Mumbai

ವಸತಿ ಹಣಕಾಸು ಪ್ರವರ್ತಕ ಬಿ.ಕೆ. ಮಧುರ್ ಅವರ ಆತ್ಮಕಥೆ ‘ಅಟ್ ಹೋಮ್ ಇನ್ ದಿ ಯೂನಿವರ್ಸ್’ ಬಿಡುಗಡೆ

Pinterest LinkedIn Tumblr

ಮುಂಬಯಿ : ಬಿ.ಕೆ. ಮಧುರ್ ಅವರ ಆತ್ಮಕಥೆ ’ಅಟ್ ಹೋಮ್ ಇನ್ ದಿ ಯೂನಿವರ್ಸ್, ದಕ್ಷಿಣ ಭಾರತದ ಹಳ್ಳಿಯೊಂದರಿಂದ ಬಂದು ಆರು ದಶಕಗಳಿಂದ ಕಾರ್ಪೊರೇಟ್ ಯಶಸ್ಸು ಮತ್ತು ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆಯನ್ನು ಕಂಡ ಬಡ ಹುಡುಗನ ಪ್ರಯಾಣವನ್ನು ವಿವರಿಸುವ ಪುಸ್ತಕವನ್ನು ಡಿಸೆಂಬರ್ 6 ರಂದು ಭಾರತ ಸರಕರದ ರಸ್ತೆ ಅಭಿವೃದ್ಧಿ ಸಚಿವಾಲಯದ ಸಲಹೆಗಾರರಾದ ಆರ್.ಸಿ. ಸಿನ್ಹಾ, IAS (Rtd), ಅವರು ಈ ಪುಸ್ತಕವನ್ನು ಮುಂಬಯಿಯಲ್ಲಿ ಬಿಡುಗಡೆಗೊಳಿಸಿದರು.

ಈ ಆತ್ಮಚರಿತ್ರೆಯಲ್ಲಿ DHFL ಪ್ರಾಪರ್ಟಿ ಸರ್ವಿಸಸ್ ಲಿಮಿಟೆಡ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ , ಬಿ.ಕೆ. ಮಧೂರು ಅವರು ದಕ್ಷಿಣ ಭಾರತದ ಹಳ್ಳಿಯೊಂದರಲ್ಲಿ (ಇಂದಿನ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ) ಭೂರಹಿತ ರೈತ ಮತ್ತು ದೈನಂದಿನ ಕೂಲಿ ಕಾರ್ಮಿಕನ ಮಗನಾಗಿ ಜೀವನದ ಆರಂಭದಲ್ಲಿ ಎದುರಿಸಿದ ಅಡೆತಡೆಗಳನ್ನು ಹಂಚಿಕೊಳ್ಳುತ್ತಾರೆ.

ತಾಯಿಯಿಂದ ಆಶೀರ್ವದಿಸಲ್ಪಟ್ಟ ಬಾಲಕ, ಎಲ್ಲಾ ಮುಂದಿನ ಶಿಕ್ಷಣವನ್ನು ಪಡೆಯಲು ಕನಸುಗಳ ನಗರವಾದ ಮುಂಬೈಗೆ ಬರುತ್ತಾರೆ, 344 ಪುಟಗಳ ಈ ಪುಸ್ತಕದಲ್ಲಿ ಅವರು ತನ್ನ ಜೀವನದಲ್ಲಿನ ಎಲ್ಲಾ ಬದಲಾವಣೆಗಳನ್ನು ಪಟ್ಟಿಮಾಡುತ್ತದೆ.

1984 ರಲ್ಲಿ ದೇಶದ ಉನ್ನತ ಹೌಸಿಂಗ್ ಫೈನಾನ್ಸ್ ಕಂಪನಿಗಳಲ್ಲಿ ಒಂದಾದ ದಿವಾನ್ ಹೌಸಿಂಗ್ ಅನ್ನು ಸ್ಥಾಪಿಸಲು ಸಹಕರಿಸಿದ ಸಮಯದಲ್ಲಿ ಅವರು ಸಾಮಾನ್ಯ ಸೇಲ್ಸ್ ಮ್ಯಾನ್ ನಿಂದ ಮಾರ್ಕೆಟಿಂಗ್ ನಲ್ಲಿ ಯಶಸ್ಸಿ ಪಡೆದ ಬಗ್ಗೆ ಈ ಪುಸ್ತಕದಲ್ಲಿ ನಮೂದಿಸಿದ್ದಾರೆ.

1980 ರ ದಶಕದಲ್ಲಿ ಹೌಸಿಂಗ್ ಫೈನಾನ್ಸ್ ಕ್ಷೇತ್ರದಲ್ಲಿ ಪ್ರವರ್ತಕರಾಗಿ, ಮಧೂರು ದಿವಾನ್ ಹೌಸಿಂಗ್‌ನಲ್ಲಿಅಸಂಖ್ಯ ಸಾಮಾನ್ಯ ಭಾರತೀಯರಿಗೆ ಮನೆಯನ್ನು ಹೊಂದುವ ಕನಸು ನೆನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪುಸ್ತಕವು 1980 ಮತ್ತು 1990 ರ ಹಣಕಾಸು ವಲಯ ಮತ್ತು ನೀತಿ ಪರಿಸರದ ಒಳಗಿನ ನೋಟವನ್ನು ನೀಡುತ್ತದೆ.

ಪುಸ್ತಕವು ಬಿ.ಕೆ. ಮಧೂರ್ ತನ್ನ ಮಾರ್ಗದರ್ಶಕ ಮತ್ತು ಉತ್ತಮ ಸ್ನೇಹಿತ ದಿವಂಗತ ರಾಜೇಶ್ ಕುಮಾರ್ ವಾದ್ವಾನ್ ಅವರೊಂದಿಗೆ ಹಂಚಿಕೊಂಡ ನಿಕಟ ಬಾಂಧವ್ಯದ ಭಾವಚಿತ್ರವನ್ನು ಸಹ ಪ್ರಸ್ತುತಪಡಿಸುತ್ತದೆ.

ಈ ಸಂಧರ್ಭದಲ್ಲಿ ಬಿ.ಕೆ ಮಧೂರ್ ಮಾತನಾಡುತ್ತಾ “ನಾನು ಭವ್ಯವಾದ ಭವಿಷ್ಯದ ಕನಸು ಕಂಡಿದ್ದ ನನ್ನ ನಾಡಿನ ನನ್ನ ಪ್ರಯಾಣದ ಆರಂಭವನ್ನು ಪುಸ್ತಕವು ಗುರುತಿಸುತ್ತದೆ. ಪುಸ್ತಕವು ನನ್ನ ಜೀವನದ ವಿವಿಧ ಹಂತಗಳನ್ನು ಸಹ ಸೆರೆಹಿಡಿಯುತ್ತದೆ. ನನ್ನ ಮಾರ್ಗದರ್ಶಕ ರಾಜೇಶ್ ವಾದ್ವಾನ್ ಅವರ ಅಕಾಲಿಕ ನಿಧನದ ನಂತರ, ಧಾರ್ಮಿಕ ಮತ್ತು ಸಂಸ್ಕೃತಿಗಳ ಪವಿತ್ರ ಗ್ರಂಥಗಳನ್ನು ಓದುವ ಮತ್ತು ನನ್ನ ಅಂತರಂಗವನ್ನು ಅನ್ವೇಷಿಸುವ ಉತ್ಸಾಹವು ಮತ್ತಷ್ಟು ಅಭಿವೃದ್ಧಿಗೊಂಡಿತು. ನನ್ನ ಮಾರ್ಗದರ್ಶಕನನ್ನು ಕಳೆದುಕೊಂಡ ನೋವು ಕಡಿಮೆಯಾದ ನಂತರ, ನಾನು ಹೊರಹೊಮ್ಮಲು ಸಾಧ್ಯವಾಯಿತು. ಓದುಗರು ನನ್ನ ಅನುಭವಗಳಿಂದ ಪ್ರಯೋಜನ ಪಡೆದರೆ ಮತ್ತು ಹೆಚ್ಚಿನ ಗುರಿಗಳನ್ನು ಹೊಂದಿಸಿದರೆ ನಾನು ಸಂತೋಷಪಡುತ್ತೇನೆ ಎಂದರು.

ನಿವೃತ್ತ ಐಪಿಎಸ್, ಡಿ.ಎ. ಚೌಧರಿ, ಆದಾಯ ತೆರಿಗೆ ಆಯುಕ್ತರಾದ ಉದಯ ಭಾಸ್ಕರ್ ಜಕ್ಕೆ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿದ್ದರು.

ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಇಂಡಿಯಾದ ಮಾಜಿ ಬ್ಯೂರೋ ಚೀಫ್ ಎಸ್.ಬಾಲಕೃಷ್ಣನ್, ಸಿ. ಎಸ್. ಮತ್ತು ನ್ಯಾಯವಾದಿ ಸೀತಾರಾಮ್ ಸಂಖೆ, ದೇವಾಡಿಗ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಮೋಹನ್ ದಾಸ್ ಹಿರಿಯಡ್ಕ, ಬುಕ್ ವರ್ಲ್ಡ್ ಎಂಟರ್‌ಪ್ರೈಸಸ್ ಎಂ ಡಿ ಸತೀಶ್ ಶಾ ಮತ್ತು ಬಿ.ಎಂ. ಚತುರ್ವೇದಿ, ಚಾರ್ಟರ್ಡ್ ಅಕೌಂಟೆಟ್ ಉಪಸ್ಥಿತರಿದ್ದರು.

ಈ ಪುಸ್ತಕವನ್ನು ಮುಂಬೈನ ಬುಕ್‌ವರ್ಲ್ಡ್ ಎಂಟರ್‌ಪ್ರೈಸಸ್ ವಿಶ್ವದಾದ್ಯಂತ ವಿತರಿಸಲಿದ್ದು ಭಾರತದಾದ್ಯಂತ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರುತ್ತದೆ.

(ಈಶ್ವರ ಎಂ. ಐಲ್)

Comments are closed.