬಿನಾಳೆ, ಯತೀಶ್‌ ಪಸೋಡಿ, ಆರ್‌.ಜೆ. ಅರ್ಪಿತ್‌, ದೀಕ್ಷಿತ್‌ ಕೋಟ್ಯಾನ್‌, ಪ್ರದೀಪ್‌ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ (ಒಂದೊಂದು ಪಾತ್ರದಲ್ಲಿ) ದೀಪಕ್‌ ರಾಜ್‌ ಶೆಟ್ಟಿ, ಸೂರಜ್‌ ಶೆಟ್ಟಿ, ಪ್ರಶಾಂತ್‌ ಸಿ.ಕೆ, ಸೋನಾಲ್ ಮೊಂತೇರೋ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದಾರೆ.

Comments are closed.