ಮನೋರಂಜನೆ

ಸಂಗೀತ ನಿರ್ದೇಶಕ ಹರಿಕೃಷ್ಣ ದಾಂಪತ್ಯದಲ್ಲಿ ಅಪಸ್ವರ!

Pinterest LinkedIn Tumblr


ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಕುಟುಂಬದಲ್ಲಿಗಾ ಬಿರುಕು ಮೂಡಿದೆ. ಅತೀ ಕಡಿಮೆ ಅವಧಿಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತಾ ನೀಡಿದ್ದ ಖ್ಯಾತ ಸಂಗೀತಾ ನಿರ್ದೇಶಕ ಹಾಗೂ ಸ್ಯಾಂಡಲ್ ವುಡ್​​ ನಲ್ಲಿ ಅಷ್ಟೇ ಫೇಮಸ್ ಆದ ಖ್ಯಾತ ಗಾಯಕಿ ಕುಟುಂಬದಲ್ಲಿಗ ಬಿರುಗಾಳಿ ಮೂಡಿದೆ ಅಷ್ಟಕ್ಕೂ ಯಾರದು ಅಂತೀರಾ? ಈ ಕೆಳಗಿನ ಸ್ಟೋರಿ ಓದಿ.

ಹೌದು ತಾಳ ಮತ್ತು ಸ್ವರದಂತಿದ್ದ , ಸಂಗೀತಾ ನಿರ್ದೆಶಕ ವಿ. ಹರಿಕೃಷ್ಣ ಹಾಗೂ ಗಾಯಕಿ ವಾಣಿ ಹರಿಕೃಷ್ಣ ಕುಟುಂಬದಲ್ಲಿಗ ಅಪಸ್ವರ ಮೂಡಿದೆ. ಇನ್ನೂ ಇದಕ್ಕೆ ಸಾಕ್ಷಿಯೆಂಬಂತೆ ವಾಣಿ ಹರಿಕೃಷ್ಣ ತಮ್ಮ ಪೇಸ್​ ಬುಕ್​ ಪೇಜ್​ನಲ್ಲಿ ಅಸಮಧಾನ ತುಂಬಿದ ಪೋಸ್ಟ್​ ವೊಂದನ್ನು ಹಾಕಿಕೊಂಡಿದ್ದಾರೆ.

ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ” ಎಂದು ವಾಣಿ ಹರಿಕೃಷ್ಣರವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ಸ್ಯಾಂಡಲ್ ವುಡ್ ನ ಹೈ ಬಜೆಟ್ ಹಾಗೂ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ ಕುರುಕ್ಷೇತ್ರದಲ್ಲಿ ಹರಿಕೃಷ್ಣರವರು ತಮ್ಮ ಪತ್ನಿ ವಾಣಿ ಹರಿಕೃಷ್ಣರವರ ಧ್ವನಿಯಲ್ಲಿ ಹಾಡೊಂದನ್ನು ಹಾಡಿಸಿದ್ದರಂತೆ.ಆದರೆ ಚಿತ್ರದ ಹಾಡುಗಳು ಬಿಡುಗಡೆಯಾದ ನಂತರ ವಾಣಿ ಅವರು ಹಾಡಿದ್ದ ಗೀತೆಯಲ್ಲಿ ಅವರ ಧ್ವನಿಯಿಲ್ಲದೆ ಗಾಯಕಿ ಅನುರಾಧ ಭಟ್ ಧ್ವನಿ ಇದೆ. ಹಾಗೂ ಈ ಗೀತೆ ಭಕ್ತಿ ಗೀತೆಯಾಗಿದ್ದರಿಂದ ಬಹಳ ಇಷ್ಟಪಟ್ಟು ಸ್ವತಃ ವಾಣಿ ಹರಿಕೃಷ್ಣರವರು ಹಾಡಿರುವುದಾಗಿ ತಿಳಿಸಿದ್ದು, ಈ ಗೀತೆಯನ್ನು ಎರಡೆರಡು ಬಾರಿ ವಾಣಿಯವರ ಧ್ವನಿಯಲ್ಲಿ ತಮ್ಮ ಪತಿ ಹರಿಕೃಷ್ಣರವರು ಹಾಡಿಸಿದ್ದರು ಆದರೆ ಈಗ ಗಾಯಕಿಯನ್ನು ಬದಲಾಯಿಸಲಾಗಿದೆ ಎಂದ ಬೇಸರ ವ್ಯಕ್ತಪಡಿಸಿದ್ದಾರೆ.

ಇಷ್ಟಲ್ಲದೆ ಬಿಡುಗಡೆಗೆ ಸಿದ್ಧವಾಗಿರುವ ‘ರಾಂಧವ’ ಚಿತ್ರವನ್ನು ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದು, ಆ ಚಿತ್ರದ ಹಾಡೊಂದಕ್ಕೆ ವಾಣಿ ಅವರೆ ಕಂಠದಾನ ಮಾಡಿದ್ದರು. ಆದರೆ ವಾಣಿ ಅವರ ಧ್ವನಿ ಆ ಹಾಡಿನಲ್ಲೂ ಮಾಯವಾಗಿದ್ದು ನೋಡಿ ಮತ್ತಷ್ಟು ಆಘಾತಕ್ಕೊಳಗಾಗಿದ್ದಾರೆ.

ಅಂದ್ಹಗೆ ವಾಣಿ ಹರಿಕೃಷ್ಣರವರು ಏನು ಸಾಮಾನ್ಯ ಕುಟುಂಬದ ಹಿನ್ನೆಲೆ ಹೊಂದಿದವರಲ್ಲ. ಹಿರಿಯ ಸಂಗೀತ ನಿರ್ದೇಶಕ ಜಿ. ಕೆ. ವೆಂಕಟೇಶ್ ಮೊಮ್ಮಗಳು. ‘ಮಧುವನ ಕರೆದರೆ…’ ಹಾಡು ವಾಣಿ ಅವರಗೆ ಪ್ರಖ್ಯಾತಿ ತಂದುಕೊಟ್ಟಿತ್ತು. ಜೊತೆಗೆ ಪರಮಾತ್ಮ ಚಿತ್ರದ ಹೆಸರು ಪೂರ್ತಿ ಹೇಳದೆ… ಹಾಡು ಕೂಡ ಹಲವಾರು ಹೆಂಗಳೆಯರ ಮನಮುಟ್ಟುವಂತಿತ್ತು. ಆದರೆ ಅದ್ಯಾಕೋ ತಮ್ಮ ಸಾಮರ್ಥ್ಯಕ್ಕೆ ತಕ್ಕ ವೇದಿಕೆಗಳು, ಅವಕಾಶಗಳು ಸಿಕ್ಕಿಲ್ಲ ಎನ್ನುವ ಬೇಸರ ವಾಣಿ ಅವರಿಗಿದೆ. ಹೀಗಿರುವಾಗ ತಮ್ಮ ಪತಿ ಸಂಗೀತ ನಿರ್ದೇಶನ ನೀಡಿದ ಸಿನೆಮಾದಲ್ಲಿಯೇ ಕೊನೆಯ ಕ್ಷಣದ ಮಾಡಿರುವ ಬದಲಾವಣೆಯನ್ನು ಅವರು ಸಹಿಸಿಕೊಳ್ಳಲು ಆಗದೇ, ಅತೀ ಬೇಸರದಿಂದ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದು ನೋಡಿವುದಕ್ಕೆ ಸಿಲ್ಲಿ ವಿಷಯವೇ ಆಗಿದ್ದರು ಸಂಸಾರದ ನಾಲ್ಕು ಗೋಡೆಗಳ ನಡುವೆ ಕಿತ್ತಾಟಕ್ಕೆ ಕಾರಣವಾಗುವ ವಿಚಾರವಾಗಿದೆ. ಇನ್ನೂ ಈ ವಿಚಾರ ಕುರಿತು ತಮ್ಮ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸ್ಟಾರ್ ದಂಪತಿ ಬದುಕಿನಲ್ಲಿ ಬಿರುಗಾಳಿ ಏನಾದರು ಎದ್ದಿದೆಯಾ ಎಂಬ ಅನುಮಾನ ಶುರುವಾಗಿದೆ.

Comments are closed.