ಉಡುಪಿ: ‘ಟೈಮ್ ಈಸ್ ಓವರ್, ಐ ಆ್ಯಮ್ ಕಮಿಂಗ್ ಗಾಡ್. ಜೀವನ ಅಂದ್ರೆ ಏನಂತ ಚೆನ್ನಾಗಿ ತಿಳ್ಕೊಂಡೆ’ ಎಂದು ತನ್ನ ಮೊಬೈಲ್ ವ್ಯಾಟ್ಸಪ್ ಸ್ಟೇಟಸ್ ಅಪ್ಲೊಡ್ ಮಾಡಿ ಕಾರ್ಕಳ ಎಂಪಿಎಂ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ನಲ್ಲೂರು ಗ್ರಾಮದ ಹರೀಶ್ (20) ಎನ್ನುವಾತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಹರೀಶ್ ಶುಕ್ರವಾರ ಕಾಲೇಜಿಗೆ ಹೋಗಿರಲಿಲ್ಲ. ಬದಲಾಗಿ ಗೆಳೆಯನೊಂದಿಗೆ ಬೈಕ್ನಲ್ಲಿ ದೂಪದಕಟ್ಟೆಯತ್ತ ತೆರಳಿದ್ದು ಅತ್ತೂರು ಬಳಿ ಬೈಕ್ ನಿಲ್ಲಿಸುವಂತೆ ಗೆಳೆಯನಿಗೆ ತಿಳಿಸಿದ ಹರೀಶ್ ಆತನನ್ನು ತೆರಳುವಂತೆ ಹೇಳಿ ಬೈಕ್ನಿಂದ ಇಳಿದಿದ್ದ. ಆತನ ಗೆಳೆಯನೂ ಕೂಡ ಒಂದಷ್ಟು ದೂರ ಸಾಗಿ ವಾಪಸಾಗುವ ವೇಳೆ ಹರೀಶ್ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದ್ದು, ತಕ್ಷಣ ಆತನನ್ನು ಉಡುಪಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಬೆಳ್ಮಣ್ ಸಮೀಪ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ.
ಹರೀಶ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಕಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದ. ಹರೀಶ್ ತಂದೆ ಜಗನ್ನಾಥ, ತಾಯಿ ಚಂಪಾ, ಇಬ್ಬರು ಸಹೋದರರನ್ನು ಅಗಲಿದ್ದಾನೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.