ಕರಾವಳಿ

ಮಂಗಳೂರು ಸೆಂಟ್ರಲ್ ವಾರ್ಡಿನಲ್ಲಿ ಕುಡಿಯುವ‌ ನೀರಿನ ಸಮಸ್ಯೆ : ಶಾಸಕ ಕಾಮಾತ್‌ರಿಂದ ಪರಿಶೀಲನೆ

Pinterest LinkedIn Tumblr

ಮಂಗಳೂರು : ಕುಡಿಯುವ‌ ನೀರಿನ ಪೂರೈಕೆ ಇಲ್ಲದೆ ಸಮಸ್ಯೆ ಉಂಟಾಗಿರುವ ಸೆಂಟ್ರಲ್ ವಾರ್ಡಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಕೆಲ‌ದಿನಗಳಿಂದ ನೀರು ಪೂರೈಕೆ ಆಗದೆ ಸಂಕಷ್ಟದಲ್ಲಿರುವ ಗಟ್ಟಿಬಿತ್ಲು ಮತ್ತು ಟಿ.ಟಿ ರಸ್ತೆ ಪರಿಸರಕ್ಕೆ ಭೇಟಿ ನೀಡಿದ ಶಾಸಕರು ಸಾರ್ವಜನಿಕರ ಸಮಸ್ಯೆ ಆಲಿಸಿದರು.

ಜಿಲ್ಲಾಧಿಕಾರಿ ಅವರೊಂದಿಗೆ ಸಮಸ್ಯೆಯ ಕುರಿತು ಚರ್ಚಿಸಿ ತಕ್ಷಣವೇ ನೀರಿನ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ.ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಪೂರ್ಣಿಮಾ ಎಂ,ಮುರಳಿಧರ್ ನಾಯಕ್,ವಸಂತ್ ಜೆ ಪೂಜಾರಿ,ಪೂರ್ಣಿಮಾ ರಾವ್,ರಮೇಶ್ ಹೆಗ್ಡೆ,ಚರಿತ್ ಪೂಜಾರಿ,ಗಿರೀಶ್ ಕುಮಾರ್,ಭರತ್ ಮತ್ತಿತರರು ಉಪಸ್ಥಿತರಿದ್ದರು.

Comments are closed.