ಮನೋರಂಜನೆ

“ಬಳೆ” ವಿಷಯ: ಸುದೀಪ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶ

Pinterest LinkedIn Tumblr


ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ವಾರ್ ದಿನದಿಂದ ದಿನಕ್ಕೆ ತಾರಕಕ್ಕೇರಿದೆ.ಕಿಚ್ಚ ಮಾಡಿದ ಒಂದು ಟ್ವೀಟ್ ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸುದೀಪ್​ ಮಾಡಿರುವ ಕಡಗ-ಬಳೆ ಟ್ವೀಟ್​ ಈಗ ಭಾರೀ ವಿವಾದ ಸೃಷ್ಟಿಸಿದೆ. ಬಳೆ ತೊಟ್ಟವರು ಶಕ್ತಿ ಇಲ್ಲದವರು, ಕಡಗ ತೊಟ್ಟವರು ಮಾತ್ರ ಸಬಲರು ಎನ್ನುವ ಅರ್ಥವನ್ನು ಟ್ವೀಟ್​ ನೀಡುತ್ತಿದೆ ಎಂದು ಆರೋಪಿಸಿ ಸುದೀಪ್​ ವಿರುದ್ಧ ಮಹಿಳೆಯರು ಸೇರಿದಂತೆ ಅನೇಕರು ಕಿಚ್ಚನ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಡಿಯರ್ ಸುದೀಪ್, ಕಡಗ-ಬಳೆ ತೊಟ್ಟೋರೆಲ್ಲ ಅಶಕ್ತರು, ದುರ್ಬಲರೇನಲ್ಲ. ಹಾಗೆಯೇ ತೊಡದವರೆಲ್ಲ ವೀರಾಧಿವೀರರು, ಮಹಾಬಲಶಾಲಿಗಳೂ ಆಗಿರುವುದಿಲ್ಲ. ಅಂದಹಾಗೆ ಬಳೆ ತೊಡುವ ಹೆಣ್ಣುಮಕ್ಕಳು ಎಷ್ಟೋ ವಿಷಯಗಳಲ್ಲಿ ಗಂಡಸರಿಗಿಂತ ಬಲಶಾಲಿಗಳಾಗಿರುತ್ತಾರೆ ಅನ್ನೋ ಕಾಮನ್ ಸೆನ್ಸ್ ನಿಮಗಿದೆ ಎಂದು ಆಶಿಸುತ್ತೇನೆ,” ಎಂದು ಸರಣಿ ಟ್ವೀಟ್​ಗಳನ್ನು ಮಾಡುತ್ತಿದ್ದಾರೆ.

ಸ್ವಾಮಿ ನಿಮ್ಮ ಕೋಪ ಬೇಜಾರು ಸಕಾರಣವೇ ಇರಬಹುದು ಆದ್ರೆ ಸಿಟ್ಟಲ್ಲಿ ಏನೇನೋ ಬರೆದು ಅಭಾಸ ಮಾಡ್ಕೋಬೇಡಿ. ಕೈಗೆ ಬಳೆ ಹಾಕಿದೋರು ಅಂದ್ರೆ ಮಹಿಳೆಯರು ಅಶಕ್ತರು ಅನ್ನೋ ಪರೋಕ್ಷ ಟೀಕೆ ನಿಮ್ಮ ಮಾತಲ್ಲಿ ಇದೆ. ಕೋಪ ಬೇಜಾರು ಶಕ್ತಿ ಇವೆಲ್ಲ ಗಂಡಸಿನ ಜೈವಿಕ ಗುರುತು ಮಾತ್ರ ಅಲ್ಲ, ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚು ಸಮರ್ಥರು ಮರೆಯಬೇಡಿ ಎಂದು ಸುದೀಪ್ ಟ್ವೀಟ್ ಗೆ ನೆಟ್ಟಿಗರು ಟಾಂಗ್ ನೀಡಿದ್ದಾರೆ.

ಇನ್ನು ದರ್ಶನ್​ ಅಭಿಮಾನಿಗಳು ಸುದೀಪ್​ ಅವರನ್ನು ಟ್ರೋಲ್​ ಮಾಡಿದ್ದಾರೆ. ಈ ಮೊದಲು ಪಲ್ಲವಿ ಹೆಸರಿನ ಹುಡುಗಿ ದರ್ಶನ್​ ಗ್ರೂಪ್​ನಲ್ಲಿ ‘ಕುರುಕ್ಷೇತ್ರ’ ಸಿನಿಮಾದ ಪೈರಸಿ ಲಿಂಕ್​ ಶೇರ್​ ಮಾಡಿದ್ದರು. ಹಾಗಿದ್ದರೂ ಒಂದು ಹುಡುಗಿಯ ಭವಿಷ್ಯವನ್ನ ಯೋಚಿಸಿ ದರ್ಶನ್ ಸುಮ್ಮನಾಗಿದ್ದರು. ಹೀಗಾಗಿ ಕುರುಕ್ಷೇತ್ರ ತಂಡ ಹುಡುಗಿ ವಿರುದ್ಧ ದೂರು ದಾಖಲಿಸಿರಲಿಲ್ಲ ಎಂದು ಹೇಳಿದ್ದಾರೆ.

ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ಮಾತಾನಾಡಬೇಕು ”ನಟರು ಆಫ್ಟರಾಲ್ ನಟರು ಅವರಿಗೆ gender sensitivity ಇರ್ಬೇಕು ಅಂತ ನಾವು ನಿರೀಕ್ಷಿಸಬಾರದು ಅಲ್ವಾ? ಬಳೆ ಹಾಕ್ಕೊಂಡಿದಾರೆ ಅಂದ್ರೆ ಏನಂತೆ ಪ್ರಾಬ್ಲಮ್ಮು? ಬಳೆ ತೊಡೋರು ಹೆಣ್ಮಕ್ಳು, ಹೆಣ್ಮಕ್ಳು ವೀಕು ಅಂತಾನಾ? ಈ ಸಮಾಜ ಇಂಥಾ ಸ್ಟೀರಿಯೋಟೈಪ್ ಗಳಿಂದ ಹೊರಗೆ ಬರೋದು ಇನ್ನೂ ಯಾವಾಗ? ಕೊನೆಪಕ್ಷ ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ಮಾತಾಡಲು ಕಲಿಯೋದು ಯಾವಾಗ? ಸಿನೆಮಾ ಡೈಲಾಗ್ ಆಗಿದ್ದಿದ್ರೆ ಪಾತ್ರದ ಅಗತ್ಯ ಅನ್ಬೋದಿತ್ತು. ಇದು ಸ್ವಂತದ ಹೇಳಿಕೆ!! ಸೀರಿಯಸ್ಲಿ ಇವರಿಗೆಲ್ಲ ಲಿಂಗಸಂವೇದನೆ ಮತ್ತು ಭಾಷೆ ಬಗ್ಗೆ ಒಂದು ವರ್ಕ್ ಶಾಪ್ ಮಾಡೋ ಅಗತ್ಯ ಇದೆ” ಎಂದು ಗಾಯಿತ್ರಿ ಎಂಬುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೈಲ್ವಾನ್ ಸಿನಿಮಾದ ಲಿಂಕ್ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದ ಆರೋಪಿ ರಾಕೇಶ್ ನನ್ನು ಪೊಲೀಸರು ಗುರುವಾರ ರಾತ್ರಿ ದಾಬಸ್ ಪೇಟೆಯಲ್ಲಿ ಅರೆಸ್ಟ್ ಮಾಡಿದ್ದರು. ಇದಾದ ನಂತರದಲ್ಲಿ ದರ್ಶನ್​-ಸುದೀಪ್​ ಅಭಿಮಾನಿಗಳ ಕಿತ್ತಾಟ ತಾರಕಕ್ಕೇರಿದೆ.

Comments are closed.