ಕರಾವಳಿ

ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ :” ಉಷಾ: ಪೂಜೆ ” ವಿಶೇಷ ಕಾರ್ಯಕ್ರಮ 

Pinterest LinkedIn Tumblr

ಮಂಗಳೂರು: ಸಂಘನಿಕೇತನ ಇದರ  72ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿ ಶ್ರೀ ಮಹಾ ಗಣಪತಿ ದೇವರ ಭವ್ಯ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಯಿತು.

ಬೆಳಿಗ್ಗೆ 5 ಗಂಟೆಗೆ ಸರಿಯಾಗಿ ವಿಶೇಷವಾಗಿ ಸಂಘನಿಕೇತನದ ಪ್ರಾಂಗಣವನ್ನು ಸಾವಿರಾರು ಹಣತೆ ದೀಪದೊಂದಿಗೆ ಅಲಂಕರಿಸಿ ಶ್ರೀ ದೇವರ ಪ್ರೀತ್ಯರ್ಥ ” ಉಷಾ: ಪೂಜೆ ” ಕಾರ್ಯಕ್ರಮ ಆಯೋಜಿಸಲಗಿತ್ತು.

ಸುಮಾರು ಒಂದು ಸಾವಿರಕ್ಕೂ ಅಧಿಕ ಭಗವದ್ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು , ಪ್ರಾರಂಭದಲ್ಲಿ ಮಹಿಳಾ ವ್ರ್ರಂದದವರಿಂದ ಭಜನೆ ನಡೆದು ಬಳಿಕ ಸಂಸ್ಕಾರ ಭಾರತೀ ಕರ್ನಾಟಕ ಇದರ ಉಪಾಧ್ಯಕ್ಷರಾದ ಶ್ರೀ ಹಿರೇಮಗಳೂರು ಕಣ್ಣನ್ ಹಾಗೂ ಚಿಕ್ಕಮಗಳೂರಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ನಾಗಶ್ರೀ ತ್ಯಾಗರಾಜ್ ರವರಿಂದ ವಿಶೇಷ ಕೀರ್ತನೆ ಕಾರ್ಯಕ್ರಮ ಜರಗಿದವು ಶ್ರೀ ದೇವರಿಗೆ ಮಂಗಳಾರತಿ ತದನಂತರ ಸಂಘ ಪ್ರಾರ್ಥನೆ ನಡೆಯಿತು .

ಚಿತ್ರಗಳು : ಮಂಜು ನೀರೇಶ್ವಾಲ್ಯ

Comments are closed.