ಪ್ರಮುಖ ವರದಿಗಳು

ಅಳು ನಿಲ್ಲಿಸದ್ದಕ್ಕೆ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿದ ಅಂಗನವಾಡಿ ಆಯಾ !

Pinterest LinkedIn Tumblr

ಕೃಷ್ಣ: ಅಳು ನಿಲ್ಲಿಸದ ಕಾರಣ ಕ್ರೋಧಗೊಂಡ ಅಂಗನವಾಡಿ ಆಯಾ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿರುವ ಭಯಾನಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಭೂಷಣಗುಲ್ಲಾ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ.

ದಿನನಿತ್ಯದಂತೆ ಸೋಮವಾರ ಕೂಡ ಮಗುವಿನ ತಾಯಿ ಅಂಗನವಾಡಿಗೆ ಮಗು ಬಿಟ್ಟು ಹೋಗಿದ್ದಾರೆ, ಈ ವೇಳೆ ಮಗು ಅಂಗನವಾಡಿಗೆ ಹೋಗಲು ನಿರಾಕರಿಸಿ ಅಳುತ್ತಿತ್ತು. ಅಳುತ್ತಿದ್ದ ಮಗವನ್ನು ಅಂಗನವಾಡಿಯಲ್ಲಿಯೇ ಬಿಟ್ಟು ತಾಯಿ ತೆರಳಿದ್ದರು.

ಮಗು ಸಮಾಧಾನವಾಗದೇ ಅಳುತ್ತಿದ್ದ ಹಿನ್ನೆಲೆಯಲ್ಲಿ ಕೂಗಾಡಿದ ಆಯಾ, ಕುಮಾರಿ ಎಂಬಾಕೆ ಮಗುವಿನ ಬಾಯಿಗೆ ಮೆಣಸಿನಕಾಯಿ ಪುಡಿ ತುಂಬಿದ್ದಾಳೆ, ಈ ಸಂಬಂಧ ಪೋಷಕರು ಮತ್ತು ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Comments are closed.