Uncategorized

ಕಾಮುಕನ ಕ್ರೌರ್ಯಕ್ಕೆ ಕಮರಿ ಹೋದ ಕುಂದಾಪುರ ಕಾರಿಕೊಡ್ಲು ಸುಚಿತ್ರಾ

Pinterest LinkedIn Tumblr

ಉಡುಪಿ: ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಆ ಪುಟ್ಟ ಊರಿನಲ್ಲಿ ಶೋಕದ ಛಾಯೆ ಆವರಿಸಿದೆ. ಕಟುಕನೋರ್ವನ ಅಮಾನವೀಯ ಕೃತ್ಯಕ್ಕೆ ಊರಿಗೆ ಊರೇ ಆತನ ವಿರುದ್ಧ ಹಿಡಿಶಾಪ ಹಾಕ್ತಿದೆ. ಇನ್ನು ಬಾಳಿ ಬದುಕಬೇಕಿದ್ದ ಯುವತಿಯೋರ್ವಳು ಕಟುಕನ ಕ್ರೌರ್ಯಕ್ಕೆ ಬಲಿಯಾಗಿದ್ದು ಆಕೆಯ ಮನೆಯಲ್ಲಿ ನೀರವ ಮೌನ ಆವರಿಸಿದೆ.

Jpeg
                                (ಕೊಲೆಯಾದ ಸುಚಿತ್ರಾ)

Goliyangadi_Suchitra_Rape&Murder (5)

(ಕೊಲೆಗಾರ ಮಣಿಕಂಠ)

ಮಧ್ಯ ರಾತ್ರಿ ಓರ್ವ ಹೇಣ್ಮಗಳು ಒಂಟಿಯಾಗಿ ನಿರ್ಭಯಳಾಗಿ ತಿರುಗಿದರೇ ಅಂದು ನಮಗೆ ಸ್ವಾತಂತ್ರ್ಯ ದಕ್ಕಿದಂತೆ ಎಂದು ರಾಷ್ಟ್ರಪಿತ ಮಹತ್ಮಾಗಾಂಧೀಜಿ ಹೇಳಿದ್ರು. ಆದರೇ ಅವರ ಜಯಂತಿಯ ಹಿಂದಿನ ದಿನ ಅಂದ್ರೇ ಅಕ್ಟೋಬರ್ ಒಂದನೇ ತಾರೀಕಿನ ಸಂಜೆ ಕತ್ತಲೆಗೂ ಮೊದಲೇ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದ ಯುವತಿ ಮಾತ್ರ ಮನೆಗೆ ಸೇರಿರಲಿಲ್ಲ. ಅವಳು ಕೊನೆಗೆ ಸಿಕ್ಕಿದ್ದು ನಿರ್ಜನ ಹಾಡಿಯ ಪೊದೆಯಲ್ಲಿ ಅದು ನಗ್ನಾವಸ್ಥೆಯಲ್ಲಿ ಹೆಣವಾಗಿ ಮಲಗಿದ್ದಳು ಆಕೆ. ಅಷ್ಟಕ್ಕೂ ಅಲ್ಲಿ ಆಕೆ ಮೇಲೆ ಅಮಾನುಷವಾದ ಅತ್ಯಾಚಾರ ನಡೆಸಿ ಕಲ್ಲು ಎತ್ತಿಹಾಕಿ ಕೊಲ್ಲಲಾಗಿತ್ತು. ಕೊಂದ ಪಾತಕಿಯಾದರೂ ಯರು ಅಂತೀರಾ.. ಅದೇ ಊರಿನ ನಟೋರಿಯಸ್ ಕ್ರಿಮಿನಲ್ ಮಣಿಕಂಠ.

ಹೆಸರಿಗೆ ಮಾತ್ರ ದೇವರ ಹೆಸರಿನ್ನಿಟ್ಟುಕೊಂಡಿರುವ ಈ ಮಣಿಕಂಠ ಹೆಣ್ಣುಮಕ್ಕಳ ಪಾಲಿಗೆ ಪೀಡಕನಾಗಿದ್ದ ಅಂತಾರೇ ಅವನದೇ ಊರಿನವರು. ಈ ಹಿಂದೆ ಯುವತಿಯೋರ್ವಳ ಮಾನಭಂಗಕ್ಕೆ ಯತ್ನಿಸಿದ ಕುರಿತು ತಿಂಗಳುಗಟ್ಟಲೆ ಜೈಲುವಾಸ ಅನುಭವಿಸಿ ಹೊರಬಂದಿದ್ದ ಆತ ಮಾತ್ರ ಬುದ್ದಿ ಕಲಿತಿರಲಿಲ್ಲ. ಜೈಲುವಾಸದ ಬಳಿಕ ಆತನ ಕಣ್ಣಿಗೆ ಬಿದ್ದಿದ್ದೆ ಕಾರಿಕೊಡ್ಲುವಿನ ಸುಚಿತ್ರಾ.

Goliyangadi_Suchitra_Rape&Murder (21) Goliyangadi_Suchitra_Rape&Murder (16)

(ಸುಚಿತ್ರಾ ಅವರ ಮನೆ & ತಂದೆ ಮತ್ತು ಅಕ್ಕ)

Goliyangadi_Suchitra_Rape&Murder (15) Goliyangadi_Suchitra_Rape&Murder (14) Goliyangadi_Suchitra_Rape&Murder (12) Goliyangadi_Suchitra_Rape&Murder (17) Goliyangadi_Suchitra_Rape&Murder (13) Goliyangadi_Suchitra_Rape&Murder (19) Goliyangadi_Suchitra_Rape&Murder (4) Goliyangadi_Suchitra_Rape&Murder (10) Goliyangadi_Suchitra_Rape&Murder (9) Goliyangadi_Suchitra_Rape&Murder (8) Goliyangadi_Suchitra_Rape&Murder (22) Goliyangadi_Suchitra_Rape&Murder (3) Goliyangadi_Suchitra_Rape&Murder (18) Goliyangadi_Suchitra_Rape&Murder (11) Goliyangadi_Suchitra_Rape&Murder (1) Goliyangadi_Suchitra_Rape&Murder (2)

ಗೋವಿಂದ ನಾಯ್ಕ್ ಹಾಗೂ ಕಾವೇರಿ ದಂಪತಿಗಳ ಆರು ಜನ ಮಕ್ಕಳ ಪೈಕಿ ಕೊನೆಯವಳಾದ ಸುಚಿತ್ರಾ ಎಸ್ಸೆಲ್ಸಿ ವಿದ್ಯಾಭ್ಯಾಸದ ತರುವಾಯ ಕಳೆದ ಮೂರು ವರ್ಷಗಳಿಂದ ಗೋಳಿಯಂಗಡಿ ಪೇಟೆಯಲ್ಲಿರುವ ದಿನಸಿ ಹಾಗೂ ಹಾರ್ಡವೇರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ನಿತ್ಯ ಸಂಜೆ ಕೆಲಸ ಮುಗಿಸಿ ಸುಚಿತ್ರಾ ನಾಯ್ಕ್ ನಿತ್ಯ ೫.೪೫ಕ್ಕೆ ಮನೆಗೆ ತೆರಳುತ್ತಿದ್ದಳು. ಮನೆಗೆ ತೆರಳುವ ಗೋಳಿಯಂಗಡಿಯ ಕಾರಿಕೊಡ್ಲು ಮಾರ್ಗ ದುರ್ಗಮವಾಗಿದ್ದು ನಿತ್ಯ ಸಂಚಾರವಾದ್ದರಿಂದ ನಿರ್ಭಯಳಾಗಿಯೇ ತೆರಳುತ್ತಿದ್ದಳು ಈ ಯುವತಿ. ಆದರೇ ಗುರುವರ ಸಂಜೆ ಮಾತ್ರ ಕೆಲಸ ಮುಗಿಸಿ ಮನೆಗೆ ಹೊರಟ ಆಕೆ ಮನೆ ಸೇರಿರಲಿಲ್ಲ. ಆಕೆ ಮನೆಗೆ ಬಾರದ ಹಿನ್ನೆಲೆ ಆಕೆ ಮನೆಯವರು ಆಕೆಯನ್ನು ಎಲ್ಲೆಡೆ ಹುಡುಕಾಡಿದ್ದರು. ಹೀಗೆ ಆಕೆ ಮನೆಗೆ ತೆರಳುವ ಕಾಲು ಹಾದಿಯಲ್ಲೂ ಹುಡುಕಾಟ ನಡೆಸಿದ್ದರು ಸತತ ಹುಡುಕಾಟದ ಬಳಿಕ ಕಾಲು ಹಾದಿಯಿಂದ ಕೆಲವು ಮೀಟರು ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಸುಚಿತ್ರಾ ಶವ ಹಾಡಿಯಲ್ಲಿ ಪತ್ತೆಯಾಗಿತ್ತು.

ಆಕೆ ಮನೆಗೆ ಹೋಗುವುದನ್ನೇ ಕಾದಿದ್ದ ಈತ ನಿರ್ಜನ ಪ್ರದೇಶದ ಹತಿರ ಆಕೆಯನ್ನು ಅಡ್ಡಗಟ್ಟಿ ಕೈ ಹಿಡಿದು ಬಲವಂತವಾಗಿ ಎಳೆದೊಯ್ಯುತ್ತಾನೆ. ಬಾಯಿ ಮುಚ್ಚಿಸಿ, ಆಕೆಯ ಬ್ಯಾಗನ್ನು ಅಲ್ಲಿಯೇ ಎಸೆದು ಆಕೆಯನ್ನು ವಿವಸ್ತ್ರಗೊಳಿಸುತ್ತಾ ಸಾಗುವ ಆತ ಸಮೀಪದ ಪೊದೆಯಲ್ಲಿ ಆಕೆ ಮೇಲೆ ಅತ್ಯಾಚಾರಕ್ಕೆ ನಡೆಸುತ್ತಾನೆ. ಬಳಿಕ ಆಕೆಯ ಕೊಸರಾಟದಿಂದ ಹಗೂ ಅಕೆ ಯಾರದ್ದಾದರೂ ಬಳಿ ಹೇಳಿಯಾಳು ಎಂಬ ಭಯದಿಂದಲೇ ಸಮೀಪದಲ್ಲಿದ್ದ ಶಿಲೆಗಲ್ಲಿನಿಂದ ಜಜ್ಜಿ ಆಕೆಯನ್ನು ಕೊಲ್ಲುತ್ತಾನೆ. ಅಲ್ಲದೇ ಆಕೆಯ ಶವವನ್ನು ಫ್ಲಾಸ್ಟಿಕ್ ಚೀಲವೊಂದಕ್ಕೂ ತುಂಬಿಸುವ ಪ್ರಯತ್ನ ಮಾಡುತ್ತಾನಾದರೂ ಅದು ಅಸಾಧ್ಯವಾದ ಕಾರಣ ಆಕೆ ಮ್ರತದೇಹವನ್ನು ಎತ್ತಿಕೊಂಡು ಕೆಲ ಮೀಟರುಗಳ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ಎಸೆದು ಕಾಲ್ಕೀಳುತ್ತಾನೆ.

ಇತ್ತ ಸುಚಿತ್ರಾ ಮನೆಗೆ ಬಾರದ ಬಗ್ಗೆ ಮನೆಯವರು ಗಾಬರೀಯಾಗಿ ಎಲ್ಲೆಡೆ ವಿಚಾರಿಸುತ್ತಾರೆ. ಇದೇ ವೇಳೆ ಗೋಳಿಯಂಗಡಿ ಪೇಟೆಯಲ್ಲಿ ಮಣಿಕಂಠ ವ್ಯಕ್ತಿಯೋರ್ವನ ಬಳಿ ತಾನು ಹುಡುಗಿಯನ್ನು ಕೊಲೆ ಮಾಡಿರುವುದಾಗಿ ಆ ಶವವನ್ನು ವಿಲೇವಾರಿ ಮಾಡಲು ಸಹಕರಿಸುವಂತೆ ಹೇಳಿಕೊಂಡಿದ್ದು ಈ ವಿಚಾರವನ್ನು ಆ ವ್ಯಕ್ತಿ ಸ್ಥಳಿಯರಿಗೆ ತಿಳಿಸಿದ್ದ. ಊರಿನಲಿ ಯುವತಿ ನಾಪತ್ತೆಯಾಗಿರುವುದಕ್ಕೂ ಮಣಿಕಂಠನ ಕೊಲೆ ರಹಸ್ಯಕ್ಕೂ ಸಂಬಂದವಿದೆಯೆಂದು ಗೊತ್ತಗಿದ್ದೇ ಪ್ರತ್ಯೇಕತಂಡಗಳಲ್ಲಿ ಹುಡುಕಾಟ ನಡೆಸುತ್ತಾರೆ ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸತತ ಹುಡುಕಾಟದ ಬಳಿಕ ಸುಚಿತ್ರಾ ಮೃತದೇಹ ಪತ್ತೆಯಾಗಿದ್ದು ಅದೊಂದು ಅತ್ಯಾಚಾರ ಹಾಗೂ ಕೊಲೆ ಪ್ರಕರಣವೆಂದು ಸಾಬೀತಾಗುತ್ತದೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಮಣಿಕಂಠನನ್ನು ವಶಕ್ಕೆ ಪಡೆದು ಬಾಯ್ಬಿಡಿಸಿದಾಗ ನಿಜವನ್ನು ಬಾಯ್ಬಿಡುತ್ತಾನೆ.

ಗೋವಿಂದ ಕಾವೇರಿ ದಂಪತಿಗಳ ಆರು ಹೆಣ್ಮಕ್ಕಳ ಪೈಕಿ ಈಕೆ ಹಾಗೂ ಇನ್ನೋರ್ವಳು ಅವಳಿಗಳಾಗಿದ್ದರು. ಮನೆ ಮಗಳ ಅಗಲುವಿಕೆಯಿಂದ ಇಡೀ ಕುಟುಂಬ ಚಿಂತಕ್ರಾಂತವಾಗಿದೆ. ಘಟನಾ ಸ್ಥಳಕ್ಕೆ ಗುರುವಾರ ರಾತ್ರಿಯೇ ಉಡುಪಿ ಎಸ್ಪಿ ಕೆ. ಅಣ್ಣಾಮಲೈ, ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ, ವೃತ್ತನಿರೀಕ್ಷಕ ದಿವಾಕರ್, ಶಂಕರನಾರಾಯಣ ಠಾಣೆ ಎಸ್ಸೈ ದೇಜಪ್ಪ, ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕ ಜಯಶಂಕರ್, ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡೇಂಟ್ ರಾಜೇಶ್ ಕೆ.ಸಿ. ಮೊದಲಾದವರು ಭೇಟಿ ನೀಡಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ಮಣಿಪಾಲ ಕೆ.ಎಂ.ಸಿ.ಯಲ್ಲಿ ನಡೆಸಿ ಮನೆಯವರಿಗೆ ಹಸ್ತಾಂತರಿಸಲಾಗಿದೆ.

ತಮ್ಮ ಊರಿನ ಸುಚಿತ್ರಾ ನಾಯ್ಕ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಿಯಂಗಡಿ ಶುಕ್ರವಾರ ಅಕ್ಷರಶಃ ಸ್ತಬ್ಧವಾಗಿತ್ತು. ಶುಕ್ರವಾರ ಬೆಳಿಗ್ಗೆನಿಂದ ಸಂಜೆಯವರೆಗೂ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಲಾಗಿತ್ತು. ಸೂಕ್ತ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷ ಒದಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಗೋಳಿಯಂಗಡಿ ಜಂಕ್ಷನ್ ವರೆಗೂ ಮೌನ ಮೆರವಣಿಗೆ ನಡೆಸಿದರು.

ಬಡಕುಟುಂಬದ ಹೆಣ್ಮಗಳು ಮನೆಯವರಿಗೆ ಬೆನ್ನೆಲುಬಾಗಿ ನಿಲ್ಲಲು ತನ್ನ ಕಾಲಮೇಲೆ ತಾನು ನಿಂತಿದ್ದಳು. ಆದ್ರೇ ಕ್ರೂರಿಯೊಬ್ಬನ ನೀಚ ಕಾರ್ಯಕ್ಕೆ ಆಕೆ ಇನ್ನೆಂದೂ ಬಾರದಂತೆ ಕಣ್ಮರೆಯಾಗಿದ್ದಾಳೆ. ಅವಳ ಮನೆಯವರಿಗೆ ಈಕೆಯಿನ್ನೂ ನೆನಪು ಮಾತ್ರ..

ವರದಿ- ಯೋಗೀಶ್ ಕುಂಭಾಸಿ

Write A Comment