ಮನೋರಂಜನೆ

ಕೆಜಿಎಫ್-2 ನಂತರ ಮತ್ತೊಂದು ಸಿನೆಮಾಕ್ಕೆ ಸಿದ್ದರಾದ ಯಶ್..!

Pinterest LinkedIn Tumblr


ಕೆಜಿಎಫ್ ​..ರಾಕಿಂಗ್​ ಸ್ಟಾರ್ ಸಿನಿಕರಿಯರ್​ನಲ್ಲೇ ದೊಡ್ಡ ಮೈಲಿಗಲ್ಲಾದ ಸಿನಿಮಾ.. ಚಾಪ್ಟರ್ ಒನ್ ನಂತ್ರ ಚಾಪ್ಟರ್ 2ನಲ್ಲಿ ಬ್ಯುಸಿಯಾಗಿರೋ ಯಶ್, ತಮ್ಮ ಪೂರ್ತಿ ಟೈಮ್​ನ್ನ ಕೆಜಿಎಫ್​ಗಾಗೇ ಮೀಸಲಿಟ್ಟಿದ್ದಾರೆ.. ಆದ್ರೆ ಇದೇ ಗ್ಯಾಪ್​ನಲ್ಲಿ ಯಶ್ ಮುಂದಿನ ಸಿನಿಮಾ ಬಗ್ಗೆ ಚರ್ಚೆ ನಡೀತಾಯಿದೆ.. ಹಾಗಾದ್ರೆ ಯಶ್​ ಮುಂದಿನ ಪ್ರಾಜೆಕ್ಟ್ ಯಾವುದು..? ಈಗ ಕೇಳಿ ಬರ್ತಿರೋ ಸುದ್ದಿ ಎಷ್ಟು ನಿಜಾ..? ಎಷ್ಟು ಸುಳ್ಳು ಅನ್ನೋದು ಇಲ್ಲಿದೆ ಓದಿ..

ರಾಕಿಂಗ್​ ಸ್ಟಾರ್ ಯಶ್ ಸತತ 2 ವರ್ಷಗಳಿಂದ ಕೆಜಿಎಫ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಚಾಪ್ಟರ್ ಒನ್​ ಆಯ್ತು ಇದೀಗ ಚಾಪ್ಟರ್ 2 ​ನಲ್ಲಿ ನಿರತರಾಗಿದ್ದಾರೆ .. ಅಭಿಮಾನಿಗಳು ಕೂಡ ಕೆಜಿಎಫ್​ ಗುಂಗಿನಲ್ಲೇ ಇದ್ದಾರೆ.. ಕೆಜಿಎಫ್​ ನಂತ್ರ ನ್ಯಾಷನಲ್​ ಸ್ಟಾರ್ ಆಗಿರೋ ಯಶ್​ಗೆ ನಿರ್ದೇಶನ ಮಾಡೋಕ್ಕೆ ಬಿಗ್​ ಡೈರೆಕ್ಟರ್ಸ್​ ನಾ ಮುಂದು ತಾ ಮುಂದು ಅಂತಿದ್ದಾರೆ. ಆದ್ರೆ ಇದ್ರ ನಡುವೆ ಯಶ್ ಮುಂದಿನ ಪ್ರಾಜೆಕ್ಟ್​ ಬಗ್ಗೆ ಸುದ್ದಿಯೊಂದು ಹರಿದಾಡ್ತಿದೆ.. ಕೆಜಿಎಫ್​ ನಂತ್ರ ಯಶ್ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ದಟ್ಟವಾಗಿದೆ..

ಕೆಜಿಎಫ್​ ನಂತ್ರ ಯಶ್ ಮುಂದೆ ಯಾವುದೇ ಸಿನಿಮಾಗೇ ಗ್ರೀನ್​ ಸಿಗ್ನಲ್​ ಕೊಟ್ರು, ದೊಡ್ಡ ಮಟ್ಟದ ಎಕ್ಸ್​ಪೆಕ್ಟೇಶನ್​ ಇದ್ದೇ ಇರುತ್ತೆ.. ಕೆಜಿಎಫ್​​ನ ಮೀರಿದ ಚಿತ್ರವನ್ನೇ ಅಭಿಮಾನಿಗಳು ಕೂಡ ನಿರೀಕ್ಷಿಸ್ತಾರೆ.. ಅದಕ್ಕಾಗೇ ರಾಕಿಂಗ್​ ಸ್ಟಾರ್ ದೊಡ್ಡ ಚಿತ್ರವೊಂದಕ್ಕೆ ಸಹಿ ಮಾಡಲಿದ್ದಾರಂತೆ.. ಯಶ್ ಮುಂದಿನ ಸಿನಿಮಾ ಕೂಡ ಬಹುಭಾಷೆಗಳಲ್ಲಿ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದ್ದು, ತೆಲುಗಿನ ಸ್ಟಾರ್ ಡೈರೆಕ್ಟರ್ ಒಬ್ರು​ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ..

ತೆಲುಗು ಕನ್ನಡ, ತಮಿಳು ಸೇರಿದಂತೆ ಸಾಕಷ್ಟು ಸೂಪರ್​ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಡೈರೆಕ್ಟರ್ ಪೂರಿ ಜಗನ್ನಾಥ್​ ರಾಕಿಂಗ್​ ಸ್ಟಾರ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.. ಇಂಟ್ರೆಸ್ಟಿಂಗ್ ಅಂದ್ರೆ ಈ ಹಿಂದೆ ತೆಲುಗಿನಲ್ಲಿ ಪ್ರಿನ್ಸ್​ ಮಹೇಶ್​ ಬಾಬು ಕಾಂಬಿನೇಷನ್​ನಲ್ಲಿ ಪೋಕಿರಿ, ಬ್ಯುಸಿನೆಸ್ ಮ್ಯಾನ್​ ಸಿನಿಮಾ ಮಾಡಿದ್ದ ಪೂರಿ ಜಗನ್ನಾಥ್​ , ಪ್ರಿನ್ಸ್​ ಜೊತೆ ಹ್ಯಾಟ್ರಿಕ್ ಕಾಂಬೋ ನಲ್ಲಿ ಮತ್ತೊಂದು ಚಿತ್ರವನ್ನ ತೆರೆಗೆ ತರೋಕ್ಕೆ ಸಿದ್ದವಾಗಿದ್ರು.. ಚಿತ್ರಕ್ಕೆ ಜನಗಣಮನ ಅಂತ ಟೈಟಲ್​ ಕೂಡ ಫಿಕ್ಸ್ ಆಗಿತ್ತು.. ಆದ್ರೆ ಅದ್ಯಾಕೋ ಆ ಸಿನಿಮಾ ಸೆಟ್ಟೇರಲೇಯಿಲ್ಲ..

ಮಹೇಶ್ ಬಾಬು ಬದಲಾಗಿ ಯಶ್​ರನ್ನ ಹೀರೋ ಮಾಡಿ ಜನಗಣಮನ ಚಿತ್ರಕ್ಕೆ ಆ್ಯಕ್ಷನ್​​​ ಕಟ್​ ಹೇಳೋಕ್ಕೆ ಪೂರಿ ಜಗನ್ನಾಥ್ ಮುಂದಾಗಿದ್ಧಾರಂತೆ.. ಅದೇ ನಿಜವಾದ್ರೆ, ಜನಗಣಮನ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿ ಇತರೆ ಭಾಷೆಗಳಿಗೆ ಡಬ್​ ಆಗಲಿದೆ..

ದಕ್ಷಿಣ ಭಾರತದ ದೊಡ್ಡ ನಿರ್ಮಾಣ ಸಂಸ್ಥೆ ಪೂರಿ- ಯಶ್​ ಕ್ರೇಜಿ ಕಾಂಬಿನೇಷನ್​​ ಚಿತ್ರಕ್ಕೆ ಬಂಡವಾಳ ಹೂಡಲಿದ್ಯಂತೆ.. ಈಗಾಗ್ಲೇ ಈ ಬಗ್ಗೆ ಯಶ್​ ಜೊತೆ 2 ಸುತ್ತಿನ ಮಾತುಕತೆ ನಡೆದಿದೆ ಅನ್ನೋ ಸುದ್ದಿ ಹರಿದಾಡ್ತಿದ್ದು, ಇದು ಎಷ್ಟು ಸತ್ಯ , ಸುಳ್ಳು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.. ಸದ್ಯ ಯಶ್​ ಕೆಜಿಎಫ್​​ 2 ಮತ್ತು ಪೂರಿ ಇಸ್ಮಾರ್ಟ್​ ಶಂಕರ್​-2 ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ.. ಈ ಎರಡು ಸಿನಿಮಾಗಳ ನಂತ್ರ ಮುಂದಿನ ವರ್ಷ ಜನಗಣ ಮನ ಸಿನಿಮಾ ಸೆಟ್ಟೇರಿದ್ರೂ ಅಚ್ಚರಿ ಪಡ್ಬೇಕಿಲ್ಲ..

ಇನ್ನು ಫೂರಿ ಜಗನ್ನಾಥ್​ ಈಗಾಗ್ಲೇ ಕನ್ನಡದಲ್ಲಿ ಅಪ್ಪು, ಯುವರಾಜ, ರೋಗ್​ ಸಿನಿಮಾಗಳನ್ನ ಮಾಡಿದ್ದು, ಒಂದು ವೇಳೆ ಜನಗಣಮನ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಕಡೆಯಿಂದ ಗ್ರೀನ್​ ಸಿಗ್ನಲ್ ಸಿಕ್ರೆ, ಮತ್ತೊಮ್ಮೆ ಸ್ಯಾಂಡಲ್​ವುಡ್​ಗೆ ಕಡೆ ಮುಖ ಮಾಡಲಿದ್ದಾರೆ.. ದೇಶದಲ್ಲಿ ನಡೀತಿರೋ ಅತ್ಯಾಚಾರ, ಕೊಲೆ ಪ್ರಕರಣಗಳನ್ನ ಆಧರಿಸಿ, ಜನಗಣಮನ ಕಥೆ ಸಿದ್ಧವಾಗಿದ್ದು, ಯಶ್- ಪೂರಿ ಕಾಂಬೋ ವರ್ಕ್​​ಔಟ್​ ಆಗಿ ಕಂಟೆಂಟ್​​ ಪ್ರೇಕ್ಷಕರಿಗೆ ಕನೆಕ್ಟ್ ಆದ್ರೆ, ಬಾಕ್ಸಾಫೀಸ್​​ನಲ್ಲಿ ರೆಕಾರ್ಡ್ಸ್​​ ಬ್ರೇಕ್​ ಆಗೋದು ಗ್ಯಾರೆಂಟಿ.

Comments are closed.