ಕರಾವಳಿ

ಅನಾರೋಗ್ಯದಿಂದ ಬೇಸತ್ತು ಬಾರ್ಕೂರು ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ

Pinterest LinkedIn Tumblr

ಉಡುಪಿ: ಎರಡು ದಿನಗಳ ಹಿಂದೆ ತನ್ನ ನಿವಾಸದಿಂದ ನಾಪತ್ತೆಯಾಗಿದ್ದ ರಕ್ಷಿತಾ (19) ಎನ್ನುವ ಕಾಲೇಜು ವಿದ್ಯಾರ್ಥಿನಿಯ ಮೃತದೇಹವು ಉಡುಪಿ ಜಿಲ್ಲೆ ಬ್ರಹ್ಮಾವರದ ಹೆರಾಡಿ ಗ್ರಾಮದ ಆಕೆಯ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ರಕ್ಷಿತಾ ಬಾರ್ಕೂರು ರುಕ್ಮಿಣಿ ಶೆಡ್ಡಿ ಕಾಲೇಜಿನಲ್ಲಿ ಬಿ. ಕಾಮ್ ವಿದ್ಯಾರ್ಥಿಯಾಗಿದ್ದು ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆಯಲ್ಲಿದ್ದರು.

ಬುಧವಾರ ತನ್ನ ಸೋದರಿ ಅನಿತಾಳಿಗೆ ಕರೆ ಮಾಡಿದ ರಕ್ಷಿತಾ ತನಗೆ ತುಂಬಾ ಸುಸ್ತಾಗುತ್ತಿದೆ ಎಂದು ತಿಳಿಸಿದ್ದು ಬಳಿಕ ಆಕೆ ನಾಪತ್ತೆಯಾಗಿದ್ದರು. ಮೊಬೈಲ್ ಕರೆಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಆಕೆಗಾಗಿ ಹುಡುಕಾಡುವಾಗ ಆಕೆ ಬ್ಯಾಗಿನಲ್ಲಿ ಪತ್ರವೊಂದು ಸಿಕ್ಕಿದ್ದು ‘ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಬದುಕಲು ಇಷ್ಟವಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ಬರೆದಿತ್ತು ಎನ್ನಲಾಗಿದೆ.

ರಕ್ಷಿತಾ ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.