ಮನೋರಂಜನೆ

ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಕುರಿತು ನಟ ದರ್ಶನ್ ಮಾಡಿದ್ದೇನು ಗೊತ್ತಾ?

Pinterest LinkedIn Tumblr


ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮದೇ ಆದ ಸ್ಟೈಲ್‌ನಲ್ಲಿ ಫೇಮಸ್ ಆದ ನಟ ಹುಚ್ಚ ವೆಂಕಟ್. ಬಿಗ್ ಬಾಸ್‌ಗೂ ಎಂಟ್ರಿ ಕೊಟ್ಟು ಫೇಮಸ್ ಆಗಿದ್ದ ಇದೇ ಹುಚ್ಚ ವೆಂಕಟ್. ಇನ್ನು ಇಷ್ಟು ಸೈಲೆಂಟ್ ಆಗೊದ್ದ ಹೆಚ್ಚ ವೆಂಕಟ್ ಇತ್ತೀಚ್ಚಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಲ್ಲಿ ಕೂಡ ಗಲಾಟೆ ಮಾಡಿಕೊಂಡು ಸಾರ್ವಜನಿಕರಿಂದ ಸರಿ ಪೆಟ್ಟು ತಿಂದಿದ್ದಾರೆ. ಇನ್ನು ಮೊನ್ನೆ ಮಡಿಕೇರಿಯಲ್ಲಿ ಕಾರಿನ ಗಾಜು ಒಡೆದು ದೊಡ್ಡ ಗಲಾಟೆ ಮಾಡಿದ ಹುಚ್ಚ ವೆಂಕಟ್ ಗೆ ಅಲ್ಲಿನ ಸ್ಥಳೀಯರು ಸರಿಯಾಗಿ ಹೊಡೆದು ಬುದ್ದಿ ಕಲಿಸಿದ್ದಾರೆ.

ಇನ್ನು ಈಗ ತುಂಬಾ ಕುಗ್ಗಿದ್ದ ವೆಂಕಟ್ ನೆರವಿಗೆ ಈಗ ಚಿತ್ರರಂಗ ಬಂದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನು ಮಾಡಿದ್ದಾರೆ ಗೊತ್ತಾ, ಹಾಗಾದರೆ ದರ್ಶನ್ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ವೆಂಕಟ್ ಅವರನ್ನ ಯಾರು ಬೈಯ್ಯಬೇಡಿ ಮತ್ತು ರೇಗಿಸಬೇಡಿ, ಅವರನ್ನ ಹುಚ್ಚ ಎಂದರೆ ಮಾತ್ರ ಅವರು ಈ ರೀತಿ ಆಡುತ್ತಾರೆ, ಅವರಿಗೆ ಗೌರವ ಕೊಡಿ ಯಾರು ಹೊಡೆಯಬೇಡಿ ಎಂದು ಮಡಿಕೇರಿಯವರೇ ಆದ ಭುವನ್ ಅವರು ಕೈಮುಗಿದು ಪ್ರಾರ್ಥನೆಯನ್ನ ಮಾಡಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರು ಕೂಡ, ವೆಂಕಟ್ ಅವರನ್ನ ಹುಚ್ಚ ಅಂದರೆ ಹುಚ್ಚನಂತೆ ಆಡುತ್ತಾರೆ, ಆದರೆ ಮನಸ್ಸಿನಿಂದ ತುಂಬಾ ಒಳ್ಳೆಯವರು, ಆದ್ದರಿಂದ ಹುಚ್ಚ ಅನ್ನುವ ಬದಲು ವೆಂಕಟ್ ಎಂದು ಕರೆಯಿರಿ ಆಗ ಅವರು ಯಾವುದೇ ರಂಪಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ ಪ್ರಥಮ್ ಅವರು.

ಯಾರೇ ಕಷ್ಟ ಎಂದರೆ ಓಡಿ ಬಂದು ಸಹಾಯ ಮಾಡುವ ದರ್ಶನ್ ಅವರು ಕೂಡ ವೆಂಕಟ್ ನೆರವಿಗೆ ಧಾವಿಸಿದ್ದು ತಮ್ಮ ಆಪ್ತರ ಬಳಿ ವೆಂಕಟ್ ನೆರವಾಗಲು ಹೇಳಿದ್ದಾರಂತೆ, ವೆಂಕಟ್ ಅವರು ಈ ರೀತಿ ಮಾಡುತ್ತಿರುವುದರಿಂದ ನಮ್ಮ ಕನ್ನಡ ಚಿತ್ರರಂಗದ ಮರ್ಯಾದೆ ಹಾಳಾಗುತ್ತಿದೆ, ಅವರನ್ನ ಕರೆದು ಬುದ್ದಿ ಹೇಳಿ ಮತ್ತು ಸಾದ್ಯವಾದರೆ ಸ್ವಲ್ಪ ಹಣಕಾಸಿನ ನೆರವನ್ನ ಮಾಡಿ ಎಂದು ಹೇಳಿದ್ದಾರೆ ದರ್ಶನ್ ಅವರು.

ಯಾರು ಕೂಡ ವೆಂಕಟ್ ಅವರನ್ನ ಹುಚ್ಚ ವೆಂಕಟ್ ಎಂದು ಕರೆಯಬೇಡಿ, ಯಾರಿಗಾದರೂ ಆತ್ಮ ವಿಶ್ವಾಸ ಇದ್ದೆ ಇರುತ್ತದೆ ಮತ್ತು ಅದಕ್ಕೆ ದಕ್ಕೆ ಉಂಟಾದರೆ ಈ ರೀತಿ ಆಡೇ ಆಡುತ್ತಾರೆ ಎಂದು ಹೇಳಿದ್ದಾರೆ ದರ್ಶನ್ ಅವರು.

ಈ ಮೂಲಕ ದರ್ಶನ್ ಅವರು ಭಾವನಾಜೀವಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ದರ್ಶನ್ ಇಂತಹ ಅನೇಕರಿಕೆ ಅನೇಕ ಸಲ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ.

Comments are closed.