ಬೆಂಗಳೂರು: ನಟ ಕೋಮಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕರುನಾಡ ಚಕ್ರವರ್ತಿ, ಕಿಚ್ಚ ಸುದೀಪ್ ಹೆಸರು ತಳುಕು ಹಾಕಲಾಗಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ಜನ್ಮ ಜಾಲಾಡುತ್ತೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್ ಅವರು, ಈ ಪ್ರಕರಣದಲ್ಲಿ ಸುಮ್ಮನೆ ಕಿಚ್ಚ ಸುದೀಪ್ ಹೆಸರನ್ನು ಎಳೆದು ತರಬೇಡಿ. ಪರಿಣಾಮ ನೆಟ್ಟಗಿರುವುದಿಲ್ಲ ಎಂದಿದ್ದಾರೆ.
ವಿನಂತಿ:
ವೈಯಕ್ತಿಕ ಅನಿಸಿಕೆ ನಿರ್ದಾರ ಮಾಡಿ ನನ್ನ
ಕಲಾಬಂಧು #ಸುದೀಪ್ ಹೆಸರು ಯಾರಾದರು ಈ ವಿಷಯದಲ್ಲಿ ತಂದರೆ
ಕ್ಷಮೆಯಿಲ್ಲಾ!
ಸುದೀಪ್ ನನ್ನ ಒಡಹುಟ್ಟದಿದ್ದರು
ನನ್ನ ಹೆಮ್ಮೆಯ ತಮ್ಮನಂತೆ..
ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು..
ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ!ಕೆಡಿಸದಿರಿ
ಮನಗಳ!ಧನ್ಯವಾದಗಳು.— ನವರಸನಾಯಕ ಜಗ್ಗೇಶ್ (@Jaggesh2) August 14, 2019
ಕಲಾಬಂಧು ಸುದೀಪ್ ಹೆಸರು ಯಾರಾದರೂ ಈ ವಿಷಯದಲ್ಲಿ ಎಳೆದು ತಂದರೆ ಕ್ಷಮೆಯಿಲ್ಲಾ! ಸುದೀಪ್ ನನ್ನ ಒಡಹುಟ್ಟದಿದ್ದರು ನನ್ನ ಹೆಮ್ಮೆಯ ತಮ್ಮನಂತೆ.. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು..ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ! ಕೆಡಿಸದಿರಿ ಮನಗಳ! ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಕೋಮಲ್ ಮೇಲಿನ ಹಲ್ಲೆ ಕುರಿತಂತೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಇದು ಯಾರ ಕೈವಾಡ ಇರಬಹುದು ಎಂಬ ಚರ್ಚೆಗಳಾಗುತ್ತಿತ್ತು. ಈ ವೇಳೆ ಹಲ್ಲೆ ಮಾಡಿರುವ ವಿಜಿ ಸುದೀಪ್ ಅವರ ಅಭಿಮಾನಿ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.
Comments are closed.