ಕರ್ನಾಟಕ

ಶಿವಮೊಗ್ಗದ ಕುಂಸಿ ಬಳಿ ಮರಕ್ಕೆ ಢಿಕ್ಕಿ ಹೊಡೆದ ಓಮ್ನಿ ಕಾರು; ಮೂರು ಮಂದಿ ಬಲಿ

Pinterest LinkedIn Tumblr

accid

ಶಿವಗೊಗ್ಗ: ಶಿವಮೊಗ್ಗ ಜಿಲ್ಲೆಯ ಕುಂಸಿ ಬಳಿ ಓಮ್ನಿ ಕಾರೊಂದು ಮರಕ್ಕೆ ಢಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ನಡೆದಿದೆ.

ಈ ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಸಿಗಂದೂರಿಗೆ ತೆರಳುತ್ತಿದ್ದ ವಾಹನ ಢಿಕ್ಕಿ ಹೊಡೆದಿದ್ದು ಮೃತರು ಬೆಂಗಳೂರಿನ ನಿವಾಸಿಗಳಾದ ಧನಂಜಯ್‌, ಜಯದೇವ್‌ ಮತ್ತು ಮಂಜುನಾಥ್‌ ಎಂದು ಗುರುತಿಸಲಾಗಿದೆ.

ರಸ್ತೆಯಲ್ಲಿ ಹಂದಿ ಅಡ್ಡ ಬಂದ ಕಾರಣ ಅದನ್ನು ತಪ್ಪಿಸಲು ಮುಂದಾದಾಗ ಕಾರು ಮರಕ್ಕೆ ಢಿಕ್ಕಿ ಹೊಡದಿದೆ ಎಂದು ಹೇಳಲಾಗುತ್ತಿದೆ.

Comments are closed.