ಮನೋರಂಜನೆ

‘ಮಂಗಳ ಗೌರಿ ಮದುವೆ’ ಧಾರಾವಾಹಿಯಿಂದ ಹೊರಬಿದ್ದ ನಟಿ ರಾಧಿಕಾ

Pinterest LinkedIn Tumblr


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಸೌಂದರ್ಯ ಎಂಬ ವಿಲನ್ ಪಾತ್ರದಲ್ಲಿ ರಾಧಿಕಾ ಶ್ರವಂತ್ ನಟಿಸುತ್ತಿದ್ದರು. ಈಗ ಈ ಧಾರಾವಾಹಿಯಿಂದ ರಾಧಿಕಾ ನಿರ್ಗಮಿಸಿದ್ದಾರೆ. ಇವರ ಜಾಗಕ್ಕೆ ಇನ್ನೊಬ್ಬ ವಿಲನ್ ಎಂಟ್ರಿಯಾಗಿದೆ.

ಧಾರಾವಾಹಿಯಿಂದ ಹೊರಬರುತ್ತಿರುವುದಕ್ಕೆ ರಾಧಿಕಾ ಹೇಳಿದ್ದೇನು?
ಧಾರಾವಾಹಿ ತೊರೆದ ಬಗ್ಗೆ ನಟಿ ರಾಧಿಕಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘ಮಂಗಳಗೌರಿ ಮದುವೆ ಪಯಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿರುವುದಕ್ಕೆ ನನಗೂ ಕೂಡ ಬೇಸರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ತುಂಬ ಖುಷಿಯಿದೆ. ಸೌಂದರ್ಯ ಪಾತ್ರಕ್ಕೆ ನೀವು ತೋರಿಸಿದ ಅಭಿಮಾನಿ, ಪ್ರೀತಿಗೆ ನಾನು ಚಿರಋಣಿ. ಮಂಗಳಗೌರಿ ಮದುವೆ ಧಾರಾವಾಹಿ ನನಗೆ ಹೊಸ ಬದುಕು, ಹೊಸತನ್ನು ಕಟ್ಟಿಕೊಟ್ಟಿತು. ಮುಂದಿನ ದಿನಗಳಲ್ಲಿ ಉನ್ನತ ಪ್ರಾಜೆಕ್ಟ್ ಮಾಡುವ ಆಸೆಯಿದೆ. ಕೆಲವು ವರ್ಷಗಳ ಹಿಂದೆ ಕನಸಾಗಿದ್ದ ಸೌಂದರ್ಯ ಪಾತ್ರ ಇಂದಿನಿಂದ ನೆನಪಾಗಿ ಉಳಿಯುತ್ತದೆ. ಹೊಸ ರೂಪದಲ್ಲಿ, ಹೊಸ ಪಾತ್ರದಲ್ಲಿ, ಹೊಸ ನಾನಾಗಿ ಮುಂದೆ ಬರುವೆ’ ಎಂದು ರಾಧಿಕಾ ಹೇಳಿದ್ದಾರೆ.

ಸಿನಿಮಾದಲ್ಲಿಯೂ ನಟಿಸಿದ್ದ ರಾಧಿಕಾ
ಅಷ್ಟೇ ಅಲ್ಲದೆ ಇವರು ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ ‘ಪುಟ್ಟಮಲ್ಲಿ’ ಧಾರಾವಾಹಿಯಲ್ಲೂ ರಾಧಿಕಾ ಅಭಿನಯಿಸಿದ್ದರು. ಮುದ್ದು ಮುಖದ ರಾಧಿಕಾ ನೆಗೆಟಿವ್ ಶೇಡ್‌ ಪಾತ್ರಗಳಲ್ಲಿಯೇ ಹೆಚ್ಚು ಬಾರಿ ಜನರ ಮುಂದೆ ಬಂದಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ರಾಧಿಕಾ
ಕೆಲ ತಿಂಗಳುಗಳ ಹಿಂದೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ, ನಿರ್ದೇಶಕ ಶ್ರವಂತ್ ಜೊತೆ ರಾಧಿಕಾ ಸಪ್ತಪದಿ ತುಳಿದಿದ್ದಾರೆ. ಶ್ರವಂತ್ ನಟ, ನಿರ್ದೇಶಕ ಕೂಡ ಹೌದು. ಈ ಹಿಂದೆ ಅವರು ‘ರಂಗನಾಯಕಿ’ ಧಾರಾವಾಹಿ ನಿರ್ದೇಶನ ಮಾಡಿದ್ದರು. ಟಿಆರ್‌ಪಿ ಕಾರಣಕ್ಕೆ, ಲಾಕ್ ಡೌನ್ ಕೂಡ ಇದ್ದಿದ್ದರಿಂದ ಈ ಧಾರಾವಾಹಿ ಮುಕ್ತಾಯವಾಗಿದೆ. ಮಧುಬಾಲ ಧಾರಾವಾಹಿ, ಅಂಬರ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ, ಪರಾರಿ ಸಿನಿಮಾದಲ್ಲೂ ಶ್ರವಂತ್ ನಟಿಸಿದ್ದರು.

Comments are closed.