ಕರಾವಳಿ

ಕದ್ರಿ ಸಂಗೀತ ಸೇವೆ ಸದಾ ಸ್ಮರಣಿಯ :ಸಂಸದ ನಳಿನ್‌ಕುಮಾರ್ ಸಂತಾಪ

Pinterest LinkedIn Tumblr

ಮಂಗಳೂರು : ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಕದ್ರಿ ಗೋಪಾಲನಾಥ್ ಅವರ ಅಗಲುವಿಕೆಯಿಂದ ಭಾರತದ ಸಂಗೀತ ಕ್ಷೇತ್ರ ಮಹಾನ್ ಕಲಾವಿದರೋರ್ವರನ್ನು ಕಳಕೊಂಡಂತಾಗಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸ್ಯಾಕ್ಸೋಫೋನ್ ಮೂಲಕ ಎಲ್ಲೆಡೆ ಪಸರಿಸಿದ ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು . ಕರಾವಳಿಗೆ ಹೆಮ್ಮೆ ತಂದಿರುವ ಮೇರು ಕಲಾವಿದ ಕದ್ರಿ ಗೋಪಾಲನಾಥ್ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯ. ಅವರ ಹೆಸರು ಜಿಲ್ಲೆಯಲ್ಲಿ ಅಜರಾಮರವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್‌ಕುಮಾರ್ ಕಟೀಲ್ ಸಂತಾಪ ವ್ಯಕ್ತ ಪಡಿಸಿದ್ದಾರೆ.

Comments are closed.