ಮಂಗಳೂರು, ಮೇ.09: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಇಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕವು ಬಹಳ ವಿಜೃಂಭಣೆಯಿಂದ ಜರಗಿತು ವೇದಮೂರ್ತಿ ಬ್ರ| ಶ್ರೀ ವಿಠಲದಾಸ್ತಂತ್ರಿಯವರು ವೈದಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.
ಶ್ರೀ ಕ್ಷೇತ್ರ ಕದ್ರಿಯಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಸಂದರ್ಭ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಧರ್ಮಾಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಶ್ರೀ ದೇವರ ಬಲಿ ಉತ್ಸವದಲ್ಲಿ ಪಾಲ್ಗೊಂಡರು.
ಕದ್ರಿ ಮಠಾಧಿಪತಿ ಶ್ರೀ ರಾಜಾ ನಿರ್ಮಲನಾಥ್ ಜಿ., ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಎ. ಜನಾರ್ದನ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ, ಡಾ. ನಿಂಗಯ್ಯ, ಪ್ರಚಾರ ಸಮಿತಿಯಅಧ್ಯಕ್ಷಎಸ್. ಪ್ರದೀಪಕುಮಾರ ಕಲ್ಕೂರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದರಾಘವೇಂದ್ರ ಭಟ್, ರಂಜನ್ ಕುಮಾರ್ ಬಿ.ಎಸ್., ಶ್ರೀಮತಿ ಚಂದ್ರಕಲಾ ದೀಪಕ್, ಪುಷ್ಪಲತಾ ಶೆಟ್ಟಿ, ಹರಿನಾಥಜೋಗಿ, ದಿನೇಶ್ದೇವಾಡಿಗ, ಸುರೇಶ್ಕುಮಾರ್ ಕದ್ರಿ, ಮಾಜಿ ಮೇಯರ್ಗಳಾದ ಭಾಸ್ಕರ ಮೊಯಿಲಿ, ಶಶಿಧರ ಹೆಗ್ಡೆ, ಸಹಿತ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು ಹಾಗೂ ಭಕ್ತ ಸಮೂಹ ಈ ಸಂದರ್ಭ ಈ ವೇಳೆ ಉಪಸ್ಥಿರಿದ್ದರು.
Comments are closed.