ಮನೋರಂಜನೆ

ಪ್ರಬಲ ಸ್ಪರ್ಧಿ ರಾಜೀವ್ ಬಿಗ್ ಬಾಸ್ ಮನೆಯಿಂದ ಔಟ್; ಶಾಕಿಂಗ್ ಎಲಿಮಿನೇಷನ್‌’ಗೆ ಕಾರಣ…?

Pinterest LinkedIn Tumblr

ಬಿಗ್ ಬಾಸ್ ಶುರುವಾಗಿ 55 ದಿನಗಳಾಗುತ್ತಿವೆ. ಇದೀಗ 8ನೇ ವಾರದ ಎಲಿಮಿನೇಷನ್‌ ಕೂಡ ಮುಕ್ತಾಯವಾಗಿದೆ. ನಟ ಸುದೀಪ್ ಅನಾರೋಗ್ಯದಿಂದಾಗಿ ಕಳೆದೆರಡು ವಾರಗಳಿಂದ ಬಿಗ್ ಬಾಸ್ ನಡೆಸಿಕೊಡಲು ಬಂದಿಲ್ಲ. ಸುದೀಪ್‌ ಅವರ ಅನುಪಸ್ಥಿತಿಯಲ್ಲೇ ಕಳೆದ ವಾರ ವಿಶ್ವಾನಾಥ್‌ ಹಾವೇರಿ ಮನೆಯಿಂದ ಔಟ್ ಆಗಿದ್ದರು. ಅಚ್ಚರಿ ಎಂಬಂತೆ ಈ ವಾರ ರಾಜೀವ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.

ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ರು?
ಈ ವಾರ ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ಮಂಜು ಪಾವಗಡ, ರಾಜೀವ್, ವೈಷ್ಣವಿ ಗೌಡ, ರಘು ಗೌಡ ನಾಮಿನೇಟ್ ಆಗಿದ್ದರು. ಹಾಗೇ ನೋಡಿದರೆ, ನಾಮಿನೇಟ್ ಆದ ಇಷ್ಟು ಜನ ಬಿಗ್ ಬಾಸ್ ಮನೆಯಲ್ಲಿ ಪ್ರಬಲರೆಂದೇ ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಕೊಂಚ ಡಲ್‌ ಇದ್ದ ರಘು ಗೌಡ ಕೂಡ ಈ ಕೆಲ ದಿನಗಳಿಂದ ಉತ್ತಮವಾಗಿ ಆಡುತ್ತಿದ್ದರು. ಅಲ್ಲದೆ, ಏಪ್ರಿಲ್ 24ರ ಎಪಿಸೋಡ್‌ನಲ್ಲಿ ಅವರು ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ದರು. ಎಲ್ಲರೂ ಸ್ಟ್ರಾಂಗ್ ಇದ್ದರೂ ಕೊನೆಗೆ ರಾಜೀವ್ ಬಿಗ್ ಬಾಸ್ ಮನೆಯ ಆಟವನ್ನು ಮುಗಿಸಬೇಕಾಗಿದೆ.

ರಾಜೀವ್ ಹೊರಬರಲು ಕಾರಣವೇನು?
ಆರಂಭದಿಂದಲೂ ರಾಜೀವ್ ಮನೆಯ ಸ್ಟ್ರಾಂಗ್ ಕ್ಯಾಂಡಿಡೇಟ್ ಎಂದೇ ಬಿಂಬಿಸಲಾಗಿತ್ತು. ಅದಕ್ಕೆ ತಕ್ಕಂತೆ ಅವರು ಟಾಸ್ಕ್‌ಗಳನ್ನು ಅವರು ಉತ್ತಮವಾಗಿಯೇ ಆಡುತ್ತಿದ್ದರು. ಆದರೆ, ಈಚೆಗೆ ಅವರಿಂದ ಉತ್ತಮ ಪ್ರದರ್ಶನ ಮೂಡಿಬರುತ್ತಿಲ್ಲ ಎನ್ನಲಾಗಿದೆ. ಅಲ್ಲದೆ, ಪ್ರಶಾಂತ್ ಸಂಬರಗಿ ಅನೇಕ ಬಾರಿ, ‘ರಾಜೀವ್ ತುಂಬ ಗುಂಪುಗಾರಿಕೆ ಮಾಡ್ತಾನೆ. ಯಾವಾಗಲೂ ಶುಭಾ ಪೂಂಜಾ, ನಿಧಿ ಸುಬ್ಬಯ್ಯ ಅವರೊಂದಿಗೆ ಇರುವುದರಿಂದಲೇ ರಾಜೀವ್ ಸೇಫ್ ಆಗಿರೋದು’ ಎಂದೆಲ್ಲ ಹೇಳಿದ್ರು. ಬಹುಶಃ ಈ ಅಂಶಗಳು ಕೂಡ ಎಲಿಮಿನೇಷನ್‌ಗೆ ಕಾರಣವಾಗಿರಬಹುದು.

ಗೋಲ್ಡನ್ ಪಾಸ್ ಬಳಸದೇ ತಪ್ಪು ಮಾಡಿದ್ರಾ ರಾಜೀವ್?
ರಾಜೀವ್ ಯಾವಾಗಲೂ ಓವರ್ ಕಾನ್ಫಿಡೆನ್ಸ್ ಆಗಿರುತ್ತಾರೆ ಎಂಬ ಮಾತುಗಳು ಆಗಾಗ ಕೇಳಿಬಂದಿದ್ದವು. ಈ ವಾರ ಅವರು ನಾಮಿನೇಟ್ ಆಗಿದ್ದಾಗ, ಅವರ ಬಳಿ ಇದ್ದ ಗೋಲ್ಡನ್ ಪಾಸ್ ಬಳಸಿಕೊಂಡು, ಅದರಿಂದ ಸೇಫ್ ಆಗಬಹುದಿತ್ತು. ಬಿಗ್ ಬಾಸ್ ಕೂಡ ಅವರಿಗೆ ಆ ಬಗ್ಗೆ ಕೇಳಿದ್ದರು. ಆದರೆ, ರಾಜೀವ್ ಗೋಲ್ಡನ್ ಪಾಸ್ ಬಳಸದೇ, ‘ಈ ವಾರ ಎಲಿಮಿನೇಷನ್‌ ಆಗುವುದಿಲ್ಲ’ ಎಂಬ ಓವರ್ ಕಾನ್ಫಿಡೆನ್ಸ್‌ನಲ್ಲಿ ಅವರಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ!

Comments are closed.