ಕರಾವಳಿ

ಗೋಳಿಯಂಗಡಿ ಸುಚಿತ್ರಾ ರೇಪ್&ಮರ್ಡರ್ ಕೇಸ್ ಆರೋಪಿ ಸಾವು

Pinterest LinkedIn Tumblr

ಕುಂದಾಪುರ: ಕೆಲಸ ಮುಗಿಸಿ ಮನೆಗೆ ಸಾಗುತ್ತಿದ್ದ ಯುವತಿಯೋರ್ವಳನ್ನು ಅಡ್ಡಗಟ್ಟಿ ಅತ್ಯಾಚರ ನಡೆಸಿ, ಕೊಲೆ ಮಾಡಿದ ಆರೋಪ ಹೊತ್ತು ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮಣಿಕಂಠ (28) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ಸುಮಾರು ಎರಡುವರೆ ವರ್ಷಗಳ ಹಿಂದೆ ಅಂದರೆ ಅ.2 ರ ರಾತ್ರಿ ಕುಂದಾಪುರ ತಾಲೂಕಿನ ಗೋಳಿಯಂಗಡಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯ ನಿವಾಸಿಯಾಗಿರುವ ಸುಚಿತ್ರಾ ನಾಯ್ಕ್ (20) ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮಣಿಕಂಠ ಅದೇ ದಿನದಂದು ಬಂಧಿತನಾಗಿದ್ದ. ಹಿರಿಯಡಕ ಜೈಲಿನಲ್ಲಿದ್ದ ಆತ ಹಾಗೂ ಸಹ ಖೈದಿಗಳನ್ನು ಇತ್ತೀಚೆಗೆ ಜೈಲಿ ಕಟ್ಟದದ ದುರಸ್ಥಿ ನಿಮಿತ್ತ ಕಾರವಾರಕ್ಕೆ ಸ್ಥಳಾಂತರಿಸಲಾಗಿತ್ತು. ಕಾರಾವರ ಜೈಲಿಗೆ ತೆರಳಿದ ಬಳಿಕ ಅನಾರೋಗ್ಯಕ್ಕೆ ತುತ್ತಾದ ಮಣಿಕಂಠನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಆತ ಅಲ್ಲಿಯೇ ಮೃತಪಟ್ಟಿದ್ದಾನೆ. ಆತ ನ್ಯುಮೋನಿಯಾ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಗೋಳಿಯಂಗಡಿ ಪೇಟೆಯಲ್ಲಿರುವ ದಿನಸಿ ಹಾಗೂ ಹಾರ್ಡವೇರ್‍ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಚಿತ್ರಾ ನಾಯ್ಕ್ ಅ.೨ ಸಂಜೆ ಮಾತ್ರ ಕೆಲಸ ಮುಗಿಸಿ ಮನೆಗೆ ಹೊರಟ ಆಕೆ ಮನೆ ಸೇರಿರಲಿಲ್ಲ. ಆಕೆ ಮನೆಗೆ ಬಾರದ ಹಿನ್ನೆಲೆ ಆಕೆ ಮನೆಯವರು ಆಕೆಯನ್ನು ಎಲ್ಲೆಡೆ ಹುಡುಕಾಡಿದ್ದರು. ಹೀಗೆ ಆಕೆ ಮನೆಗೆ ತೆರಳುವ ಕಾಲು ಹಾದಿಯಲ್ಲೂ ಹುಡುಕಾಟ ನಡೆಸಿದ್ದರು ಇದೇ ವೇಳೆ ಅರೆನಗ್ನ ಸ್ಥಿತಿಯಲ್ಲಿ ಸುಚಿತ್ರಾ ಶವ ಹಾಡಿಯಲ್ಲಿ ಪತ್ತೆಯಾಗಿತ್ತು.

ಇದೇ ವೇಳೆ ಬಾರೊಂದರಲ್ಲಿ ಕುಡಿದು ಯಾರದೋ ಬಳಿ ತಾನು ಹುಡುಗಿಯನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡ ಮಣಿಕಂಠನ ಬಗ್ಗೆ ಅನುಮಾನದಿಂದಲೇ ಸ್ಥಳೀಯರು ಆತನನ್ನು ಹಿಡಿದಿಟ್ಟುಟ್ಟಿದ್ದರು. ಆರೋಪಿಯು ಆಕೆಯನ್ನು ಹಲವು ಮೀಟರುಗಳ ದೂರವೇ ಅತ್ಯಾಚಾರ ನಡೆಸಿ ಬಳಿಕ ಶವವನ್ನು ಎಳೆದು ತಂದು ಪೊದೆ ಸಮೀಪ ಎಸೆದಿದ್ದಾನೆ ಎನ್ನಲಾಗುತ್ತಿದೆ. ಸುಚಿತ್ರಾ ಶವದ ಮೇಲೆ ಕತ್ತಿಯಿಂದ ಕಡಿದ ರೀತಿಯ ಗಾಯದ ಗುರುತುಗಳಿದ್ದು ಆಕೆಯನ್ನು ಅಮಾನುಷವಾಗಿ ಕೊಲೆಗೈಯಲಾಗಿತ್ತು. ಸುಚಿತ್ರಾಳನ್ನು ಕೊಲೆ ಮಾಡಿದ ನಟೋರಿಯಸ್ ಆಗಿರುವ ಮಣಿಕಂಠ ಆ ಮೊದಲು ಕೂಡ ಯುವತಿಯೋರ್ವಳನ್ನು ಅಡ್ಡಗಟ್ಟಿ ಮಾನಭಂಗಕ್ಕೆ ಯತ್ನಿಸಿದ ಕೇಸಿನಲ್ಲಿ ಜೈಲುವಾಸ ಅನುಭವಿಸಿ ಬಂದಿದ್ದ.

ಆತನ ಶವವನ್ನು ಕುಟುಂಬಿಕರು ಊರಿಗೆ ತಂದಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿದೆ.

ಇದನ್ನೂ ಓದಿರಿ: ಕುಂದಾಪುರ: ಗೋಳಿಯಂಗಡಿಯಲ್ಲಿ ರೇಪ್&ಮರ್ಡರ್: ಶಂಕಿತ ಆರೋಪಿ ಅಂದರ್ (pics updated)

ಕಾಮುಕನ ಕ್ರೌರ್ಯಕ್ಕೆ ಕಮರಿ ಹೋದ ಕುಂದಾಪುರ ಕಾರಿಕೊಡ್ಲು ಸುಚಿತ್ರಾ

ಗೋಳಿಯಂಗಡಿಯಲ್ಲಿ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕ್ತೇವೆ: ಉಡುಪಿ ಎಸ್ಪಿ ಕೆ. ಅಣ್ಣಾಮಲೈ

 

Comments are closed.