ಆರೋಗ್ಯ

ಟಿವಿ, ಮೊಬೈಲ್ ಬಳಕೆಯಿಂದಾಗುವ ಕಣ್ಣು ನೋವು ಹಾಗು ಕಣ್ಣು ಉರಿ ಸಮಸ್ಯೆಗೆ ಪರಿಹಾರ

Pinterest LinkedIn Tumblr

ಹೌದು ಮನುಷ್ಯನ ದೇಹಕ್ಕೆ ಕಣ್ಣು ಮುಖ್ಯವಾಗಿದೆ, ದೇಹದ ಇತರ ಬಹುತೇಕ ಅಂಗಗಳು ಸರಿಯಾಗಿ ಕೆಲಸ ಮಾಡಲು ಕಣ್ಣುಗಳ ಅವಶ್ಯಕತೆ ಬಹಳಷ್ಟಿದೆ, ಅತಿಯಾಗಿ ಟಿವಿ ಅಥವಾ ಮೊಬೈಲ್ ನೋಡುವುದರಿಂದ ಹಾಗು ಕಂಪ್ಯೂಟರ್ ಮುಂದೆ ಇಡೀ ದಿನ ಕೆಲಸ ಮಾಡುವುದರಿಂದ ನಿಮ್ಮ ಕಣ್ಣುಗಳು ಬಳಷ್ಟು ಶ್ರಮವನ್ನು ಪಡುತ್ತದೆ, ಅದರಿಂದ ಬರುವ ಕಣ್ಣು ನೋವು ಹಾಗು ಕಣ್ಣು ಉರಿವು ಹಲವು ಸಮಸ್ಯೆಗಳಿಗೆ ಇಲ್ಲಿದೆ ಈ ಮನೆ ಮದ್ದು.

ನೀವು ಪ್ರತಿನಿತ್ಯ ಸೇವಿಸುವಂತ ಊಟದ ಜೊತೆಗೆ ಈರುಳ್ಳಿಯನ್ನು ನಂಜಿಕೊಂಡು ತಿನ್ನುತ್ತಿದ್ದರೆ ಕಣ್ಣು ನೋವು ಕಡಿಮೆ ಆಗುವುದು.

ನಿಮ್ಮ ಮನೆಯಲ್ಲಿ ಕೆಂಪು ಮೂಲಂಗಿಯ ಕೋಸಂಬರಿಯ ತುರಿಯನ್ನು ತಯಾರಿಸಿ ತಿನ್ನುವುದರಿಂದ ಕಣ್ಣಿನ ಆರೋಗ್ಯ ಗಣನೀಯ ರೀತಿಯಲ್ಲಿ ನಿವಾರಣೆ ಆಗುವುದು.

ನೀವು ಬಳಸುವ ಅಡುಗೆ ಪದಾರ್ಥಗಳಲ್ಲಿ ಬದನೆಕಾಯಿ ಪಲ್ಯವನ್ನು ಮಿತವಾಗಿ ಸೇವಿಸುತ್ತಿದ್ದರೆ ದೃಷ್ಟಿ ಮಾಂದ್ಯತೆ ದೂರ ಆಗುವುದು.

ನಿಮಗೆ ಸುಲಭವಾಗಿ ನೈಸರ್ಗಿಕವಾಗಿ ಸಿಗುವಂತ ಈ ಹಸಿ ಮೂಲಂಗಿಯ ಸೇವನೆಯಿಂದ ಕಣ್ಣಿನ ರೋಗವನ್ನು ದೂರ ಮಾಡಬಹುದು.

ಹಸಿ ಮೂಲಂಗಿಯ ಚೂರುಗಳಿಗೆ ಮೆಣಸು ಕಾಳಿನ ಪುಡಿ, ಉಪ್ಪು, ನಿಂಬೆರಸ ಬೆರೆಸಿ ತಿಂದರೆ ದೃಷ್ಟಿ ಮಾಂದ್ಯತೆ ನಿವಾರಣೆ ಆಗುವುದು.

ಹಸಿ ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಹಚ್ಚಿ ಕೊಂಡರೆ ಕಣ್ಣುಗಳ ಉರಿ ಕಡಿಮೆ ಆಗುವುದು.

ನಿಮ್ಮ ಮನೆಯಲ್ಲಿ ಸಿಗುವಂತ ಉಪ್ಪಿನ ಹರಳನ್ನು ಎದೆಹಾಲಿನಲ್ಲಿ ಕರಗಿಸಿ ಕಣ್ಣಿಗೆ ಹಚ್ಚಿಕೊಂಡರೆ ಕಣ್ಣುರಿ ಕಡಿಮೆ ಆಗುವುದು.

ನೆಲ್ಲಿಕಾಯಿಯ ರಸವನ್ನು ದಿನವೂ ಸೇವಿಸುತ್ತಿದ್ದರೆ ಕಣ್ಣಿನ ದೋಷ ದೂರ ಆಗುವುದು.

ಅಗಸೆ ಸೊಪ್ಪಿನ ಪಲ್ಯದಿಂದ ಕಣ್ಣಿನ ದೃಷ್ಟಿ ದೋಷ ದೂರ ಆಗುವುದು.

Comments are closed.