ಬೆಂಗಳೂರು: ವೇಗವಾಗಿ ಹಬ್ಬುತ್ತಿರುವ ಕೋವಿಡ್ ಹಾಗೂ ಓಮಿಕ್ರಾನ್ ಸೋಂಕಿಗೆ ಕಡಿವಾಣ ಹಾಕಲುರಾಜ್ಯ ಸರಕಾರ ಮತ್ತೊಂದಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರಾದ ಡಾ. ಸುಧಾಕರ್, ಆರ್. ಅಶೋಕ್, ಅಶ್ವತ್ಥ ನಾರಾಯಣ್ ಹಾಗೂ ತಜ್ಞರ ಸಮಿತಿ ಜೊತೆಗೆ ಬರೋಬ್ಬರಿ ಮೂರುವರೆ ಗಂಟೆಗಳ ಕಾಲನಡೆದ ಸಭೆ ಬಳಿಕ ಸಚಿವರು ಈ ನಿರ್ಧಾರವನ್ನು ಘೋಷಿಸಿದ್ದಾರೆ.

ಬೆಂಗಳೂರಿಗೆ ಸೀಮಿತವಾಗಿ ಕೆಲವು ಟಫ್ ರೂಲ್ಸ್ ಮಾಡಲಾಗಿದೆ. 10ನೇ ಹಾಗೂ 12 ನೇ ತರಗತಿ ಹೊರತುಪಡಿಸಿ ಮತ್ತೆಲ್ಲಾ ಶಾಲಾ ಕಾಲೇಜು ಗುರುವಾರದಿಂದ ಬಂದ್ ಇರಲಿದ್ದು ಆನ್ ಲೈನ್ ಕ್ಲಾಸ್ ಇರಲಿದೆ.

ಇನ್ನು ರಾಜ್ಯಾದ್ಯಂತ ನೈಟ್ ಕರ್ಫ್ಯೂ ಮುಂದುವರೆಯಲಿದ್ದು ಈ ವಾರದಿಂದ 2 ವಾರ ವಾರಾಂತ್ಯದ ಕರ್ಫ್ಯೂ ಇರಲಿದೆ. ಪಬ್, ಬಾರ್, ಮಾಲ್, ಚಿತ್ರಮಂದಿರ, ಹೋಟೆಲ್ ಗಳಲ್ಲಿ ಶೇಖಡಾ 50 ಜನರ ಮಿತಿ ಇರಬೇಕು. ಯಾವುದೇ ಸಭೆ, ಸಮಾರಂಭ ಮಾಡುವಂಯಿಲ್ಲ. ಇದು ಎಲ್ಲಾ ರಾಜಕೀಯ ಪಕ್ಷಕ್ಕೂ ಅನ್ವಯ. ಧಾರ್ಮಿಕ ಕಾರ್ಯಕ್ರಮ, ಜಾತ್ರೆ ಇಲ್ಲ. ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಪೂಜೆ ಯಥಾಸ್ಥಿತಿ ಆದರೆ ನಿಗದಿಗಿಂತ ಅಧಿಕ ಜನರು ಸೇರುವ ಹಾಗಿಲ್ಲ.
ಸಾರ್ವಜನಿಕರು ಮಾಸ್ಕ್, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್ ಮೊದಲಾದ ಕೋವಿಡ್ ನಿಯಮಾವಳಿಪಾಲಿಸಬೇಕೆಂದು ಸಚಿವರು ಮನವಿ ಮಾಡಿದರು.
Comments are closed.