ಮಂಗಳೂರು : ಶ್ರೀ ಕಾಶೀಮಠ ಸಂಸ್ಥಾನದ ಪರಮಾಚಾರ್ಯ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರಿಂದ ಅನುಗ್ರಹಿಸಲ್ಪಟ್ಟ ಶ್ರೀ ದೇವರಿಗೆ ಸ್ವರ್ಣ ಗರುಡ ವಾಹನ ಯೋಜನೆಯು ಪೂರ್ಣಗೊಂಡಿದ್ದು, ಈ ನೂತನ ಸ್ವರ್ಣ ಗರುಡ ಸಮರ್ಪಣೆಯು ಶ್ರೀ ಕಾಶೀ ಮಠಾಧೀಶ ಪರಮ ಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ತಾ|| 16.05.2019ನೇ ಗುರುವಾರದಂದು ಬೆಳ್ಳಗ್ಗೆ 10.47ಕ್ಕೆ ನೆರವೇರಲಿದೆ.
ಪರಮ ಪೂಜ್ಯ ಗುರುವರ್ಯರ ಮೊಕ್ಕಾಂ ಶ್ರೀ ದೇವಳದಲ್ಲಿ ತಾ|| 08.05.2019 ರಿಂದ 19.05.2019 ರ ವರೆಗೆ ನಡೆಯಲಿರುವುದು.
ದಿನಾಂಕ 08.05.2019ನೇ ಬುಧವಾರದಂದು ಸಂಜೆ ಭಾಗಮಂಡಲ ಮೊಕ್ಕಾಂನಿಂದ ಆಗಮಿಸುವ ಶ್ರೀಗಳವರನ್ನು ಸ್ವದೇಶೀ ಸ್ಟೋರ್ ಬಳಿಯಿಂದ ಸ್ವರ್ಣ ಪಲ್ಲಕ್ಕಿಯಲ್ಲಿ ಪೂರ್ಣ ಕುಂಭ ಸ್ವಾಗತ ನೀಡಲಾಗುವುದು.
ನೂತನ ಸ್ವರ್ಣ ಗರುಡ ವಾಹನದ ಪುರಪ್ರವೇಶ :
ದಿನಾಂಕ 13.05.2019 ನೇ ಸೋಮವಾರ ಕೆನರಾ ಹೈಸ್ಕೂಲ್ ಡೊಂಗರಕೇರಿ ಬಳಿಯಿಂದ ನೂತನ ಸ್ವರ್ಣ ಗರುಡ ವಾಹನದ ಪುರಪ್ರವೇಶ ವರ್ಣರಂಜಿತ ಮೆರವಣಿಗೆ ಸಂಜೆ 5.00 ಘಂಟೆಗೆ ನಡೆಯಲಿದೆ ಎಂದು ಶ್ರೀ ದೇವಳದ ಮೋಕ್ತೇಸರರಾದ ಸಿ. ಎಲ್. ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Comments are closed.