ಮುಂಬೈ: ಸಲಿಂಗ ಸಂಬಂಧದಲ್ಲಿದ್ದ ಇಬ್ಬರು ಯುವತಿಯರ ಮನೆಯವರು ತಮ್ಮ ಸಂಬಂಧವನ್ನು ಒಪ್ಪದೇ ದೂರ ಮಾಡಿದರೂ ಎಂಬ ಕಾರಣಕ್ಕೆ ಒಬ್ಬಳು ಆತ್ಮಹತ್ಯೆಗೆ ಶರಣಾಗಿದ್ದರೆ, ಮತ್ತೊಬ್ಬಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ಇಂತಹದೊಂದು ಘಟನೆ ಮುಂಬೈನ ಸುಮನ್ ನಗರದಲ್ಲಿ ನಡೆದಿದ್ದು, ಹಲವು ದಿನಗಳಿಂದ ಸಲಿಂಗಿ ಸಂಬಂಧದಲ್ಲಿದ್ದ 21 ವರ್ಷದ ಯುವತಿಯರಾದ ರೋಷಿನಿ ಟಂಡೇಲ್ ಹಾಗೂ ರಜುಕ್ತಾ ಗಾವಂದ್ ಅವರನ್ನು ಮನೆಯವರು ಬೇರೆ ಮಾಡಿದರು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಲ್ಲಿ ರೋಷಿನಿ ಸಾವನ್ನಪ್ಪಿದ್ದರೆ, ರಜುಕ್ತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.
ಏನಿದು ಘಟನೆ?: ಒಂದೇ ಏರಿಯಾದಲ್ಲಿ ಈ ಇಬ್ಬರು ಯುವತಿಯರಲ್ಲಿ ರೋಷಿನಿ ರಾಜಕೀಯ ಇನ್ನಿತರ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರೆ ರಜುಕ್ತಾ ತನ್ನ ತಂದೆಯ ಫಾಸ್ಟ್ ಫುಡ್ ಬ್ಯುಸಿನೆಸ್ನಲ್ಲಿ ಕೈ ಜೋಡಿಸಿದ್ದಳು. ಈ ಅಂಗಡಿ ರೋಷಿನಿ ಮನೆಯ ಎದುರೇ ಇತ್ತು. ದಿನೇ ದಿನೇ ಇವರಿಬ್ಬರ ಸ್ನೇಹ ಸಲಿಂಗಿ ಸಂಬಂಧವಾಗಿ ಬೆಳೆದಿದೆ. ಹೀಗಿರುವಾಗ ಒಂದು ದಿನ ಇವರಿಬ್ಬರು ಡೇಟಿಂಗೆಂದು ಹೋಗಿದ್ದಾರೆ. ಇದನ್ನು ರಜುಕ್ತಾ ಸಂಬಂಧಿ ಆಕೆಯ ತಂದೆಗೆ ತಿಳಿಸಿದ್ದಾರೆ.
ಇದರಿಂದ ಕೋಪಿತರಾದ ರಜುಕ್ತಾ ತಂದೆ ಆಕೆಗೆ ಜೋರು ಮಾಡಿದ್ದಲ್ಲದೇ ರೋಷಿನಿಯನ್ನ ಭೇಟಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಇತ್ತ ರೋಷಿನಿ ತಂಗಿಗೆ ಅಮೃತಾಳಿಗೆ ಕರೆ ಮಾಡಿ ಸ್ಥಳೀಯ ರಾಜಕೀಯ ವ್ಯಕ್ತಿಯೊಬ್ಬರ ಕಚೇರಿಗೆ ಭೇಟಿಮಾಡಲು ಬರುವಂತೆ ತಿಳಿಸಿದ್ದಾರೆ. ಅದರಂತೆ ಅಲ್ಲಿ ರೋಷಿನಿಗೆ ಮಗಳನ್ನ ಭೇಟಿಯಾಗದಂತೆ ಎಚ್ಚರಿಸಿದ್ದಾರೆ. ನಮ್ಮ ಸಂಬಂಧಕ್ಕೆ ಅಡ್ಡಿ ಆಗಿದ್ದಕ್ಕೆ ರಜುಕ್ತಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಆಕೆಯನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಇದರಿಂದ ನೊಂದ ರೋಷಿನಿ ಮನೆಗೆ ಬಂದು ರಾತ್ರಿ ನೇಣಿಗೆ ಶರಣಾಗಿದ್ದಾಳೆ. ಆದ್ರೆ ರಜುಕ್ತಾ ಸಾವಿನ ದವಡೆಯಿಂದ ಹೊರಬಂದಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ರಜುಕ್ತಾ ತಂದೆಯನ್ನ ಬಂಧಿಸಿದ್ದಾರೆ. ಜೊತೆಗೆ ರಾಜಕೀಯ ವ್ಯಕ್ತಿ ಹಾಗೂ ರೋಷಿನಿ ತಂದೆಯನ್ನ ಬಂಧಿಸಿದ್ದಾರೆ.
Comments are closed.