ಉಡುಪಿ: ಚಿನ್ನಾಭರಣ ಖರೀದಿಯ ನೆಪದಲ್ಲಿ ಚಿನ್ನದಂಗಡಿಗೆ ಬಂದು ಬಳಿಕ ಅಂಗಡಿಯವರ ಗಮನ ಬೇರೆಡೆ ಸೆಳೆದು ದೋಚುವ ತಂಡವೊಂದು ಉಡುಪಿಯಲ್ಲಿ ಕಾರ್ಯಾಚರಿಸುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ತಂಡ ಈಗಾಗಲೇ ಚಿಕ್ಕಮಗಳೂರಿನ ಕೊಪ್ಪ, ಕಾರವಾರ ಮೊದಲಾದೆಡೆ ಚಿನ್ನದ ಅಂಗಡಿಗಳಲ್ಲಿ ವಂಚಿಸಿದೆ ಎನ್ನಲಾಗಿದೆ.
ಫೋಟೋ ಲಭ್ಯ…
ಮೋಸ ಮಾಡುವ ತಂಡದ ಇಬ್ಬರ ಪೋಟೋಗಳು ಕಾರವಾರದ ಜುವೆಲ್ಲರಿ ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಅದನ್ನು ಬಹಿರಂಗ ಪಡಿಸಿದ್ದಾರೆ. ಇವರು ಕಂಡು ಬಂದರೆ ತತ್ಕ್ಷಣವೇ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಇನ್ನು ನಕಲಿ ನೋಂದಣಿ ಸಂಖ್ಯೆಯುಳ್ಳ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಈ ತಂಡ ಸಂಚರಿಸುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.
ಜಿಲ್ಲೆಯ ಎಲ್ಲ ಜುವೆಲ್ಲರಿ ಅಂಗಡಿ ಮಾಲಕರು ಜಾಗ್ರತೆ ವಹಿಸಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ.
Comments are closed.