ಕರ್ನಾಟಕ

ಮೊಬೈಲ್​ ಆಸೆಗಾಗಿ ಟೆಕ್ಕಿಯೊಬ್ಬನನ್ನು ಕೊಂದ ದರೋಡೆಕೋರರು

Pinterest LinkedIn Tumblr

21

ಮೈಸೂರು: ಕೇವಲ 10 ಸಾವಿರ ಬೆಲೆಬಾಳುವ ಮೊಬೈಲ್ ಆಸೆಗಾಗಿ ಟೆಕ್ಕಿಯೊಬ್ಬನನ್ನು ಕೊಂದ ಘಟನೆ ಮೈಸೂರಿನಲ್ಲಿ ನಡೆದಿದೆ. ಅಕ್ಟೋಬರ್ 18 ರಂದು ಈ ಘಟನೆ ನಡೆದಿದ್ದು, ಮೃತಪಟ್ಟ ವ್ಯಕ್ತಿ ಬಳ್ಳಾರಿ ಮೂಲದ ಬಸವರಾಜ್ ಹಳಗುಂಡಿ ಎಂದು ತಿಳಿದು ಬಂದಿದೆ.

ಇತ್ತ ಖಾಸಗಿ ಕಂಪನಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿದ್ದು, ಮೂವರು ದರೋಡೆಕೋರರು ಇತನ ಕೈಯಲ್ಲಿದ ಮೊಬೈಲ್ ಆಸೆಗೆ ಬಿದ್ದು, ಅದನ್ನು ಕಸಿದುಕೊಳ್ಳುವ ಭರದಲ್ಲಿ ಆತನ ಹೃದಯವನ್ನೇ ಬಗೆದಿದ್ದಾರೆ. ಇಷ್ಟಾದರೂ ಪೊಲೀಸರಿಗೆ ಬಸವರಾಜು ಕೊಲೆ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಆದರೆ ಈ ಮೂವರು ಖದೀಮರು ಬಸವರಾಜ್ನ್ನು ಕೊಂದು ಆತನ ಬಳಿ ತೆಗೆದುಕೊಂಡು ಹೋಗಿದ್ದ ಮೊಬೈಲ್ ಇದ್ದಕಿದ್ದಂತೆ ಸ್ವಿಚ್ ಆನ್ ಆದಾಗ ಪೊಲೀಸರಿಗೆ ಮೊದಲ ಸುಳಿವು ಸಿಕ್ಕಿತ್ತು. ಇದನ್ನೇ ಬೆನ್ನತ್ತಿ ಹೋದ ಪೊಲೀಸರು ಮೂವರು ದರೋಡೆಕೋರರು ಸಿಕ್ಕಿಬಿದ್ದಿದ್ದಾರೆ.

ಬಂಧಿತರನ್ನು ಮೈಸೂರಿನ ನಂದೀಶ್ ಮತ್ತು ವಿನೋದ್ ಹಾಗೂ ಮಂಡ್ಯದ ಮಂಜುನಾಥ್ ಎನ್ನಲಾಗಿದೆ. ಆದರೆ ಕೇವಲ 10 ಸಾವಿರ ಬೆಲೆಯ ಮೊಬೈಲ್ ಆಸೆಗಾಗಿ ಒಬ್ಬ ವ್ಯಕ್ತಿಯನ್ನೇ ಕೊಂದಿರುವುದು ಅಮಾನುಷವಾಗಿದೆ.

Comments are closed.