ಕರ್ನಾಟಕ

ಬಿಜೆಪಿಯಲ್ಲೂ ಸಚಿವ ಸ್ಥಾನಕ್ಕಾಗಿ ಶಾಸಕರಿಂದ ಬ್ಲಾಕ್​ಮೇಲ್​​!!

Pinterest LinkedIn Tumblr


ಸಮ್ಮಿಶ್ರ ಸರ್ಕಾರವನ್ನು ತಮ್ಮ ರಾಜಕೀಯ ರಣತಂತ್ರದಿಂದ ಉರುಳಿಸಿ ಅಧಿಕಾರ ಹಿಡಿದ ಖುಷಿಯಲ್ಲಿರೋ ಬಿಎಸ್​ವೈಗೆ ಇದೀಗ ಸ್ವಪಕ್ಷಿಯರೇ ತಲೆನೋವಾಗಿ ಪರಿಣಮಿಸಿದ್ದಾರೆ. ಹೌದು ಅಧಿಕಾರ ವಹಿಸಿಕೊಂಡ ಐದೇ ದಿನದಲ್ಲಿ ಬಿಎಸ್​ವೈಗೆ ಸಂಕಷ್ಟ ಎದುರಾಗಿದ್ದು, ಶಾಸಕರು ಮಂತ್ರಿ ಸ್ಥಾನ ನೀಡದಿದ್ದರೇ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.

ಬಿಜೆಪಿಯ 10 ಹಿರಿಯ ಶಾಸಕರು ಬಿಎಸ್​ವೈಗೆ ಬಹಿರಂಗವಾಗಿಯೇ ಬೆದರಿಕೆ ಒಡ್ಡಿದ್ದು, ಮಂತ್ರಿ ಸ್ಥಾನ ನೀಡದಿದ್ದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬಿಎಸ್​ವೈ ಸಂಕಷ್ಟಕ್ಕೆ ಸಿಲುಕಿದ್ದು, ಸಚಿವ ಸಂಪುಟ ವಿಸ್ತರಣೆ ಮಾಡಲಾಗದೆ ಪರದಾಡುತ್ತಿದ್ದಾರೆ.

ಈ ಮಧ್ಯೆ ಬಿಜೆಪಿಯ ಇಬ್ಬರು ಶಾಸಕರು ಸಂಜೆ 4 ಗಂಟೆಗೆ ಎಚ್​ಡಿಕೆಯವರನ್ನು ಭೇಟಿ ಮಾಡಿದ್ದು, ಗಂಟೆಗಳ ಕಾಲ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಬಿಎಸ್​ವೈ ಇನ್ನಷ್ಟು ಆತಂಕಕ್ಕಿಡಾಗಿದ್ದಾರೆ. ಇದುವರೆಗೂ ಶುಕ್ರವಾರ ಅಥವಾ ಶನಿವಾರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎನ್ನಲಾಗಿತ್ತು.

ಆದರೆ ಇದೀಗ ಹಿರಿಯ ಶಾಸಕರ ಬ್ಲ್ಯಾಕ್​ಮೇಲ್​​ನಿಂದ ಬಿಎಸ್​ವೈ ಕಂಗಾಲಾಗಿದ್ದು, ಯಾವ ರೀತಿ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ? ಯಾರ್ಯಾರಿಗೆ ಸಂಪುಟದಲ್ಲಿ ಸ್ಥಾನಸಿಗಲಿದೆ. ಸ್ಥಾನ ವಂಚಿತರಾದ್ರೇ ಶಾಸಕರು ಏನು ಮಾಡ್ತಾರೆ ಎಂಬೆಲ್ಲ ಪ್ರಶ್ನೆಗಳು ಕುತೂಹಲ ಮೂಡಿಸಿದೆ.

Comments are closed.