ಸಮ್ಮಿಶ್ರ ಸರ್ಕಾರವನ್ನು ತಮ್ಮ ರಾಜಕೀಯ ರಣತಂತ್ರದಿಂದ ಉರುಳಿಸಿ ಅಧಿಕಾರ ಹಿಡಿದ ಖುಷಿಯಲ್ಲಿರೋ ಬಿಎಸ್ವೈಗೆ ಇದೀಗ ಸ್ವಪಕ್ಷಿಯರೇ ತಲೆನೋವಾಗಿ ಪರಿಣಮಿಸಿದ್ದಾರೆ. ಹೌದು ಅಧಿಕಾರ ವಹಿಸಿಕೊಂಡ ಐದೇ ದಿನದಲ್ಲಿ ಬಿಎಸ್ವೈಗೆ ಸಂಕಷ್ಟ ಎದುರಾಗಿದ್ದು, ಶಾಸಕರು ಮಂತ್ರಿ ಸ್ಥಾನ ನೀಡದಿದ್ದರೇ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.
ಬಿಜೆಪಿಯ 10 ಹಿರಿಯ ಶಾಸಕರು ಬಿಎಸ್ವೈಗೆ ಬಹಿರಂಗವಾಗಿಯೇ ಬೆದರಿಕೆ ಒಡ್ಡಿದ್ದು, ಮಂತ್ರಿ ಸ್ಥಾನ ನೀಡದಿದ್ದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬಿಎಸ್ವೈ ಸಂಕಷ್ಟಕ್ಕೆ ಸಿಲುಕಿದ್ದು, ಸಚಿವ ಸಂಪುಟ ವಿಸ್ತರಣೆ ಮಾಡಲಾಗದೆ ಪರದಾಡುತ್ತಿದ್ದಾರೆ.
ಈ ಮಧ್ಯೆ ಬಿಜೆಪಿಯ ಇಬ್ಬರು ಶಾಸಕರು ಸಂಜೆ 4 ಗಂಟೆಗೆ ಎಚ್ಡಿಕೆಯವರನ್ನು ಭೇಟಿ ಮಾಡಿದ್ದು, ಗಂಟೆಗಳ ಕಾಲ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಬಿಎಸ್ವೈ ಇನ್ನಷ್ಟು ಆತಂಕಕ್ಕಿಡಾಗಿದ್ದಾರೆ. ಇದುವರೆಗೂ ಶುಕ್ರವಾರ ಅಥವಾ ಶನಿವಾರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎನ್ನಲಾಗಿತ್ತು.
ಆದರೆ ಇದೀಗ ಹಿರಿಯ ಶಾಸಕರ ಬ್ಲ್ಯಾಕ್ಮೇಲ್ನಿಂದ ಬಿಎಸ್ವೈ ಕಂಗಾಲಾಗಿದ್ದು, ಯಾವ ರೀತಿ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ? ಯಾರ್ಯಾರಿಗೆ ಸಂಪುಟದಲ್ಲಿ ಸ್ಥಾನಸಿಗಲಿದೆ. ಸ್ಥಾನ ವಂಚಿತರಾದ್ರೇ ಶಾಸಕರು ಏನು ಮಾಡ್ತಾರೆ ಎಂಬೆಲ್ಲ ಪ್ರಶ್ನೆಗಳು ಕುತೂಹಲ ಮೂಡಿಸಿದೆ.
Comments are closed.