ಕರಾವಳಿ

ಶ್ರೀ ವೆಂಕಟರಮಣ ದೇವಸ್ಥಾನ, ರಥಬೀದಿ, ಮಂಗಳೂರು : ಶ್ರೀ ವೀರವೆಂಕಟೇಶ ದೇವರಿಗೆ ನೂತನ ಸ್ವರ್ಣ ಗರುಡ ಸಮರ್ಪಣೆ

Pinterest LinkedIn Tumblr

ಮಂಗಳೂರು : ಶ್ರೀ ಕಾಶೀಮಠ ಸಂಸ್ಥಾನದ ಪರಮಾಚಾರ್ಯ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರಿಂದ ಅನುಗ್ರಹಿಸಲ್ಪಟ್ಟ ಶ್ರೀ ದೇವರಿಗೆ ಸ್ವರ್ಣ ಗರುಡ ವಾಹನ ಯೋಜನೆಯು ಪೂರ್ಣಗೊಂಡಿದ್ದು, ಈ ನೂತನ ಸ್ವರ್ಣ ಗರುಡ ಸಮರ್ಪಣೆಯು ಶ್ರೀ ಕಾಶೀ ಮಠಾಧೀಶ ಪರಮ ಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ  ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ತಾ|| 16.05.2019ನೇ ಗುರುವಾರದಂದು  ಬೆಳ್ಳಗ್ಗೆ 10.47ಕ್ಕೆ ನೆರವೇರಲಿದೆ.

ಪರಮ ಪೂಜ್ಯ ಗುರುವರ್ಯರ ಮೊಕ್ಕಾಂ ಶ್ರೀ ದೇವಳದಲ್ಲಿ ತಾ|| 08.05.2019 ರಿಂದ 19.05.2019 ರ ವರೆಗೆ ನಡೆಯಲಿರುವುದು.
ದಿನಾಂಕ 08.05.2019ನೇ ಬುಧವಾರದಂದು ಸಂಜೆ ಭಾಗಮಂಡಲ ಮೊಕ್ಕಾಂನಿಂದ ಆಗಮಿಸುವ ಶ್ರೀಗಳವರನ್ನು ಸ್ವದೇಶೀ ಸ್ಟೋರ್ ಬಳಿಯಿಂದ ಸ್ವರ್ಣ ಪಲ್ಲಕ್ಕಿಯಲ್ಲಿ ಪೂರ್ಣ ಕುಂಭ ಸ್ವಾಗತ ನೀಡಲಾಗುವುದು.

ನೂತನ ಸ್ವರ್ಣ ಗರುಡ ವಾಹನದ ಪುರಪ್ರವೇಶ :

ದಿನಾಂಕ 13.05.2019 ನೇ ಸೋಮವಾರ ಕೆನರಾ ಹೈಸ್ಕೂಲ್ ಡೊಂಗರಕೇರಿ ಬಳಿಯಿಂದ ನೂತನ ಸ್ವರ್ಣ ಗರುಡ ವಾಹನದ ಪುರಪ್ರವೇಶ ವರ್ಣರಂಜಿತ ಮೆರವಣಿಗೆ ಸಂಜೆ 5.00 ಘಂಟೆಗೆ ನಡೆಯಲಿದೆ ಎಂದು ಶ್ರೀ ದೇವಳದ ಮೋಕ್ತೇಸರರಾದ ಸಿ. ಎಲ್. ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Comments are closed.