ಕರಾವಳಿ

ಮಂಗಳೂರಿನಲ್ಲಿ ಕಾಶೀ ಮಠಾಧೀಶರಿಗೆ ಭವ್ಯ ಸ್ವಾಗತ

Pinterest LinkedIn Tumblr

ಮಂಗಳೂರು: ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಶ್ರೀ ಕಾಶೀ ಮಠಾಧೀಶ ಪರಮ ಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರನ್ನು ಬುಧವಾರ ಸಕಲ ಆದರ ಗೌರವಗಳೊಂದಿಗೆ ಸ್ವಾಗತಿಸಲಾಯಿತು.

ಶ್ರೀ ದೇವಳದ ಮೊಕ್ತೇಸರರಾದ ಸಿ. ಎಲ್ ಶೆಣೈ, ಪ್ರಶಾಂತ್ ರಾವ್, ರಾಮಚಂದ್ರ ಕಾಮತ್ ಹಾಗೂ ಸಾವಿರಾರು ಭಜಕರು ಈ ವೇಳೆ ಉಪಸ್ಥಿತರಿದ್ದರು.

ಇದೇ ಬರುವ ಗುರುವಾರ ದಿನಾಂಕ 16-05-2019 ರ ಶ್ರೀ ವ್ಯಾಸ ಜಯಂತಿಯಂದು ಶ್ರೀ ದೇವಳದ ಪ್ರಧಾನ ಆರಾಧ್ಯ ದೇವರಾದ ಶ್ರೀ ವೀರ ವೆಂಕಟೇಶ್ ದೇವರ ಉತ್ಸವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ಶ್ರೀ ದೇವರಿಗೆ ಸ್ವರ್ಣ ಗರುಡ ವಾಹನ ನಿರ್ಮಿಸಲಾಗಿದ್ದು ಇದರ ಸಮರ್ಪಣಾ ಕಾರ್ಯಕ್ರಮವು ಶ್ರೀಗಳವರ ಅಮೃತ ಹಸ್ತಗಳಿಂದ ನೆರವೇರಲಿರುವುದು.

ಈ ಪ್ರಯುಕ್ತ ನೂತನ ಸ್ವರ್ಣ ಗರುಡ ವಾಹನದ ಪುರಪ್ರವೇಶ ದಿನಾಂಕ 13.05.2019 ನೇ ಸೋಮವಾರ ಕೆನರಾ ಹೈಸ್ಕೂಲ್ ಡೊಂಗರಕೇರಿ ಬಳಿಯಿಂದ  ವರ್ಣರಂಜಿತ ಮೆರವಣಿಗೆ ಸಂಜೆ 5.00 ಘಂಟೆಗೆ ನಡೆಯಲಿರುವುದು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.