ಕರಾವಳಿ

ಕ್ರಿಕೆಟ್ ಆಟವಾಡುತ್ತಲ್ಲೇ ಹೃದಯಾಘಾತಕ್ಕೀಡಾಗಿ ಉಡುಪಿ ಮೂಲದ ಕ್ರೀಡಾಪಟು ಸಾವು

Pinterest LinkedIn Tumblr

ಬೆಂಗಳೂರು/ ಉಡುಪಿ: ಬೆಂಗಳೂರಿನಲ್ಲಿ ನಡೆದ ಬಂಟರ ಸಂಘಟನೆಯ ಕ್ರಿಕೇಟ್ ಪಂದ್ಯಾಟದಲ್ಲಿ ಆಟವಾಡುತ್ತಿದ್ದ ವೇಳೆ ಉಡುಪಿಯ ಕ್ರೀಡಾಪಟು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ನಡೆದಿದೆ. ಕೋಟ ಸಮೀಪದ ಅಚ್ಲಾಡಿಯ ನಿವಾಸಿ ರಾಜೇಶ ಶೆಟ್ಟಿ (27) ಮೃತಪಟ್ಟ ಕ್ರೀಡಾಪಟು.

cricketer_rajesh-shetty_death

ಬಂಟರ ಸಂಘದ ವಾರ್ಷಿಕ ಕ್ರಿಕೇಟ್ ಚಾಂಪಿಯನ್‌ಶೀಪ್‌ನಲ್ಲಿ ಭಾಗವಹಿಸಲು ರಾಜೇಶ ಗುರುವಾರ ರಾತ್ರಿ ಬೆಂಗಳೂರಿಗೆ ತೆರಳಿದ್ದ ಹಾಗೂ ಶನಿವಾರ ಬೆಳಿಗ್ಗೆ ಬಿ.ಇ.ಲ್.ಅಂಗಣದಲ್ಲಿ ನಡೆಯುತ್ತಿದ್ದ ಪಂದ್ಯಾಟದಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ.

ಪಂದ್ಯಾಟಪದ ಗೆಲುವಿನ ರೂವಾರಿಯಾಗಿದ್ದ: ಶನಿವಾರ ನಡೆದ ಪ್ರಥಮ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಯದ ರೂವಾರಿಯಾಗಿದ್ದ. ಆಟವಾಡುತ್ತಲ್ಲೇ ಎದೆನೋವು ಕಾಣಿಸಿಕೊಂಡಿದ್ದು ಮೊದಲಿಗೆ ನೋವು ನಿವಾರಕ ಗುಳಿಗೆ ಸೇವಿಸಿ ಎರಡನೇ ಪಂದ್ಯದಲ್ಲಿ ಆಟವಾದಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದ. ಎದೆನೋವು ಹೆಚ್ಚುತ್ತಿದ್ದಂತೆ ಸ್ನೇಹಿತರು ಹತ್ತಿರದ ಆಸ್ಪತ್ರಗೆ ಕರೆದೊಯ್ಯಿದರು. ಪರೀಕ್ಷಿಸಿದ ವೈದ್ಯರು ಹೃದಯಾಘಾತವಾಗಿದೆ ಎಂದು ತಿಳಿಸಿ ಹೆಚ್ಚಿನ ಚಿಕಿತ್ಸೆಗೆ ರಾಮಯ್ಯ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು. ಅನಂತರ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಕ್ರೀಯ: ಶಾಲಾ ದಿನಗಳಿಂದ ಉತ್ತಮ ಕ್ರೀಡಾಪಟುವಾಗಿದ್ದ ಈತ ಸ್ವಂತ ಉದ್ಯೋಗ ನಿರ್ವಹಿಸುತ್ತಿದ್ದ ಹಾಗೂ ಕ್ರಿಕೇಟ್, ವಾಲಿಬಾಲ್ ಮುಂತಾದ ಕ್ರೀಡೆಗಳಲ್ಲಿ ಸಕ್ರೀಯವಾಗಿದ್ದ ಹಾಗೂ ಅಚ್ಲಾಡಿಯ ಸನ್‌ಶೈನ್ ಗೆಳೆಯರ ಬಳಗ ರಿ. ಕ್ರೀಡಾಸಂಸ್ಥೆಯ ಕಾರ್ಯದರ್ಶಿಯಾಗಿ ಹಾಗೂ ಸ್ಥಳೀಯ ಹಲವಾರು ಸಂಘ-ಸಂಸ್ಥೆಯ ಪದಾಽಕಾರಿಯಾಗಿ ಸೇವೆ ಸಲ್ಲಿಸಿಸುತ್ತಿದ್ದ.

ಮೃತನು ತಂದೆ, ತಾಯಿ, ಸಹೋದರ ಹಾಗೂ ಇರ್ವರು ಸಹೋದರಿಯರನ್ನು ಅಗಲಿದ್ದಾನೆ.

Comments are closed.