Karnataka

ಶೀಲ ಶಂಕಿಸಿ ಪತ್ನಿ, ಅತ್ತೆ, ಮೈದುನ, ನಾದಿನಿ ಸೇರಿ ನಾಲ್ವರ ಹತ್ಯೆ

Pinterest LinkedIn Tumblr


ಇಚಲಕರಂಜಿ: ಶಿರೋಳ ತಾಲೂಕಿನ ಯಡ್ರಾವ ಗ್ರಾಮದಲ್ಲಿ ಪತ್ನಿಯ ಶೀಲ ಶಂಕಿಸಿ ವ್ಯಕ್ತಿಯೊಬ್ಬ ಪತ್ನಿ, ಅತ್ತೆ, ನಾದಿನಿ ಹಾಗೂ ಭಾವನೆಂಟ ಸೇರಿದಂತೆ ನಾಲ್ವರನ್ನು ಶನಿವಾರ ಬರ್ಬರ ಹತ್ಯೆಗೈದಿದ್ದಾನೆ.

ಪತ್ನಿ ರೂಪಾಲಿ ಪ್ರದೀಪ ಜಗತಾಪ, ಆಕೆಯ ತಾಯಿ ಛಾಯಾ ಶ್ರೀಪತಿ ಧುಮಾಳ, ಸಹೋದರಿ ಸೋನಾಲಿ ಅಭಿಜಿತ್‌ ರಾವಳ ಹಾಗೂ ಸಹೋದರ ರೋಹಿತ್‌ ಶ್ರೀಪತಿ ಧುಮಾಳ ಕೊಲೆಗೀಡಾದವರು. ಘಟನೆಗೆ ಸಂಬಂಧಿಸಿದಂತೆ ಮೃತ ರೂಪಾಲಿಯ ಸಹೋದರ ಅಭಿಷೇಕ್‌ ಶ್ರೀಪತಿ ಆಯರೇಕರ ಶಹಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಘಟನೆ ನಡೆದ 12 ತಾಸುಗಳ ಅವಧಿಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ವಿವರ: ರೂಪಾಲಿ ಹಾಗೂ ಪ್ರದೀಪ ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದು ರೂಪಾಲಿ ನಾಲ್ಕು ತಿಂಗಳ ಹಿಂದಷ್ಟೇ ಯಡ್ರಾವದಲ್ಲಿನ ತಾಯಿ ಮನೆಗೆ ಹೆರಿಗೆಗಾಗಿ ಆಗಮಿಸಿದ್ದರು. ಕುಡಿತದ ಚಟವಿದ್ದ ಪ್ರದೀಪ ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳ ತೆಗೆಯುತ್ತಿದ್ದ. ಶುಕ್ರವಾರ ತಡರಾತ್ರಿ ನಂತರ ರೂಪಾಲಿಯ ತವರುಮನೆಗೆ ಆಗಮಿಸಿದ್ದ ಪ್ರದೀಪ ಮತ್ತೆ ಜಗಳ ತೆಗೆದಿದ್ದ. ಆದರೆ ಅಕ್ಕಪಕ್ಕದವರು ಸಮಾಧಾನ ಪಡಿಸಿದ ನಂತರ ಹೊರಟು ಹೋಗಿದ್ದ.

ಶನಿವಾರ ಬೆಳಗಿನ ಜಾವ 3.45ರ ಸುಮಾರಿಗೆ ಪುನಃ ಆಗಮಿಸಿದ ಪ್ರದೀಪ ಬಾಗಿಲು ತೆಗೆದ ಅತ್ತೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ. ಆಕೆ ಸ್ಥಳದಲ್ಲೇ ಅಸು ನೀಗುತ್ತಿದ್ದಂತೆ ಉಳಿದ ಎಲ್ಲರ ಮೇಲೂ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಸೋನಾಲಿ ಕೂಡ ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡಿದ್ದ ರೋಹಿತ್‌ ಹಾಗೂ ರೂಪಾಲಿಯನ್ನು ಸ್ಥಳೀಯರು ಸಾಂಗ್ಲಿ ಆಸ್ಪತ್ರೆಗೆ ದಾಖಲಿಸಿದರಾದರೂ ಶನಿವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ.

ಪೊಲೀಸ್‌ ಅಧೀಕ್ಷ ಕ ಡಾ.ಅಭಿನವ ದೇಶಮುಖ,ಅಪರ ಪೊಲೀಸ್‌ ಅಧೀಕ್ಷ ಕ ಶ್ರೀನಿವಾಸ ಘಾಡಗೆ, ಉಪಾಧೀಕ್ಷ ಕ ಧೀರಜ ಪಾಟೀಲ, ಸಹಾಯಕ ಪೊಲೀಸ್‌ ನಿರೀಕ್ಷ ಕ ಸತೀಶ ಶಿಂಧೆ, ಸಂಜಯ ಹಾರುಗಡೆ ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Comments are closed.