ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹೊರಟ 45 ಮಂದಿಗೆ ಜಿಲ್ಲಾಡಳಿತದ ವತಿಯಿಂದ ಪ್ರೀತಿಪೂರ್ವಕ ವಿದಾಯವನ್ನು ಕೋರಲಾಯಿತು.
ಕೋವಿಡ್ ನಿಂದ ಗುಣಮುಖರಾದ 18 ಮಂದಿ ಮಕ್ಕಳ ಸಹಿತ ಒಟ್ಟು 45 ಮಂದಿಯನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ವತಃ ಉಡುಪಿಯ ಟಿ.ಎಂ.ಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಹಾಜರಿದ್ದು ಗುಣಮುಖರಾಗಿ ಮನೆಗೆ ಹೊರಡಲು ಮುಂದಾದ ಮಕ್ಕಳಿಗೆ ಚಾಕಲೇಟ್ ಕೊಟ್ಟು ಬಿಳ್ಕೊಟ್ಟರು.
ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಕೆ ಎಮ್ ಸಿ ಆಸ್ಪತ್ರೆಯ ಡಾ| ಅವಿನಾಶ್ ಶೆಟ್ಟಿ, ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
Comments are closed.